tag:blogger.com,1999:blog-26471294517798129992024-03-13T06:57:02.957-07:00ಬಸವ ಮಾರ್ಗಬಸವಣ್ಣನವರ ಮಾರ್ಗ ಎಂದರೆ ಬಹಳಷ್ಟು ಜನರು ಭಾವಿಸುವಂತೆ ಸರಳವಾದ ಮಾರ್ಗವಲ್ಲ. ಶರಣರು ಒಂದು ಕಡೆ ಹೇಳುವಂತೆ ಭಕ್ತಿಯ ಮಾಡಬಾರದು ಅದು ಹೋಗುತ್ತ ಕ್ಯೋಯ್ಯುತ್ತದೆ ಬರುತ್ತ ಕೋಯ್ಯುತ್ತದೆ ಎನ್ನುವಂತೆ ಬಸವಣ್ಣನವರ ಹಾದಿ. ಸದುವಿನ,ಪ್ರೇಮ,ಪ್ರೀತಿಯ ಜೊತೆ ಜೊತೆಗೆ ನಿಷ್ಠುರವಾದ ಗುಣಗಳನ್ನು ಅದು ಕಲಿಸುತ್ತದೆ. ದುಡಿದು ಬದುಕಲು ಹಾಗೂ ದುಡಿತದಿಂದ ಬಂದ ಹಣದಲ್ಲಿ ದಾಸೋಹ ಮಾಡುವುದನ್ನೂ ಬಸವ ಮಾರ್ಗ ಕಲಿಸುತ್ತದೆ.Unknownnoreply@blogger.comBlogger14125tag:blogger.com,1999:blog-2647129451779812999.post-70090174136230209702017-09-15T00:52:00.001-07:002017-09-15T00:52:24.986-07:00Kaasi Kammaara naada (ಕಾಸಿ ಕಮ್ಮಾರನಾದ) -- Basavanna Vachana -- Pt Venkate...<iframe allowfullscreen="" frameborder="0" height="270" src="https://www.youtube.com/embed/9uqsBlp_3uE" width="480"></iframe>Unknownnoreply@blogger.com0tag:blogger.com,1999:blog-2647129451779812999.post-84345771850264007872017-09-15T00:36:00.001-07:002017-09-15T00:36:21.847-07:00BASAVANNA VACHANAGALU RUPAK NIMMA SHARANARIGE SHRANU.mpg<iframe allowfullscreen="" frameborder="0" height="344" src="https://www.youtube.com/embed/0qa_-i8oDcM" width="459"></iframe>Unknownnoreply@blogger.com0tag:blogger.com,1999:blog-2647129451779812999.post-44065924393640326362014-06-06T06:30:00.001-07:002014-06-06T06:30:10.918-07:00kalyanada anna basavanna<a href="http://vocaroo.com/i/s15VdhhIkgXf">Vocaroo Voice Message</a>Unknownnoreply@blogger.com0tag:blogger.com,1999:blog-2647129451779812999.post-54820868788981953622014-05-30T23:24:00.001-07:002014-05-30T23:24:18.133-07:00kallu kattige Maninalli DSCN0276<iframe allowfullscreen="" frameborder="0" height="270" src="//www.youtube.com/embed/xnqDtJb9sbg" width="480"></iframe>Unknownnoreply@blogger.com0tag:blogger.com,1999:blog-2647129451779812999.post-39104153239099181522014-04-23T21:46:00.001-07:002014-04-23T21:46:42.211-07:00basavastkam - sayampet<a href="http://vocaroo.com/i/s1Gw3bH3n3f8">Vocaroo Voice Message</a>Unknownnoreply@blogger.com0tag:blogger.com,1999:blog-2647129451779812999.post-34013172275422463772011-07-10T01:12:00.003-07:002011-07-10T01:19:50.157-07:00ಬಸವ ತತ್ವದ ದಂಡನಾಯಕರು : ಇಳಕಲ್ಲಿನ ಶ್ರೀ ಮಹಾಂತಶಿವಯೋಗಿಗಳು<a onblur="try {parent.deselectBloggerImageGracefully();} catch(e) {}" href="http://4.bp.blogspot.com/-xjUoj6MwlbI/ThlfaWp3ZqI/AAAAAAAAAEM/YIaTOQP_euA/s1600/22902660%255B1%255D.jpg"><img style="float:left; margin:0 10px 10px 0;cursor:pointer; cursor:hand;width: 64px; height: 80px;" src="http://4.bp.blogspot.com/-xjUoj6MwlbI/ThlfaWp3ZqI/AAAAAAAAAEM/YIaTOQP_euA/s320/22902660%255B1%255D.jpg" border="0" alt=""id="BLOGGER_PHOTO_ID_5627634115738560162" /></a><br />ಕಲ್ಯಾಣ ನಾಡಿನ ಶರಣ ಸಮ್ಮೇಳನದ ವೇದಿಕೆಯ. ಮೇಲೆ ಚಿತ್ರದುರ್ಗದ ಇಂದಿನ ಡಾ.ಶಿವಮೂರ್ತಿ ಶರಣರು, ಇಳಕಲ್ಲಿನ ಚಿತ್ತರಗಿ ಮಹಾಂತಶಿವಯೋಗಿಗಳು, ಭಾಲ್ಕಿಯ ಶ್ರೀ ಚೆನ್ನಬಸವ ಪಟ್ಟದ್ದೇವರು, ಹುಲಸೂರಿನ ಭಾತಂಬ್ರದ ಸ್ವಾಮಿಗಳಲ್ಲದೆ ಹಲವಾರು ಜನ ಮಠಾಧೀಶರುಗಳು ; ಸ್ವಾಮಿ ಅಗ್ನಿವೇಶ್, ಸಮ್ಮೇಳನಾಧ್ಯಕ್ಷರಾದ ಶ್ರೀ ಸಿದ್ಧಲಿಂಗಯ್ಯ ಮುಂತಾದ ವಿಚಾರವಾದಿಗಳು ಕುಳಿತುಕೊಂಡಿದ್ದರು. ರಾಮವಿಲಾಸ್ ಪಾಸ್ವಾನ್ ಎಂಬ ಮಾಜಿ ಕೇಂದ್ರ ಸಚಿವರು ಬಸವಣ್ಣನವರನ್ನು ಕುರಿತು ಓತಪ್ರೋತವಾಗಿ ಮಾತನಾಡುತ್ತಿದ್ದರು. ಕಲ್ಯಾಣ ಕ್ರಾಂತಿಯ ಆ ದಿನಗಳನ್ನು ನೆನಪಿಸುತ್ತ ಸಭೆಗೆ ಸಭೆಯನ್ನೆ ಮಂತ್ರಮುಗ್ಧವಾಗುವಂತೆ ಮಾಡಿದರು. ಬಸವಾದಿ ಶರಣರ ವಿಚಾರಗಳನ್ನು ರಾಮವಿಲಾಸ್ ಪಾಸ್ವಾನ್ ಎಷ್ಟು ಚೆನ್ನಾಗಿ ಓದಿ, ಅರ್ಥೈಸಿಕೊಂಡಿದ್ದಾರಲ್ಲ ! ಎಂದು ಅಲ್ಲಿರುವ ಎಲ್ಲರೂ ಬೆರಗುಗೊಂಡಿದ್ದರು. ಒಡನೆಯೆ ಅದೇನನ್ನಿಸಿತೋ, ”ಬಸವಣ್ಣನವರ ಅನುಯಾಯಿಗಳೆಂದು ಹೆಮ್ಮೆಯಿಂದ ಹೇಳಿಕೊಳ್ಳುವ ಯಾರೂ ಇಂದಿಗೂ ಬಸವಣ್ಣನವರಂತೆ ನಡೆದುಕೊಂಡಿಲ್ಲ. ಸ್ವಾಮಿ, ಜಗದ್ಗುರುಗಳೆಂಬುವವರಂತೂ ಶರಣರ ಜೀವನದ ಬಹುಮುಖ್ಯ ದ್ರವ್ಯವಾದ ಅಸ್ಪೃಶ್ಯತೆಯನ್ನು ತಮ್ಮ ಮಠಗಳಲ್ಲಿ ಇನ್ನೂ ಉಳಿಸಿಕೊಂಡು ಬಂದಿದ್ದಾರೆ” ಎಂದು ನೇರವಾಗಿ ಸ್ವಾಮಿಗಳನ್ನು ತರಾಟೆಗೆ ತೆಗೆದುಕೊಂಡರು. <br />ವೇದಿಕೆಯ ಮೇಲೆ ಆಸೀನರಾಗಿರುವ ಮಠಾಧೀಶರನ್ನು ನೋಡುತ್ತ : ”ಬಸವಣ್ಣನವರ ಆದರ್ಶಗಳನ್ನು ಇಂಥ ಸಭೆಗಳ ಮೂಲಕ ಪುಂಖಾನುಪುಂಖವಾಗಿ ಹೇಳುತ್ತಿರಲ್ಲ, ನೀವು ಎಂದಾದರೂ ನಿಮ್ಮ ಮಠಗಳಿಗೆ ಉತ್ತರಾಧಿಕಾರಿಯಾಗಿ ದಲಿತ ಮೂಲದ ವ್ಯಕ್ತಿಯನ್ನು ಆಯ್ಕೆ ಮಾಡಿದ್ದೀರಾ? ಹೋಗಲಿ, ಇನ್ನು ಮುಂದಾದರೂ ನೀವು ನಿಮ್ಮ ಪೀಠಗಳಿಗೆ ದಲಿತರನ್ನು ನೇಮಿಸಿಕೊಳ್ಳುತ್ತೀರಾ?” ಎಂದು ನೇರವಾಗಿ ಪ್ರಶ್ನಿಸಿದರು. ಅದುವರೆಗೆ ಮಹಾಜನ್ ಅವರ ಮಾತುಗಳನ್ನು ಕೇಳುತ್ತ ಆನಂದ ತುಂದಿಲರಾಗಿದ್ದ ಬಹುತೇಕ ಲಿಂಗಾಯತ ಮಠಾಧೀಶರ ಮುಖಗಳು ಒಮ್ಮಿದೊಮ್ಮೆ ಕಳಾಹೀನವಾದವು. ಒಬ್ಬರ ಮುಖ ಒಬ್ಬರು ಮಿಕಿಮಿಕಿ ನೋಡುತ್ತ ಅನಿರೀಕ್ಷಿತವಾಗಿ ಬಂದ ಪಾಸ್ವಾನ್ ಮಾತುಗಳು ಅವರನ್ನು ಇಕ್ಕಟ್ಟಿಗೆ ಸಿಕ್ಕಿಸಿದ್ದವು. ಅಲ್ಲಿ ಸೇರಿದ್ದ ಜನವಂತೂ ಉಸಿರನ್ನು ಬಿಗಿಹಿಡಿದು ಮುಂದೆ ಸಭೆ ಯಾವುದರ ಕಡೆ ತಿರುಗಬಹುದು ? ಎಂಬ ಕುತೂಹಲದಿಂದ ಕಾದುಕುಳಿತಿದ್ದರು.<br />ದಟ್ಟವಾದ ಆತಂಕ ಹಾಗೂ ನಿಶಬ್ದವನ್ನು ಸೀಳಿ ಬಂದಂತೆ ಇಳಕಲ್ಲಿನ ಮಹಾಂತಶಿವಯೋಗಿಗಳು ಎದ್ದು ನಿಂತರು. ”ನಮ್ಮ ಚಿತ್ತರಗಿ ಇಳಕಲ್ಲಿನ ಪೀಠಕ್ಕೆ ದಲಿತ ಮೂಲದ ಬಸವಾಯತನನ್ನು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡುತ್ತೇವೆ” ಎಂಬ ಭರವಸೆ ನೀಡಿದರು. ಆಗ ಸಭೆಯಲ್ಲಿ ನೆರೆದಿದ್ದ ಬಸವಣ್ಣನವರ ಅನುಯಾಯಿಗಳು ಅತ್ಯಂತ ಖುಷಿಯಿಂದ ಚಪ್ಪಾಳೆ ತಟ್ಟಿದರು. ಮಹಾಜನ್ ಅವರಂತೂ ಹೆಚ್ಚು ಖುಷಿಗೊಂಡು ಇಳಕಲ್ಲಿನ ಮಹಾಂತಸ್ವಾಮಿಗಳನ್ನು ಅಭಿನಂದಿಸಿದರು. <br />ಹನ್ನೆರಡನೆಯ ಶತಮಾನದಲ್ಲಿ ’ಶೀಲವಂತ’ ಹಾಗೂ ’ಲಾವಣ್ಯಮ್ಮರ ವಿವಾಹವನ್ನು ಅರಗಿಸಿಕೊಳ್ಳದ ಅಂದಿನ ಸಮಾಜ ಕ್ಷಿಪ್ರ ಕ್ರಾಂತಿಗೆ ಗುರಿಯಾಗಿತ್ತು. ಹರಳಯ್ಯ ಹಾಗೂ ಮಧುವರಸರ ಕುಟುಂಬಗಳ ಸದಸ್ಯರು ಎಳೆಹೂಟಿಯಂತಹ ಬರ್ಬರ ಶಿಕ್ಷೆಗೆ ಗುರಿಯಾದ ಸಂಗತಿ ಇತಿಹಾಸ ಸ್ಪಷ್ಟವಾಗಿ ಹೇಳುತ್ತಿತ್ತು. ಶರಣರ ವಿಚಾರಗಳು ಎಷ್ಟೆ ಪ್ರಗತಿಪರವಾಗಿದ್ದರೂ, ಸಮಾಜ ಮುಖಿಯಾಗಿದ್ದರೂ, ವಚನ ಸಾಹಿತ್ಯವನ್ನು ಎಷ್ಟೇ ಕೊಂಡಾಡಿದರೂ ಇವತ್ತಿಗೂ ದಲಿತ ಮೂಲದ ಯಾವೊಬ್ಬ ವ್ಯಕ್ತಿಯನ್ನು ಮಠಾಧೀಶನನ್ನಾಗಿ ನೇಮಿಸಿದ್ದು ಇರಲಿಲ್ಲ. ಇಂಥ ವಾಸ್ತವ ಸಂದರ್ಭದಲ್ಲಿ ಇಳಕಲ್ಲಿನ ಶ್ರೀಗಳು ಬಹಿರಂಗಸಭೆಯಲ್ಲಿ ಆಡಿದ ಮಾತುಗಳು ಸಮಾಜದಲ್ಲಿ ಅಲ್ಲೊಲ ಕಲ್ಲೊಲ ಉಂಟು ಮಾಡಿದವು. ಜಾತಿ ಜಂಗಮರಿಂದ ತುಂಬಿ ತುಳುಕುತ್ತಿರುವ ಲಿಂಗಾಯತ ಮಠಾಧಿಪತಿಗಳು ಇಳಕಲ್ ಶ್ರೀಗಳ ಮಾತುಗಳಿಂದ ಒಳಗೊಳಗೆ ಉರಿದೆದ್ದರು. <br />’ಭಕ್ತಿ ಶುಭಾಷಯ ನುಡಿಯ ನುಡಿವೆ, ನುಡಿದಂತೆ ನಡೆವೆ<br />ನಡೆಯೊಳಗೆ ನುಡಿಯ ಪೂರೈಸುವೆ<br />ಮೇಲೆ ತೂಗುವ ತ್ರಾಸ ಕಟ್ಟಳೆ ನಿಮ್ಮ ಕೈಯ್ಯಲ್ಲಿದೆ<br />ಒಂದು ಜವೆ ಕೊರತೆಯಾದಡೆ ಎನ್ನನದ್ದಿ ನೀ ಎದ್ದು ಹೋಗು’<br />ಎಂಬ ಬಸವಣ್ಣನವರ ಮಾತಿನಂತೆ ಇಳಕಲ್ಲಿನ ಶ್ರೀಗಳು ತಮ್ಮ ಮಾತಿಗೆ ಬದ್ಧರಾಗಿದ್ದರು. ಅವರಿಗೆ ಆಗ ರಾಜ್ಯದ ರಾಷ್ಟ್ರದ ಹಲವಾರು ಜನ ರಾಜಕಾರಣಿಗಳಿಂದ, ಪ್ರಭಾವಿ ವ್ಯಕ್ತಿಗಳಿಂದ ಹೇಳಿಸಿ ನೋಡಿದರು. ತಮ್ಮ ಅಭಿಪ್ರಾಯವನ್ನು ಬದಲಾಯಿಸುವಂತೆ ಒತ್ತಾಯಿಸಿದರು. ಕೆಲವರು ಬೆದರಿಕೆಯನ್ನು ಒಡ್ಡಿದರು. ಆದರೆ ’ನ್ಯಾಯ ನಿಷ್ಠುರಿ ಶರಣ ದಾಕ್ಷಿಣ್ಯ ಪರನಲ್ಲ. ಲೋಕವಿರೋಧಿ ಶರಣ ಯಾರಿಗೂ ಅಂಜಲಾರ’ ಎಂಬಂತೆ ಇಳಕಲ್ಲಿನ ಶ್ರೀಗಳು ನಡೆದು ಹೋದರು. ಮೊಟ್ಟ ಮೊದಲನೆಯದಾಗಿ ತಮ್ಮ ಇಳಕಲ್ಲಿನ ಶಾಖಾ ಮಠವಾದ ಸಿದ್ಧಯ್ಯನ ಕೋಟೆಗೆ ದಲಿತ ಮೂಲದ ಬಸವಾಯತರಾದ ಶ್ರೀ ಬಸವಲಿಂಗ ಸ್ವಾಮಿಗಳನ್ನು ನೇಮಿಸಿ ತಮ್ಮ ಬಸವತನವನ್ನು ಉಳಿಸಿಕೊಂಡರು.<br />ಇದಿಷ್ಟೆ ಅಲ್ಲದೆ ಲಿಂಗಸೂಗೂರಿನ ತಮ್ಮ ಮಹಾಂತ ಮಠಕ್ಕೂ ಬಂಜಾರ ಸಮುದಾಯದ ಶ್ರೀ ಸಿದ್ದಲಿಂಗ ಶರಣನನ್ನು ನೇಮಿಸಿ ಮತ್ತದೆ ಕರ್ಮಠ ಲಿಂಗಾಯತರ ರಗಳೆ ಮೈಮೇಲೆ ಎಳಕೊಂಡರು. ಈ ಮೊದಲಿದ್ದ ಮಹಾಂತಪ್ಪಗಳ ಮಠವನ್ನೆ ಕುಯುಕ್ತಿಯಿಂದ ಅಲ್ಲಿನ ಜಾತಿ ಜಂಗಮವರು ಕಸಗೊಂಡರು. ಆದರೆ ಅಲ್ಲಿರುವ ಶರಣ ಭಕ್ತರ ನೆರವಿನೊಂದಿಗೆ ಮಹಾಂತ ಶಿವಯೋಗಿಗಳ ಶಾಖಾ ಮಠವನ್ನು ಕಟ್ಟಿ ತೋರಿಸಿ, ಜನ ಮಾನಸದಲ್ಲಿ ಹೊಸ ಹುಟ್ಟನ್ನು ಹುರುಪನ್ನು ತುಂಬಿದರು.<br />ಇಳಕಲ್ಲಿನ ತಮ್ಮ ಮೂಲ ಪರಂಪರೆಯ ಪೀಠಕ್ಕೂ ಮೈಸೂರಿನ ಶ್ರೀ ಸಿದ್ಧರಾಮ ಸ್ವಾಮಿಗಳನ್ನು ಪಟ್ಟಗಟ್ಟುವಾಗ ಜಾತಿ ಜಂಗಮರ ಭಾರಿ ವಿರೋಧ ಎದುರಿಸಬೇಕಾಯಿತು. ಪಟ್ಟಾಧಿಕಾರದ ಸಂದರ್ಭದಲ್ಲಿ ವೇದಿಕೆಯ ಕಡೆಗೆ ಕಲ್ಲು ತೂರಿದರು. ವಿರೋಧಿ ಘೋಷಣೆ ಕೂಗಿದರು. ಇಡೀ ಕಾರ್ಯಕ್ರಮವನ್ನು ರಣಾಂಗಣವಾಗುವಂತೆ ವ್ಯವಸ್ಥಿತ ಪಿತೂರಿ ಕೈಗೊಂಡರು. ಆದರೂ ಮಹಾಂತಪ್ಪಗಳು ತಾವು ಕೈಕೊಂಡ ಬಸವ ಪರಂಪರೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡಿದರು. <br />ಶರಣತನ ಅನ್ನುವುದು ನಿಜಕ್ಕೂ ಕಠಿಣ. ’ಅದು ಭಕ್ತಿಯಂತೆ ಹೋಗುತ್ತ ಬರುತ್ತ ಕೊಯ್ಯುವ ಗರಗಸ’. ಆದರೆ ಇಳಕಲ್ಲಿನ ಪೂಜ್ಯ ಶ್ರೀ ಮಹಾಂತಶಿವಯೋಗಿಗಳು ಮಾತ್ರ ಅದನ್ನು ತಮ್ಮ ಮಠಗಳಲ್ಲಿ ಹಾಗೂ ನಡೆಗಳಲ್ಲಿ ಅನುಚಾನವಾಗಿ ಹಾಸಿ ಹೊದ್ದುಕೊಂಡು ನಡೆದಿದ್ದಾರೆ. ’ಕಲ್ಲು ದೇವರು ದೇವರಲ್ಲ, ಮಣ್ಣು ದೇವರು ದೇವರಲ್ಲ ಎಂದು ಸಭೆಗಳಲ್ಲಿ ಹೇಳಿ ಅಲ್ಲಿ ಸೇರಿದ ಜನರಿಂದ ಚಪ್ಪಾಳೆ ಗಿಟ್ಟಿಸುವುದು ಸುಲಭ. ಆದರೆ ಅದನ್ನು ಕಾರ್ಯರೂಪಕ್ಕೆ ತರಬೇಕಾದಾಗ ಉಂಟಾಗುವ ಅಡ್ಡಿ ಆತಂಕಗಳು, ತಲ್ಲಣಗಳು ನೂರಾರು. ಇಳಕಲ್ಲಿನ ಮಹಾಂತ ಅಪ್ಪಗಳು ಯಾರ ಮನೆಗೆ ಹೋಗಲಿ ಸೀದಾ ಅವರ ಮನೆಯ ದೇವರ ಮನೆಗೆ ಕಾಲಿಕ್ಕಿ, ಆ ಜಗುಲಿಯ ಮೇಲೆ ಇರುವ ಹತ್ತಾರು ದೇವರುಗಳನ್ನು ತಮ್ಮ ಜೋಳಿಗೆಗೆ ಹಾಕಿಕೊಂಡು ಊರ ಹೊರಗೆ ಒಯ್ದು ಬಿಸಾಡುವರು. ಮನೆಯ ಮಂದಿಯನ್ನೆಲ್ಲ ಒಂದೆಡೆ ಕುಳ್ಳಿರಿಸಿಕೊಂಡು <br />’ಅರಗು ತಿಂದು ಕರಗುವ ದೈವವ<br />ಉರಿಯ ಕಂಡರೆ ಮುರುಟುವ ದೈವವ<br />ಅಂಜಿಕೆಯಾದಡೆ ಹೂಳುವ ದೈವವ<br />ಅವಸರಬಂದರೆ ಮಾರುವ ದೈವವ <br />ಎಂತು ಸರಿಯೆಂಬೆನಯ್ಯ?’<br />ಎಂದು ಬಸವಾದಿ ಶರಣರ ವಚನಗಳನ್ನು ಮನಂಬುಗುವಂತೆ ವಿವರಿಸಿ ಹೇಳುತ್ತಾರೆ. ’ಸತ್ಯ ಶುದ್ಧ ಕಾಯಕ ಮಾಡಿದಡೆ ಎತ್ತೆತ್ತ ನೋಡಿದಡತ್ತತ್ತ ಲಕ್ಷ್ಮಿ ತಾನಾಗಿಪ್ಪಳು’ ಎಂದು ತಿಳಿಹೇಳುತ್ತಾರೆ. ”ನೀವು ಪೂಜಿಸುವ ಕರಿಲಕ್ಷ್ಮಿ- ಕೆಂಪು ಲಕ್ಷ್ಮಿ ಚಿತ್ರವನ್ನು ರೇಖಿಸಿರುವ ಕಲಾವಿದನ ಹೆಂಡತಿಯೋ, ಪ್ರೇಯಸಿಯೋ ! ಮಗಳೋ ಆಗಿದ್ದಾಳೆ”. ಆದ್ದರಿಂದ ಅರ್ಥವಿಲ್ಲದ ಇಂಥ ದೇವರುಗಳನ್ನು ಪೂಜಿಸಲೇ ಬಾರದು. ಅಪ್ಪ ಬಸವಣ್ಣನವರು ಕೊಟ್ಟ <br />’ಜಗದಗಲ ಮುಗಿಲಗಲ<br />ಮಿಗೆಯಗಲ ನಿಮ್ಮಗಲ<br />ಪಾತಾಳದಿಂದತ್ತತ್ತ ನಿಮ್ಮ ಶ್ರೀ ಚರಣ ನಿಮ್ಮ ಶ್ರೀಮಕುಟ<br />ಅಗಮ್ಯ ಅಗೋಚರ ಅಪ್ರತೀಯ<br />ಲಿಂಗವೇ ನೀವೆನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯ<br />ಎಂದು ಹೇಳಿರುವ ’ಇಷ್ಟಲಿಂಗ’ವನ್ನು ಪೂಜಿಸಬೇಕು ಎಂದು ಹೇಳುತ್ತಾರೆ. ’ಬಾರದು ಬಪ್ಪದು. ಬಪ್ಪದು ತಪ್ಪದು’ ಎಂದು ಅವರೆಲ್ಲರ ಮನಸ್ಸಿನ ಕತ್ತಲೆಯನ್ನು ’ವಚನ ದೀಪ್ತಿ’ಯ ಮೂಲಕ ಬೆಳಗಿಸುತ್ತಾರೆ. ಇಷ್ಟಾಗಿಯೂ ’ನಿಮ್ಮ ಮನೆಯ ದೇವರುಗಳು ನಿಮ್ಮನ್ನು ಕಾಡಲು ಪೀಡಲು ಶುರುಮಾಡಿದರೆ ಅವುಗಳಿಗೆಲ್ಲ ನನ್ನ ಅಡ್ರೆಸ್ ಕೊಡಿ. ಅವು ನನ್ನೊಂದಿಗೆ ಬಂದು ಗುದ್ದಾಡಲಿ’, ಎಂದು ಹಾಸ್ಯಮಯವಾಗಿ ಮಾತನಾಡುತ್ತ ಭಕ್ತನ ’ಭಯ’ವನ್ನು ಕಿತ್ತಿ ಬಿಸುಡುತ್ತಾರೆ.<br />ಬಸವಾದಿ ಶರಣರ ವಿಚಾರಗಳನ್ನು ಕರ್ನಾಟಕದ ಬಹುತೇಕ ಮಠಗಳು ತಮ್ಮ ಆಸ್ತಿಯನ್ನಾಗಿ ಮಾಡಿಕೊಂಡು ಲಿಂಗಾಯತರನ್ನು ದಿಶಾಬೂಲಗೊಳಿಸುತ್ತ ಹೊರಟಿದ್ದರೆ ಇಳಕಲ್ಲಿನ ಶ್ರೀಗಳು ಮಾತ್ರ ಅವನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆಯುತ್ತಿದ್ದಾರೆ. ಹೀಗಾಗಿ ಶ್ರೀಗಳ ಮಾತು, ನಡೆ ನುಡಿ ಭಾವಗಳೆಲ್ಲವೂ ’ಪರುಷ ’ ಎಂದರೆ ತಪ್ಪಾಗಲಾರದು.<br />ಉತ್ತರ ಕರ್ನಾಟಕದಲ್ಲಿ ಬಹಳಷ್ಟು ಜನ ಭಕ್ತರು ತಮ್ಮ ಭಕ್ತಿಯ ಪರಾಕಾಷ್ಠೆಯನ್ನು ಮೆರೆಯಲು ತಮ್ಮ ಊರಿನಿಂದ ದೊಡ್ಡ ದೊಡ್ಡ ಮಠಗಳಿಗೆ, ದೇವಸ್ಥಾನಗಳಿಗೆ ಪಾದಯಾತ್ರೆ ಹೊರಡುತ್ತಾರೆ. ದಾರಿ ಉದ್ದಕ್ಕೂ ಭಜನೆ ಮಾಡುತ್ತ, ಊರೂರುಗಳಲ್ಲಿ ಪ್ರಸಾದ ಸ್ವೀಕರಿಸಿ ಮುನ್ನಡೆಯುತ್ತಾರೆ. ಪ್ರಚಾರ ಗಿಟ್ಟಿಸುತ್ತಾರೆ. ವರ್ಷಕ್ಕೊಂದು ಸಲ ದೇವರ ಹೆಸರಿನ ಮೇಲೆ ಪಾದಯಾತ್ರೆಯ ಮಜಾ ಅನುಭವಿಸಿ ಖುಷಿ ಪಡುತ್ತಾರೆ. ಇಂಥ ಪಾದಯಾತ್ರೆಗಳನ್ನು ಹಮ್ಮಿಕೊಳ್ಳುವುದು ಕೇವಲ ಭಕ್ತರಿಗೆ ಮಾತ್ರ ಸಂಬಂಧಿಸಿದ ಕೆಲಸ ಎಂದು ಬಹಳಷ್ಟು ಜನ ಮಠಾಧೀಶರು ತಿಳಿದುಕೊಂಡಿದ್ದಾರೆ. ಆದರೆ ಮಹಾಂತಪ್ಪಗಳು ಮಾತ್ರ ’ಭಕ್ತನಿದ್ದ ಠಾವೆ ಕೈಲಾಸ’ , ’ಭಕ್ತನ ಮನೆಯಂಗಳವೆ ವಾರಣಾಸಿ’ ಎಂದು ಅರ್ಥೈಸಿಕೊಂಡಿದ್ದರಿಂದ ಇವರು ಹಲವಾರು ಸಲ ಭಕ್ತನ ಮನೆಗಳಿಗೆ ಪಾದಯಾತ್ರೆಯ ಮೂಲಕ ಹೊರಡುತ್ತಾರೆ.<br />ಸತ್ಯಂಪೇಟೆಯ ನನ್ನ ಅಜ್ಜ ಗುರಪ್ಪ ಶರಣರ ’ಬಸವ ತತ್ವ ಸಮಾವೇಶ’ಕ್ಕೆ ಐದಾರು ಬಾರಿ ’ಇಳಕಲ್ಲಿನಿಂದ-ಸತ್ಯಂಪೇಟೆ’ಯವರೆಗೆ ಪಾದಯಾತ್ರೆಯ ಮೂಲಕ ಬಂದಿದ್ದಾರೆ ಎಂಬುದೇ ಒಂದು ಇತಿಹಾಸ. ಹೀಗೆ ಇಳಕಲ್ಲಿನಿಂದ ಪಾದಯಾತ್ರೆ ಹೊರಟರೆ ಅದು ಕೇವಲ ಕಾಟಾಚಾರದ ಪಾದಯಾತ್ರೆ ಆಗಿರುವುದಿಲ್ಲ. ದಾರಿಯಲ್ಲಿ ಬರುವ ಪ್ರತಿ ಹಳ್ಳಿ ಹಳ್ಳಿಗೂ ಭೇಟಿಕೊಟ್ಟು ಆ ಊರಿನ ತುಂಬೆಲ್ಲ ಚಟಗಳನ್ನು ತಮ್ಮ ಜೋಳಿಗೆ ಹಾಕುವಂತೆ ವಿನಂತಿಸುತ್ತಾರೆ. ಕೊನೆಯಲ್ಲಿ ಬಸವಾದಿ ಶರಣರ ವಿಚಾರಗಳನ್ನು ಆ ಹಳ್ಳಿಯ ಎಲ್ಲರಿಗೂ ಸರಳವಾಗಿ ಮುಟ್ಟುವಂತೆ ವಿವರಿಸಿ ಹೇಳುತ್ತಾರೆ. ”ಕಂದಾಚಾರ , ಮೂಢನಂಬಿಕೆಗಳ ದಾಸರಾಗಿರುವ ಭಕ್ತರೆಲ್ಲ ಅದರಿಂದ ಹೊರಬರದೆ ಹೋದರೆ ನಿಮ್ಮನ್ನು ಯಾರೂ ಉದ್ಧಾರ ಮಾಡಲು ಸಾಧ್ಯವಿಲ್ಲ’ ಎಂಬುದನ್ನು ಖಚಿತವಾಗಿ ತಿಳಿಸಿಹೇಳುತ್ತಾರೆ. <br />”ಯಾವ ಮಠಾಧೀಶರ, ಸ್ವಾಮಿಗಳ ಕೈಯ್ಯಲ್ಲಿ ಏನೂ ಇಲ್ಲ. ನಿತ್ಯವೂ ಪರಿಶುದ್ಧವಾದ ಕಾಯಕ ಮಾಡಿಕೊಂಡಿರುವ ನಿಮ್ಮ ಕೈಯ್ಯಲ್ಲಿ ಎಲ್ಲವೂ ಇದೆ ಎಂದು ಎಚ್ಚರಿಸುತ್ತಾರೆ. ನೀವು ಕೊರಳಲ್ಲಿ ಕಟ್ಟಿದ ಲಿಂಗವ ಬಿಟ್ಟು ಬೆಟ್ಟದ ಲಿಂಗಕ್ಕೆ ಹೋದರೆ ಲೊಟ್ಟಿ ಮೂಳರಾಗುತ್ತೀರಿ!” ಎಂದು ಹೇಳಲು ಹಿಂದೆ - ಮುಂದೆ ನೋಡುವುದಿಲ್ಲ.<br />’ನಿಮಗೆ ಯಾರಾದರೂ ತಾಯಿತ- ಕರಿದಾರ- ನಿಂಬಿಕಾಯಿ ಮಂತ್ರಿಸಿಕೊಡುವುದು ಅವರ ವ್ಯಾಪಾರವೇ ಹೊರತು ಅದರಿಂದ ಏನೂ ಸಾಧ್ಯವಿಲ್ಲ ಎಂದು ಮನಮುಟ್ಟುವಂತೆ ಹೇಳುತ್ತಾರೆ. ’ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ. ಸತ್ಯ ಶುದ್ಧವಾದ ಕಾಯಕ ಮಾಡಿ. ಮಾಡಿದೆನೆಂಬುದು ಮನದಲ್ಲಿ ಹೊಳೆದೊಡೆ ಎಡಿಸಿ ಕಾಡಿತ್ತು ಶಿವಡಂಗುರ ಹಾಗಾಗಿ ಭಕ್ತರೆಲ್ಲ ನಿಷ್ಕಲ್ಮಷ ಹೃದಯದಿಂದ ದಾಸೋಹ ಮಾಡಬೇಕೆಂದು ತಿಳಿ ಹೇಳುತ್ತಾರೆ. ಅವರೆಲ್ಲ ದಾಸೋಹ ತತ್ವವನ್ನು ಅಳವಡಿಸಿಕೊಳ್ಳುವಂತೆ ವಿವರಿಸುತ್ತಾರೆ. ಬಸವಾದಿ ಶರಣರು ಕನಸಿದ ಸಮಾಜವನ್ನು ನಾವೆಲ್ಲ (ಕಾವಿ ಹಾಕಿದ ಜಾತಿ ಜಂಗಮರು) ತಿಂದು ಹಾಕಿದ್ದೇವೆ. ’ದಯವೇ ಧರ್ಮದ ಮೂಲ’ವಾಗಿದ್ದ ಬಸವಣ್ಣನವರ ಧರ್ಮವನ್ನು ಇಂದು ’ಭಯವೇ ಧರ್ಮದ ಮೂಲ’ ಎಂಬಂತೆ ಚಿತ್ರಿಸಿದ್ದೇವೆ. ’ಲಾಂಛನಕ್ಕೆ ಶರಣೆಂಬೆ’ ಎಂಬ ಬಸವಣ್ಣನವರ ಮಾತನ್ನು ಹೇಳಿ ಸಾಕಷ್ಟು ಜನ ಭಕ್ತರನ್ನು ದಿಕ್ಕು ತಪ್ಪಿಸಿದ್ದೇವೆ. ಆದರೆ ಬಸವಣ್ಣನವರು ಅದೇ ವಚನದಲ್ಲಿ ಹೇಳಿದ ’ಲಾಂಛನಕ್ಕೆ ತಕ್ಕ ಆಚಾರವಿಲ್ಲದಿದ್ದಡೆ ಕೂಡಲ ಸಂಗಮದೇವ ಸಾಕ್ಷಿಯಗಿ ಛೀ ಎಂಬೆ’ ಎಂಬ ಮಾತನ್ನು ಅಪ್ಪಿ ತಪ್ಪಿಯೂ ವಿವರಿಸಿ ಹೇಳಿಲ್ಲ. ಒಟ್ಟಿನಲ್ಲಿ ಆತ್ಮವಂಚನೆಯ ಬಾಳನ್ನು ಮಠಾಧೀಶರು ನಡೆಸಿದ್ದೇವೆ. ಹೀಗಾಗಿ ದಿಕ್ಕು ತಪ್ಪಿದ ನಾವೆಯಲ್ಲಿ ಕುಳಿತಿರುವ ಭಕ್ತರು ದಾರಿ ತಪ್ಪಿದ್ದಾರೆ. ಮೂಲ ’ಲಿಂಗಾಯತ’ವನ್ನು ಮರೆತು. ಮತ್ತದೆ ಜಾತಿ ವ್ಯವಸ್ಥೆಯ ಬಲೆಯಲ್ಲಿ ಸಿಕ್ಕು ಒದ್ದಾಡುತ್ತಿದ್ದಾರೆ ಎಂದು ವ್ಯಥೆ ಪಡುತ್ತಾರೆ.<br />ಒಟ್ಟಿನಲ್ಲಿ ಬಸವ ಮಹಾಮಣಿಯವನ್ನು ಹೊತ್ತುಕೊಂಡು ಮುನ್ನಡೆದಿರುವ ಇಳಕಲ್ಲಿನ ಶ್ರೀ ಮಹಾಂತಸ್ವಾಮಿಗಳನ್ನು ’ಬಸವ ತತ್ವದ ದಂಡನಾಯಕರು’ ಎಂದು ಖಚಿತವಾಗಿ ಹೇಳಬಹುದು. ಬಸವಣ್ಣನವರ ಮಾತೃ ಹೃದಯ, ಲಘು ಹಾಸ್ಯ, ವಿಡಂಬನೆ, ತಮಾಷೆ, ವ್ಯಂಗ್ಯವನ್ನು ಸಂಪೂರ್ಣವಾಗಿ ಮಹಾಂತಪ್ಪಗಳು ಅಳವಡಿಸಿಕೊಂಡಿದ್ದಾರೆ. ಮಾಡಿದ ತಪ್ಪನ್ನು - ತಪ್ಪೆಂದು ಒಪ್ಪಿಕೊಳ್ಳುವ ಎದೆಗಾರಿಕೆ ಅನೇಕರಿಗೆ ಇರುವುದೆ ಇಲ್ಲ. ಆದರೆ ಮಹಾಂತಪ್ಪಗಳು ಮಾತ್ರ ಇದಕ್ಕೆ ಹೊರತಾದವರು.<br />ಸೊಲ್ಲಾಪುರದ ಕಲ್ಯಾಣ ನಾಡಿನ ಶರಣ ಸಮ್ಮೇಳನದಲ್ಲಿ ನನ್ನ ತಂದೆ ಲಿಂಗಣ್ಣ ಸತ್ಯಂಪೇಟೆಯವರು: ” ಮಠಾಧೀಶರೆಲ್ಲ ಆತ್ಮವಂಚನೆಯ ಬಾಳು ಬದುಕುತ್ತಿದ್ದಾರೆ. ಅಲ್ಲದೆ ಬಸವಾದಿ ಶರಣರ್ಯಾರು ಸನ್ಯಾಸ ಶ್ರೇಷ್ಠ ಎಂದು ಹೇಳಿಲ್ಲ. ಹುಸಿ ಬ್ರಹ್ಮಚರ್ಯಕ್ಕೆ ಜೋತುಬಿದ್ದ ಲಿಂಗಾಯತ ಮಠಾಧೀಶರುಗಳೆಲ್ಲ ತಮ್ಮ ಮಠಗಳಲ್ಲಿ ಅನಧಿಕೃತವಾಗಿ ಹೆಂಡತಿಯರನ್ನು ಮಕ್ಕಳನ್ನು ಹೊಂದಿದ್ದಾರೆ. ಆದ್ದರಿಂದ ಇನ್ನು ಮುಂದೆ ಮಠಾಧೀಶರುಗಳಿಗೆಲ್ಲ ಮದುವೆ ಮಾಡಿ, ಪೀಠಕ್ಕೆ ಕುಳ್ಳಿರಿಸಬೇಕು” ಎಂದು ಹೇಳಿದರು. <br />ಈ ಮಾತುಗಳನ್ನು ಕೇಳಿದ ಆ ಸಭೆಯಲ್ಲಿ ಕುಳಿತಿದ್ದ ಬಹುತೇಕ ಮಠಾಧೀಶರು ನನ್ನ ತಂದೆಯವರ ಅಭಿಪ್ರಾಯವನ್ನು ಖಂಡಿಸಿ ಮಾತನಾಡಿದರು. ಆದರೆ ಇಳಕಲ್ಲಿನ ಶ್ರೀಗಳು ಮಾತ್ರ : ”ಲಿಂಗಣ್ಣನವರು ಆಡಿರುವ ಮಾತುಗಳು ವಿಚಾರ ಮಾಡುವಂತೆ ಇವೆ. ಈ ಕುರಿತು ಸಮಾಜ ಮುಕ್ತವಾಗಿ ಚರ್ಚಿಸಿ ಒಂದು ನಿರ್ಣಯಕ್ಕೆ ಬರಬೇಕಾಗಿದೆ ಎಂದು ಒತ್ತಿ ಹೇಳಿದರು ಮಾತ್ರವಲ್ಲ, ಮಠಾಧೀಶರು ಆತ್ಮವಂಚನೆಗೆ ಹೆಸರಾಗಿದ್ದೇವೆ ”ಎಂತಲೂ ಬಣ್ಣಿಸಿಕೊಂಡರು.<br />ಬಸವಾದಿ ಶರಣರ ವಿಚಾರಗಳನ್ನು ಬದುಕುವ ಹಾಗೂ ಅವನ್ನು ಜನತೆಗೆ ವಿವರಿಸಿ ಹೇಳುವ ಕವಿ, ಸಾಹಿತಿಗಳನ್ನು ಕಂಡರೆ ಅವರಿಗೆ ಎಲ್ಲಿಲ್ಲದ ಅಕ್ಕರೆ. ಆದ್ದರಿಂದ ಇಂಥವರ ಮನೆಗಳನ್ನು ಹುಡುಕಿಕೊಂಡು ಅವರೇ ಹೊರಟು ನಿಲ್ಲುತ್ತಾರೆ. ಅವರೊಂದಿಗೆ ಲೋಕಾಭಿರಾಮವಾಗಿ ಚರ್ಚಿಸುತ್ತಾರೆ. ಪೀಠಾಧಿಕಾರಿಯ ಹಮ್ಮು-ಬಿಮ್ಮುಗಳನ್ನು ತೋರಿಸದೆ ಅವರ ಮನೆಯ ಸದಸ್ಯರಲ್ಲಿ ಒಬ್ಬರಾಗಿ ನಿಲ್ಲುತ್ತಾರೆ. ಗುಲ್ಬರ್ಗಾ, ಬೀದರ್ಗೆ ಹೋಗುವ ಪ್ರಸಂಗ ಬಂದಾಗಲೆಲ್ಲ ನಮ್ಮ ಮನೆಗೆ ಮಹಾಂತಪ್ಪಗಳು ಬಂದು ಹೋಗಲೇ ಬೇಕು. ಇಲ್ಲದೆ ಹೋದರೆ ಏನೋ ಕಳಕೊಂಡ ಭಾವ ಅವರನ್ನು ಆವರಿಸಿದಂತಾಗುತ್ತದೆ ಎನ್ನುತ್ತಾರೆ.<br />ತೀರಾ ಇತ್ತೀಚೆಗೆ ಯಾವುದೊ ಕಾರ್ಯಕ್ರಮವನ್ನು ಮುಗಿಸಿಕೊಂಡು ಎಂದಿನಂತೆ ನಮ್ಮ (ಶಹಾಪುರದ) ಮನೆಗೆ ಬರುವವರು ಬಾರದೆ, ಮನೆಯನ್ನು ದಾಟಿ ಅವರ ಕಾರು ಮುನ್ನಡೆಯಿತು. ನನಗಾದರೂ ಒಳಗೊಳಗೆ ಕಳವಳ. ಡ್ರೈವರ್ ಮರೆತು ಮುಂದೆ ಹೋದನೆ? ಎಂಬ ಆತಂಕ. ಅಥವಾ ಮನೆ ಮನೆಯ ಮುಂದುಗಡೆ ಇರುವ ಶ್ರೀಚರಬಸವೇಶ್ವರ ಗದ್ದುಗೆಯಲ್ಲಿ ಯಾವುದಾದರೂ ಕಾರ್ಯಕ್ರಮ ಇರಬಹುದೆ? ಎಂಬ ಕುತೂಹಲ. ತಕ್ಷಣ ಅವರ ಮೊಬೈಲ್ಗೆ ಪೋನ್ ಮಾಡಿದೆ. ’ಅಲ್ಲೆ ಮನೆಯಲ್ಲೆ ಇರು, ಈಗ ಬರುತ್ತೇನೆ. ನಮ್ಮ ಜೊತೆಗಿರುವ ಸ್ವಾಮಿಗಳೊಬ್ಬರು ಶ್ರೀ ಸಿದ್ಧಲಿಂಗೇಶ್ವರ ಬೆಟ್ಟಕ್ಕೆ ಹೋಗೋಣ ಎಂದು ಹೇಳಿದ್ದರಿಂದ ನಡೆದಿದ್ದೇವೆ’ ಅಂದರು. ನನಗೋ ತಡೆಯಲಾಗಲಿಲ್ಲ. ಅವರನ್ನು ಬೆನ್ನಟ್ಟಿ ನಾನೂ ಹೋದೆ. ಅಲ್ಲಿ ಆಗಲೆ ಅವರನ್ನು ಕುಳ್ಳಿರಿಸಿಕೊಂಡು ಬಸವಲಿಂಗ ಶರಣರು ಕಲ್ಯಾಣದ ಶರಣರ ಕುರಿತು ಹೇಳಿದ ಹಾಡುಗಳನ್ನು ಹಾಡುತ್ತಿದ್ದರು. ಹಾಡು ಮುಗಿಯಿತು. ಕೊನೆಗೆ ಅಲ್ಲಿ ಸೇರಿದ ಮಠದೊಳಗಣ ಜನರೆಲ್ಲ ವಂದಿಸಿ - ಅರ್ಚಿಸಿ, ಕಾಣಿಕೆ ನೀಡಿದರು. <br />ಆ ಕಾಣಿಕೆಯನ್ನು ಕೈಯ್ಯಲ್ಲಿ ಹಿಡಕೊಂಡು, ತಮ್ಮಲ್ಲಿಯದೂ ಇನ್ನಷ್ಟು ಸೇರಿಸಿಕೊಂಡು ದೂರದಲ್ಲಿ ಇದೆಲ್ಲವನ್ನೂ ನೋಡುತ್ತ ನಿಂತಿದ್ದ ನನ್ನನ್ನು ಹತ್ತಿರ ಕರೆದು ತಮ್ಮ ಕೈಯ್ಯಲ್ಲಿ ರೂಪಾಯಿಗಳನ್ನು ತೆಗೆದುಕೊಳ್ಳುವಂತೆ ಹೇಳಿದರು. ನನಗೆ ಇದೆಲ್ಲ ಕೊಂಚ ಇರಿಸು ಮುರಿಸು ಅನ್ನಿಸಿತು. ನನ್ನ ಜೇಬಿನಲ್ಲಿ ರೂಪಾಯಿಗಳನ್ನು ಇಡಲು ಹವಣಿಸುತ್ತಿದ್ದ ಕೈಯ್ಯನ್ನು ತಡೆಹಿಡಿದೆ. ಆಗ ಅವರು ’ಸುಮ್ಕ ತೋಗೋಬೇಕು. ನೀವೆಲ್ಲ ಬಸವಣ್ಣನ ಕೈಂಕರ್ಯ ಮಾಡುವವರು. ಇದೆಲ್ಲ ನಿಮಗೆ ಸೇರಬೇಕು’ ಎಂದೆಲ್ಲ ಹೇಳಿದಾಗ ಮನ ತುಂಬಿಬಂತು. ಕಣ್ಣಾಲಿಯಲ್ಲಿ ನೀರು ತುಂಬಿಕೊಂಡಿತು. ಮಾತು ಮೌನವಾಗಿ, ಅದು ಬಂಗಾರವಾಯಿತು.<br />೧೯೯೭ ರ ಜೂನ್ ೧೮ ರಂದು ಜರುಗಿದ ನನ್ನ ಹಾಗೂ ಶರಾವತಿಯ ಕಲ್ಯಾಣ ಮಹೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿ ಕಳೆ ತಂದರು. ನನ್ನ ಅಜ್ಜನಾದ ಗುರಪ್ಪ ಯಜಮಾನರ ಪುಣ್ಯ ಸ್ಮರಣೆಯ ದಿನ ನನ್ನ ಮದುವೆ ಏರ್ಪಡಿಸುವಂತೆ ಸೂಚಿಸಿ, ಆ ದಿನ ಕ್ರಾಂತಿಯ ಗಂಗೋತ್ರಿ ಅಕ್ಕನಾಗಮ್ಮಳ ಬಗೆಗೆ ಒಂದು ವಿಚಾರಗೋಷ್ಠಿ ಏರ್ಪಡಿಸಿದ್ದು ಮರೆಯಲಾಗದ್ದು. ಹಂದರ ಹಾಕದೆ, ಬಾಸಿಂಗ ಕಟ್ಟದೆ, ಸುಲಿಗೆ ಸುತ್ತದೆ, ಮದುಮಕ್ಕಳನ್ನು ಮಾಡದೆ, ಸರಳ ಹಾಗೂ ಸಹಜವಾಗಿ ನಡೆದ ಮದುವೆಯ ಸಾರಥ್ಯವನ್ನು ಮಹಾಂತಪ್ಪಗಳು ವಹಿಸಿದ್ದರು ಎಂಬುದೇ ನನಗೊಂದು ಹೆಮ್ಮೆ.<br />’ನಡೆದುದೇ ಮಾರ್ಗವಾದುದು ಶಿವನ ಮದಕರಿಗೆ<br />ನುಡಿದುದೇ ವೇದವಾದುದು ಶಿವನ ಶರಣರಿಗೆ’<br />ಇದು ಮಹಾಕವಿ ಹರಿಹರನ ಉಕ್ತಿ. ’ಮದವೇರಿದ ಆನೆಯು ಅರಣ್ಯದ ದಾರಿ ಹುಡುಕಿಕೊಂಡು ಹೋಗುವುದಿಲ್ಲ. ಅದು ನಡೆದು ಹೋದಲ್ಲಿಯೇ ದಾರಿಯಾಗುತ್ತದೆ. ಹಾಗೆಯೇ ಶರಣ ಲೋಕದಿಚ್ಚೆಯ ನುಡಿಯ, ಲೋಕದಿಚ್ಚೆಯ ನಡೆಯ , ಅವರು ಸರ್ವ ಸ್ವತಂತ್ರರು; ಅವರು ಪೂಜಾರಿಗಳ ನೆರವಿಲ್ಲದೆ , ಮಧ್ಯವರ್ತಿಗಳ ಕಾಟವಿಲ್ಲದೆ ನೇರವಾಗಿ ದೇವರೊಡನೆ ಭಕ್ತನ ಸಂಬಂಧವನ್ನಿಟ್ಟುಕೊಂಡ ಮಹಾನುಭಾವಿಗಳೆ ಶರಣರು’ ಎಂದು ಉತ್ತಂಗಿ ಚೆನ್ನಪ್ಪನವರು ಕಲ್ಯಾಣದ ಅಂದಿನ ಶರಣ ಕುರಿತು ಹೇಳುತ್ತಾರೆ. <br />ಇಂಥ ಎಲ್ಲಾ ವೈಶಿಷ್ಟ್ಯತೆಗಳನ್ನು ಮುಪ್ಪರಿಗೊಳಿಸಿಕೊಂಡಿರುವ ಮಹಾಂತ ಅಪ್ಪಗಳೂ ಇಂಥ ಶರಣರಲ್ಲಿ ಒಬ್ಬರು ಎಂದು ಹೇಳಿದರೆ ಅತಿಶಯೋಕ್ತಿಯ ಮಾತಾಗಲಾರದು. ಹೊಗಳಿಕೆ ಉಬ್ಬದ, ತೆಗಳಿಕೆ ಕುಗ್ಗದ, ಅಗ್ಗದ ಪ್ರಚಾರಕ್ಕೆ ತಮ್ಮನ್ನು ತಾವು ಎಂದೂ ಒಡ್ಡಿಕೊಳ್ಳದ ಬಸವ ಮಹಾ ಮಣಿಯವನ್ನು ಹೊತ್ತುಕೊಂಡು ಒಯ್ಯುತ್ತಿರುವ ಮಹಾಂತಪ್ಪಗಳು ನಿಜವಾದ ಶರಣ ಜಂಗಮರು ಎಂದು ಹೇಳಿದರೆ ಅತಿಶಯೋಕ್ತಿಯ ಮಾತು ಆಗಲಿಕ್ಕಿಲ್ಲ, ಅಲ್ಲವೆ?<br /><br />ವಿಶ್ವಾರಾಧ್ಯ ಸತ್ಯಂಪೇಟೆ <br />ಪತ್ರಕರ್ತರು , ಬಸವ ಮಾರ್ಗ ರಸ್ತೆ , ಸಿ.ಬಿ.ಕಾಲೋನಿ ಶಹಾಪುರ - ಯಾದಗಿರ (ಜಿಲ್ಲೆ), ಮೊಬೈಲ್ ; ೯೪೮೦೧೬೧೩೧೫Unknownnoreply@blogger.com0tag:blogger.com,1999:blog-2647129451779812999.post-23529510436557886222011-07-10T01:12:00.002-07:002011-07-10T01:19:49.724-07:00ಬಸವ ತತ್ವದ ದಂಡನಾಯಕರು : ಇಳಕಲ್ಲಿನ ಶ್ರೀ ಮಹಾಂತಶಿವಯೋಗಿಗಳು<a onblur="try {parent.deselectBloggerImageGracefully();} catch(e) {}" href="http://4.bp.blogspot.com/-xjUoj6MwlbI/ThlfaWp3ZqI/AAAAAAAAAEM/YIaTOQP_euA/s1600/22902660%255B1%255D.jpg"><img style="float:left; margin:0 10px 10px 0;cursor:pointer; cursor:hand;width: 64px; height: 80px;" src="http://4.bp.blogspot.com/-xjUoj6MwlbI/ThlfaWp3ZqI/AAAAAAAAAEM/YIaTOQP_euA/s320/22902660%255B1%255D.jpg" border="0" alt=""id="BLOGGER_PHOTO_ID_5627634115738560162" /></a><br />ಕಲ್ಯಾಣ ನಾಡಿನ ಶರಣ ಸಮ್ಮೇಳನದ ವೇದಿಕೆಯ. ಮೇಲೆ ಚಿತ್ರದುರ್ಗದ ಇಂದಿನ ಡಾ.ಶಿವಮೂರ್ತಿ ಶರಣರು, ಇಳಕಲ್ಲಿನ ಚಿತ್ತರಗಿ ಮಹಾಂತಶಿವಯೋಗಿಗಳು, ಭಾಲ್ಕಿಯ ಶ್ರೀ ಚೆನ್ನಬಸವ ಪಟ್ಟದ್ದೇವರು, ಹುಲಸೂರಿನ ಭಾತಂಬ್ರದ ಸ್ವಾಮಿಗಳಲ್ಲದೆ ಹಲವಾರು ಜನ ಮಠಾಧೀಶರುಗಳು ; ಸ್ವಾಮಿ ಅಗ್ನಿವೇಶ್, ಸಮ್ಮೇಳನಾಧ್ಯಕ್ಷರಾದ ಶ್ರೀ ಸಿದ್ಧಲಿಂಗಯ್ಯ ಮುಂತಾದ ವಿಚಾರವಾದಿಗಳು ಕುಳಿತುಕೊಂಡಿದ್ದರು. ರಾಮವಿಲಾಸ್ ಪಾಸ್ವಾನ್ ಎಂಬ ಮಾಜಿ ಕೇಂದ್ರ ಸಚಿವರು ಬಸವಣ್ಣನವರನ್ನು ಕುರಿತು ಓತಪ್ರೋತವಾಗಿ ಮಾತನಾಡುತ್ತಿದ್ದರು. ಕಲ್ಯಾಣ ಕ್ರಾಂತಿಯ ಆ ದಿನಗಳನ್ನು ನೆನಪಿಸುತ್ತ ಸಭೆಗೆ ಸಭೆಯನ್ನೆ ಮಂತ್ರಮುಗ್ಧವಾಗುವಂತೆ ಮಾಡಿದರು. ಬಸವಾದಿ ಶರಣರ ವಿಚಾರಗಳನ್ನು ರಾಮವಿಲಾಸ್ ಪಾಸ್ವಾನ್ ಎಷ್ಟು ಚೆನ್ನಾಗಿ ಓದಿ, ಅರ್ಥೈಸಿಕೊಂಡಿದ್ದಾರಲ್ಲ ! ಎಂದು ಅಲ್ಲಿರುವ ಎಲ್ಲರೂ ಬೆರಗುಗೊಂಡಿದ್ದರು. ಒಡನೆಯೆ ಅದೇನನ್ನಿಸಿತೋ, ”ಬಸವಣ್ಣನವರ ಅನುಯಾಯಿಗಳೆಂದು ಹೆಮ್ಮೆಯಿಂದ ಹೇಳಿಕೊಳ್ಳುವ ಯಾರೂ ಇಂದಿಗೂ ಬಸವಣ್ಣನವರಂತೆ ನಡೆದುಕೊಂಡಿಲ್ಲ. ಸ್ವಾಮಿ, ಜಗದ್ಗುರುಗಳೆಂಬುವವರಂತೂ ಶರಣರ ಜೀವನದ ಬಹುಮುಖ್ಯ ದ್ರವ್ಯವಾದ ಅಸ್ಪೃಶ್ಯತೆಯನ್ನು ತಮ್ಮ ಮಠಗಳಲ್ಲಿ ಇನ್ನೂ ಉಳಿಸಿಕೊಂಡು ಬಂದಿದ್ದಾರೆ” ಎಂದು ನೇರವಾಗಿ ಸ್ವಾಮಿಗಳನ್ನು ತರಾಟೆಗೆ ತೆಗೆದುಕೊಂಡರು. <br />ವೇದಿಕೆಯ ಮೇಲೆ ಆಸೀನರಾಗಿರುವ ಮಠಾಧೀಶರನ್ನು ನೋಡುತ್ತ : ”ಬಸವಣ್ಣನವರ ಆದರ್ಶಗಳನ್ನು ಇಂಥ ಸಭೆಗಳ ಮೂಲಕ ಪುಂಖಾನುಪುಂಖವಾಗಿ ಹೇಳುತ್ತಿರಲ್ಲ, ನೀವು ಎಂದಾದರೂ ನಿಮ್ಮ ಮಠಗಳಿಗೆ ಉತ್ತರಾಧಿಕಾರಿಯಾಗಿ ದಲಿತ ಮೂಲದ ವ್ಯಕ್ತಿಯನ್ನು ಆಯ್ಕೆ ಮಾಡಿದ್ದೀರಾ? ಹೋಗಲಿ, ಇನ್ನು ಮುಂದಾದರೂ ನೀವು ನಿಮ್ಮ ಪೀಠಗಳಿಗೆ ದಲಿತರನ್ನು ನೇಮಿಸಿಕೊಳ್ಳುತ್ತೀರಾ?” ಎಂದು ನೇರವಾಗಿ ಪ್ರಶ್ನಿಸಿದರು. ಅದುವರೆಗೆ ಮಹಾಜನ್ ಅವರ ಮಾತುಗಳನ್ನು ಕೇಳುತ್ತ ಆನಂದ ತುಂದಿಲರಾಗಿದ್ದ ಬಹುತೇಕ ಲಿಂಗಾಯತ ಮಠಾಧೀಶರ ಮುಖಗಳು ಒಮ್ಮಿದೊಮ್ಮೆ ಕಳಾಹೀನವಾದವು. ಒಬ್ಬರ ಮುಖ ಒಬ್ಬರು ಮಿಕಿಮಿಕಿ ನೋಡುತ್ತ ಅನಿರೀಕ್ಷಿತವಾಗಿ ಬಂದ ಪಾಸ್ವಾನ್ ಮಾತುಗಳು ಅವರನ್ನು ಇಕ್ಕಟ್ಟಿಗೆ ಸಿಕ್ಕಿಸಿದ್ದವು. ಅಲ್ಲಿ ಸೇರಿದ್ದ ಜನವಂತೂ ಉಸಿರನ್ನು ಬಿಗಿಹಿಡಿದು ಮುಂದೆ ಸಭೆ ಯಾವುದರ ಕಡೆ ತಿರುಗಬಹುದು ? ಎಂಬ ಕುತೂಹಲದಿಂದ ಕಾದುಕುಳಿತಿದ್ದರು.<br />ದಟ್ಟವಾದ ಆತಂಕ ಹಾಗೂ ನಿಶಬ್ದವನ್ನು ಸೀಳಿ ಬಂದಂತೆ ಇಳಕಲ್ಲಿನ ಮಹಾಂತಶಿವಯೋಗಿಗಳು ಎದ್ದು ನಿಂತರು. ”ನಮ್ಮ ಚಿತ್ತರಗಿ ಇಳಕಲ್ಲಿನ ಪೀಠಕ್ಕೆ ದಲಿತ ಮೂಲದ ಬಸವಾಯತನನ್ನು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡುತ್ತೇವೆ” ಎಂಬ ಭರವಸೆ ನೀಡಿದರು. ಆಗ ಸಭೆಯಲ್ಲಿ ನೆರೆದಿದ್ದ ಬಸವಣ್ಣನವರ ಅನುಯಾಯಿಗಳು ಅತ್ಯಂತ ಖುಷಿಯಿಂದ ಚಪ್ಪಾಳೆ ತಟ್ಟಿದರು. ಮಹಾಜನ್ ಅವರಂತೂ ಹೆಚ್ಚು ಖುಷಿಗೊಂಡು ಇಳಕಲ್ಲಿನ ಮಹಾಂತಸ್ವಾಮಿಗಳನ್ನು ಅಭಿನಂದಿಸಿದರು. <br />ಹನ್ನೆರಡನೆಯ ಶತಮಾನದಲ್ಲಿ ’ಶೀಲವಂತ’ ಹಾಗೂ ’ಲಾವಣ್ಯಮ್ಮರ ವಿವಾಹವನ್ನು ಅರಗಿಸಿಕೊಳ್ಳದ ಅಂದಿನ ಸಮಾಜ ಕ್ಷಿಪ್ರ ಕ್ರಾಂತಿಗೆ ಗುರಿಯಾಗಿತ್ತು. ಹರಳಯ್ಯ ಹಾಗೂ ಮಧುವರಸರ ಕುಟುಂಬಗಳ ಸದಸ್ಯರು ಎಳೆಹೂಟಿಯಂತಹ ಬರ್ಬರ ಶಿಕ್ಷೆಗೆ ಗುರಿಯಾದ ಸಂಗತಿ ಇತಿಹಾಸ ಸ್ಪಷ್ಟವಾಗಿ ಹೇಳುತ್ತಿತ್ತು. ಶರಣರ ವಿಚಾರಗಳು ಎಷ್ಟೆ ಪ್ರಗತಿಪರವಾಗಿದ್ದರೂ, ಸಮಾಜ ಮುಖಿಯಾಗಿದ್ದರೂ, ವಚನ ಸಾಹಿತ್ಯವನ್ನು ಎಷ್ಟೇ ಕೊಂಡಾಡಿದರೂ ಇವತ್ತಿಗೂ ದಲಿತ ಮೂಲದ ಯಾವೊಬ್ಬ ವ್ಯಕ್ತಿಯನ್ನು ಮಠಾಧೀಶನನ್ನಾಗಿ ನೇಮಿಸಿದ್ದು ಇರಲಿಲ್ಲ. ಇಂಥ ವಾಸ್ತವ ಸಂದರ್ಭದಲ್ಲಿ ಇಳಕಲ್ಲಿನ ಶ್ರೀಗಳು ಬಹಿರಂಗಸಭೆಯಲ್ಲಿ ಆಡಿದ ಮಾತುಗಳು ಸಮಾಜದಲ್ಲಿ ಅಲ್ಲೊಲ ಕಲ್ಲೊಲ ಉಂಟು ಮಾಡಿದವು. ಜಾತಿ ಜಂಗಮರಿಂದ ತುಂಬಿ ತುಳುಕುತ್ತಿರುವ ಲಿಂಗಾಯತ ಮಠಾಧಿಪತಿಗಳು ಇಳಕಲ್ ಶ್ರೀಗಳ ಮಾತುಗಳಿಂದ ಒಳಗೊಳಗೆ ಉರಿದೆದ್ದರು. <br />’ಭಕ್ತಿ ಶುಭಾಷಯ ನುಡಿಯ ನುಡಿವೆ, ನುಡಿದಂತೆ ನಡೆವೆ<br />ನಡೆಯೊಳಗೆ ನುಡಿಯ ಪೂರೈಸುವೆ<br />ಮೇಲೆ ತೂಗುವ ತ್ರಾಸ ಕಟ್ಟಳೆ ನಿಮ್ಮ ಕೈಯ್ಯಲ್ಲಿದೆ<br />ಒಂದು ಜವೆ ಕೊರತೆಯಾದಡೆ ಎನ್ನನದ್ದಿ ನೀ ಎದ್ದು ಹೋಗು’<br />ಎಂಬ ಬಸವಣ್ಣನವರ ಮಾತಿನಂತೆ ಇಳಕಲ್ಲಿನ ಶ್ರೀಗಳು ತಮ್ಮ ಮಾತಿಗೆ ಬದ್ಧರಾಗಿದ್ದರು. ಅವರಿಗೆ ಆಗ ರಾಜ್ಯದ ರಾಷ್ಟ್ರದ ಹಲವಾರು ಜನ ರಾಜಕಾರಣಿಗಳಿಂದ, ಪ್ರಭಾವಿ ವ್ಯಕ್ತಿಗಳಿಂದ ಹೇಳಿಸಿ ನೋಡಿದರು. ತಮ್ಮ ಅಭಿಪ್ರಾಯವನ್ನು ಬದಲಾಯಿಸುವಂತೆ ಒತ್ತಾಯಿಸಿದರು. ಕೆಲವರು ಬೆದರಿಕೆಯನ್ನು ಒಡ್ಡಿದರು. ಆದರೆ ’ನ್ಯಾಯ ನಿಷ್ಠುರಿ ಶರಣ ದಾಕ್ಷಿಣ್ಯ ಪರನಲ್ಲ. ಲೋಕವಿರೋಧಿ ಶರಣ ಯಾರಿಗೂ ಅಂಜಲಾರ’ ಎಂಬಂತೆ ಇಳಕಲ್ಲಿನ ಶ್ರೀಗಳು ನಡೆದು ಹೋದರು. ಮೊಟ್ಟ ಮೊದಲನೆಯದಾಗಿ ತಮ್ಮ ಇಳಕಲ್ಲಿನ ಶಾಖಾ ಮಠವಾದ ಸಿದ್ಧಯ್ಯನ ಕೋಟೆಗೆ ದಲಿತ ಮೂಲದ ಬಸವಾಯತರಾದ ಶ್ರೀ ಬಸವಲಿಂಗ ಸ್ವಾಮಿಗಳನ್ನು ನೇಮಿಸಿ ತಮ್ಮ ಬಸವತನವನ್ನು ಉಳಿಸಿಕೊಂಡರು.<br />ಇದಿಷ್ಟೆ ಅಲ್ಲದೆ ಲಿಂಗಸೂಗೂರಿನ ತಮ್ಮ ಮಹಾಂತ ಮಠಕ್ಕೂ ಬಂಜಾರ ಸಮುದಾಯದ ಶ್ರೀ ಸಿದ್ದಲಿಂಗ ಶರಣನನ್ನು ನೇಮಿಸಿ ಮತ್ತದೆ ಕರ್ಮಠ ಲಿಂಗಾಯತರ ರಗಳೆ ಮೈಮೇಲೆ ಎಳಕೊಂಡರು. ಈ ಮೊದಲಿದ್ದ ಮಹಾಂತಪ್ಪಗಳ ಮಠವನ್ನೆ ಕುಯುಕ್ತಿಯಿಂದ ಅಲ್ಲಿನ ಜಾತಿ ಜಂಗಮವರು ಕಸಗೊಂಡರು. ಆದರೆ ಅಲ್ಲಿರುವ ಶರಣ ಭಕ್ತರ ನೆರವಿನೊಂದಿಗೆ ಮಹಾಂತ ಶಿವಯೋಗಿಗಳ ಶಾಖಾ ಮಠವನ್ನು ಕಟ್ಟಿ ತೋರಿಸಿ, ಜನ ಮಾನಸದಲ್ಲಿ ಹೊಸ ಹುಟ್ಟನ್ನು ಹುರುಪನ್ನು ತುಂಬಿದರು.<br />ಇಳಕಲ್ಲಿನ ತಮ್ಮ ಮೂಲ ಪರಂಪರೆಯ ಪೀಠಕ್ಕೂ ಮೈಸೂರಿನ ಶ್ರೀ ಸಿದ್ಧರಾಮ ಸ್ವಾಮಿಗಳನ್ನು ಪಟ್ಟಗಟ್ಟುವಾಗ ಜಾತಿ ಜಂಗಮರ ಭಾರಿ ವಿರೋಧ ಎದುರಿಸಬೇಕಾಯಿತು. ಪಟ್ಟಾಧಿಕಾರದ ಸಂದರ್ಭದಲ್ಲಿ ವೇದಿಕೆಯ ಕಡೆಗೆ ಕಲ್ಲು ತೂರಿದರು. ವಿರೋಧಿ ಘೋಷಣೆ ಕೂಗಿದರು. ಇಡೀ ಕಾರ್ಯಕ್ರಮವನ್ನು ರಣಾಂಗಣವಾಗುವಂತೆ ವ್ಯವಸ್ಥಿತ ಪಿತೂರಿ ಕೈಗೊಂಡರು. ಆದರೂ ಮಹಾಂತಪ್ಪಗಳು ತಾವು ಕೈಕೊಂಡ ಬಸವ ಪರಂಪರೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡಿದರು. <br />ಶರಣತನ ಅನ್ನುವುದು ನಿಜಕ್ಕೂ ಕಠಿಣ. ’ಅದು ಭಕ್ತಿಯಂತೆ ಹೋಗುತ್ತ ಬರುತ್ತ ಕೊಯ್ಯುವ ಗರಗಸ’. ಆದರೆ ಇಳಕಲ್ಲಿನ ಪೂಜ್ಯ ಶ್ರೀ ಮಹಾಂತಶಿವಯೋಗಿಗಳು ಮಾತ್ರ ಅದನ್ನು ತಮ್ಮ ಮಠಗಳಲ್ಲಿ ಹಾಗೂ ನಡೆಗಳಲ್ಲಿ ಅನುಚಾನವಾಗಿ ಹಾಸಿ ಹೊದ್ದುಕೊಂಡು ನಡೆದಿದ್ದಾರೆ. ’ಕಲ್ಲು ದೇವರು ದೇವರಲ್ಲ, ಮಣ್ಣು ದೇವರು ದೇವರಲ್ಲ ಎಂದು ಸಭೆಗಳಲ್ಲಿ ಹೇಳಿ ಅಲ್ಲಿ ಸೇರಿದ ಜನರಿಂದ ಚಪ್ಪಾಳೆ ಗಿಟ್ಟಿಸುವುದು ಸುಲಭ. ಆದರೆ ಅದನ್ನು ಕಾರ್ಯರೂಪಕ್ಕೆ ತರಬೇಕಾದಾಗ ಉಂಟಾಗುವ ಅಡ್ಡಿ ಆತಂಕಗಳು, ತಲ್ಲಣಗಳು ನೂರಾರು. ಇಳಕಲ್ಲಿನ ಮಹಾಂತ ಅಪ್ಪಗಳು ಯಾರ ಮನೆಗೆ ಹೋಗಲಿ ಸೀದಾ ಅವರ ಮನೆಯ ದೇವರ ಮನೆಗೆ ಕಾಲಿಕ್ಕಿ, ಆ ಜಗುಲಿಯ ಮೇಲೆ ಇರುವ ಹತ್ತಾರು ದೇವರುಗಳನ್ನು ತಮ್ಮ ಜೋಳಿಗೆಗೆ ಹಾಕಿಕೊಂಡು ಊರ ಹೊರಗೆ ಒಯ್ದು ಬಿಸಾಡುವರು. ಮನೆಯ ಮಂದಿಯನ್ನೆಲ್ಲ ಒಂದೆಡೆ ಕುಳ್ಳಿರಿಸಿಕೊಂಡು <br />’ಅರಗು ತಿಂದು ಕರಗುವ ದೈವವ<br />ಉರಿಯ ಕಂಡರೆ ಮುರುಟುವ ದೈವವ<br />ಅಂಜಿಕೆಯಾದಡೆ ಹೂಳುವ ದೈವವ<br />ಅವಸರಬಂದರೆ ಮಾರುವ ದೈವವ <br />ಎಂತು ಸರಿಯೆಂಬೆನಯ್ಯ?’<br />ಎಂದು ಬಸವಾದಿ ಶರಣರ ವಚನಗಳನ್ನು ಮನಂಬುಗುವಂತೆ ವಿವರಿಸಿ ಹೇಳುತ್ತಾರೆ. ’ಸತ್ಯ ಶುದ್ಧ ಕಾಯಕ ಮಾಡಿದಡೆ ಎತ್ತೆತ್ತ ನೋಡಿದಡತ್ತತ್ತ ಲಕ್ಷ್ಮಿ ತಾನಾಗಿಪ್ಪಳು’ ಎಂದು ತಿಳಿಹೇಳುತ್ತಾರೆ. ”ನೀವು ಪೂಜಿಸುವ ಕರಿಲಕ್ಷ್ಮಿ- ಕೆಂಪು ಲಕ್ಷ್ಮಿ ಚಿತ್ರವನ್ನು ರೇಖಿಸಿರುವ ಕಲಾವಿದನ ಹೆಂಡತಿಯೋ, ಪ್ರೇಯಸಿಯೋ ! ಮಗಳೋ ಆಗಿದ್ದಾಳೆ”. ಆದ್ದರಿಂದ ಅರ್ಥವಿಲ್ಲದ ಇಂಥ ದೇವರುಗಳನ್ನು ಪೂಜಿಸಲೇ ಬಾರದು. ಅಪ್ಪ ಬಸವಣ್ಣನವರು ಕೊಟ್ಟ <br />’ಜಗದಗಲ ಮುಗಿಲಗಲ<br />ಮಿಗೆಯಗಲ ನಿಮ್ಮಗಲ<br />ಪಾತಾಳದಿಂದತ್ತತ್ತ ನಿಮ್ಮ ಶ್ರೀ ಚರಣ ನಿಮ್ಮ ಶ್ರೀಮಕುಟ<br />ಅಗಮ್ಯ ಅಗೋಚರ ಅಪ್ರತೀಯ<br />ಲಿಂಗವೇ ನೀವೆನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯ<br />ಎಂದು ಹೇಳಿರುವ ’ಇಷ್ಟಲಿಂಗ’ವನ್ನು ಪೂಜಿಸಬೇಕು ಎಂದು ಹೇಳುತ್ತಾರೆ. ’ಬಾರದು ಬಪ್ಪದು. ಬಪ್ಪದು ತಪ್ಪದು’ ಎಂದು ಅವರೆಲ್ಲರ ಮನಸ್ಸಿನ ಕತ್ತಲೆಯನ್ನು ’ವಚನ ದೀಪ್ತಿ’ಯ ಮೂಲಕ ಬೆಳಗಿಸುತ್ತಾರೆ. ಇಷ್ಟಾಗಿಯೂ ’ನಿಮ್ಮ ಮನೆಯ ದೇವರುಗಳು ನಿಮ್ಮನ್ನು ಕಾಡಲು ಪೀಡಲು ಶುರುಮಾಡಿದರೆ ಅವುಗಳಿಗೆಲ್ಲ ನನ್ನ ಅಡ್ರೆಸ್ ಕೊಡಿ. ಅವು ನನ್ನೊಂದಿಗೆ ಬಂದು ಗುದ್ದಾಡಲಿ’, ಎಂದು ಹಾಸ್ಯಮಯವಾಗಿ ಮಾತನಾಡುತ್ತ ಭಕ್ತನ ’ಭಯ’ವನ್ನು ಕಿತ್ತಿ ಬಿಸುಡುತ್ತಾರೆ.<br />ಬಸವಾದಿ ಶರಣರ ವಿಚಾರಗಳನ್ನು ಕರ್ನಾಟಕದ ಬಹುತೇಕ ಮಠಗಳು ತಮ್ಮ ಆಸ್ತಿಯನ್ನಾಗಿ ಮಾಡಿಕೊಂಡು ಲಿಂಗಾಯತರನ್ನು ದಿಶಾಬೂಲಗೊಳಿಸುತ್ತ ಹೊರಟಿದ್ದರೆ ಇಳಕಲ್ಲಿನ ಶ್ರೀಗಳು ಮಾತ್ರ ಅವನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆಯುತ್ತಿದ್ದಾರೆ. ಹೀಗಾಗಿ ಶ್ರೀಗಳ ಮಾತು, ನಡೆ ನುಡಿ ಭಾವಗಳೆಲ್ಲವೂ ’ಪರುಷ ’ ಎಂದರೆ ತಪ್ಪಾಗಲಾರದು.<br />ಉತ್ತರ ಕರ್ನಾಟಕದಲ್ಲಿ ಬಹಳಷ್ಟು ಜನ ಭಕ್ತರು ತಮ್ಮ ಭಕ್ತಿಯ ಪರಾಕಾಷ್ಠೆಯನ್ನು ಮೆರೆಯಲು ತಮ್ಮ ಊರಿನಿಂದ ದೊಡ್ಡ ದೊಡ್ಡ ಮಠಗಳಿಗೆ, ದೇವಸ್ಥಾನಗಳಿಗೆ ಪಾದಯಾತ್ರೆ ಹೊರಡುತ್ತಾರೆ. ದಾರಿ ಉದ್ದಕ್ಕೂ ಭಜನೆ ಮಾಡುತ್ತ, ಊರೂರುಗಳಲ್ಲಿ ಪ್ರಸಾದ ಸ್ವೀಕರಿಸಿ ಮುನ್ನಡೆಯುತ್ತಾರೆ. ಪ್ರಚಾರ ಗಿಟ್ಟಿಸುತ್ತಾರೆ. ವರ್ಷಕ್ಕೊಂದು ಸಲ ದೇವರ ಹೆಸರಿನ ಮೇಲೆ ಪಾದಯಾತ್ರೆಯ ಮಜಾ ಅನುಭವಿಸಿ ಖುಷಿ ಪಡುತ್ತಾರೆ. ಇಂಥ ಪಾದಯಾತ್ರೆಗಳನ್ನು ಹಮ್ಮಿಕೊಳ್ಳುವುದು ಕೇವಲ ಭಕ್ತರಿಗೆ ಮಾತ್ರ ಸಂಬಂಧಿಸಿದ ಕೆಲಸ ಎಂದು ಬಹಳಷ್ಟು ಜನ ಮಠಾಧೀಶರು ತಿಳಿದುಕೊಂಡಿದ್ದಾರೆ. ಆದರೆ ಮಹಾಂತಪ್ಪಗಳು ಮಾತ್ರ ’ಭಕ್ತನಿದ್ದ ಠಾವೆ ಕೈಲಾಸ’ , ’ಭಕ್ತನ ಮನೆಯಂಗಳವೆ ವಾರಣಾಸಿ’ ಎಂದು ಅರ್ಥೈಸಿಕೊಂಡಿದ್ದರಿಂದ ಇವರು ಹಲವಾರು ಸಲ ಭಕ್ತನ ಮನೆಗಳಿಗೆ ಪಾದಯಾತ್ರೆಯ ಮೂಲಕ ಹೊರಡುತ್ತಾರೆ.<br />ಸತ್ಯಂಪೇಟೆಯ ನನ್ನ ಅಜ್ಜ ಗುರಪ್ಪ ಶರಣರ ’ಬಸವ ತತ್ವ ಸಮಾವೇಶ’ಕ್ಕೆ ಐದಾರು ಬಾರಿ ’ಇಳಕಲ್ಲಿನಿಂದ-ಸತ್ಯಂಪೇಟೆ’ಯವರೆಗೆ ಪಾದಯಾತ್ರೆಯ ಮೂಲಕ ಬಂದಿದ್ದಾರೆ ಎಂಬುದೇ ಒಂದು ಇತಿಹಾಸ. ಹೀಗೆ ಇಳಕಲ್ಲಿನಿಂದ ಪಾದಯಾತ್ರೆ ಹೊರಟರೆ ಅದು ಕೇವಲ ಕಾಟಾಚಾರದ ಪಾದಯಾತ್ರೆ ಆಗಿರುವುದಿಲ್ಲ. ದಾರಿಯಲ್ಲಿ ಬರುವ ಪ್ರತಿ ಹಳ್ಳಿ ಹಳ್ಳಿಗೂ ಭೇಟಿಕೊಟ್ಟು ಆ ಊರಿನ ತುಂಬೆಲ್ಲ ಚಟಗಳನ್ನು ತಮ್ಮ ಜೋಳಿಗೆ ಹಾಕುವಂತೆ ವಿನಂತಿಸುತ್ತಾರೆ. ಕೊನೆಯಲ್ಲಿ ಬಸವಾದಿ ಶರಣರ ವಿಚಾರಗಳನ್ನು ಆ ಹಳ್ಳಿಯ ಎಲ್ಲರಿಗೂ ಸರಳವಾಗಿ ಮುಟ್ಟುವಂತೆ ವಿವರಿಸಿ ಹೇಳುತ್ತಾರೆ. ”ಕಂದಾಚಾರ , ಮೂಢನಂಬಿಕೆಗಳ ದಾಸರಾಗಿರುವ ಭಕ್ತರೆಲ್ಲ ಅದರಿಂದ ಹೊರಬರದೆ ಹೋದರೆ ನಿಮ್ಮನ್ನು ಯಾರೂ ಉದ್ಧಾರ ಮಾಡಲು ಸಾಧ್ಯವಿಲ್ಲ’ ಎಂಬುದನ್ನು ಖಚಿತವಾಗಿ ತಿಳಿಸಿಹೇಳುತ್ತಾರೆ. <br />”ಯಾವ ಮಠಾಧೀಶರ, ಸ್ವಾಮಿಗಳ ಕೈಯ್ಯಲ್ಲಿ ಏನೂ ಇಲ್ಲ. ನಿತ್ಯವೂ ಪರಿಶುದ್ಧವಾದ ಕಾಯಕ ಮಾಡಿಕೊಂಡಿರುವ ನಿಮ್ಮ ಕೈಯ್ಯಲ್ಲಿ ಎಲ್ಲವೂ ಇದೆ ಎಂದು ಎಚ್ಚರಿಸುತ್ತಾರೆ. ನೀವು ಕೊರಳಲ್ಲಿ ಕಟ್ಟಿದ ಲಿಂಗವ ಬಿಟ್ಟು ಬೆಟ್ಟದ ಲಿಂಗಕ್ಕೆ ಹೋದರೆ ಲೊಟ್ಟಿ ಮೂಳರಾಗುತ್ತೀರಿ!” ಎಂದು ಹೇಳಲು ಹಿಂದೆ - ಮುಂದೆ ನೋಡುವುದಿಲ್ಲ.<br />’ನಿಮಗೆ ಯಾರಾದರೂ ತಾಯಿತ- ಕರಿದಾರ- ನಿಂಬಿಕಾಯಿ ಮಂತ್ರಿಸಿಕೊಡುವುದು ಅವರ ವ್ಯಾಪಾರವೇ ಹೊರತು ಅದರಿಂದ ಏನೂ ಸಾಧ್ಯವಿಲ್ಲ ಎಂದು ಮನಮುಟ್ಟುವಂತೆ ಹೇಳುತ್ತಾರೆ. ’ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ. ಸತ್ಯ ಶುದ್ಧವಾದ ಕಾಯಕ ಮಾಡಿ. ಮಾಡಿದೆನೆಂಬುದು ಮನದಲ್ಲಿ ಹೊಳೆದೊಡೆ ಎಡಿಸಿ ಕಾಡಿತ್ತು ಶಿವಡಂಗುರ ಹಾಗಾಗಿ ಭಕ್ತರೆಲ್ಲ ನಿಷ್ಕಲ್ಮಷ ಹೃದಯದಿಂದ ದಾಸೋಹ ಮಾಡಬೇಕೆಂದು ತಿಳಿ ಹೇಳುತ್ತಾರೆ. ಅವರೆಲ್ಲ ದಾಸೋಹ ತತ್ವವನ್ನು ಅಳವಡಿಸಿಕೊಳ್ಳುವಂತೆ ವಿವರಿಸುತ್ತಾರೆ. ಬಸವಾದಿ ಶರಣರು ಕನಸಿದ ಸಮಾಜವನ್ನು ನಾವೆಲ್ಲ (ಕಾವಿ ಹಾಕಿದ ಜಾತಿ ಜಂಗಮರು) ತಿಂದು ಹಾಕಿದ್ದೇವೆ. ’ದಯವೇ ಧರ್ಮದ ಮೂಲ’ವಾಗಿದ್ದ ಬಸವಣ್ಣನವರ ಧರ್ಮವನ್ನು ಇಂದು ’ಭಯವೇ ಧರ್ಮದ ಮೂಲ’ ಎಂಬಂತೆ ಚಿತ್ರಿಸಿದ್ದೇವೆ. ’ಲಾಂಛನಕ್ಕೆ ಶರಣೆಂಬೆ’ ಎಂಬ ಬಸವಣ್ಣನವರ ಮಾತನ್ನು ಹೇಳಿ ಸಾಕಷ್ಟು ಜನ ಭಕ್ತರನ್ನು ದಿಕ್ಕು ತಪ್ಪಿಸಿದ್ದೇವೆ. ಆದರೆ ಬಸವಣ್ಣನವರು ಅದೇ ವಚನದಲ್ಲಿ ಹೇಳಿದ ’ಲಾಂಛನಕ್ಕೆ ತಕ್ಕ ಆಚಾರವಿಲ್ಲದಿದ್ದಡೆ ಕೂಡಲ ಸಂಗಮದೇವ ಸಾಕ್ಷಿಯಗಿ ಛೀ ಎಂಬೆ’ ಎಂಬ ಮಾತನ್ನು ಅಪ್ಪಿ ತಪ್ಪಿಯೂ ವಿವರಿಸಿ ಹೇಳಿಲ್ಲ. ಒಟ್ಟಿನಲ್ಲಿ ಆತ್ಮವಂಚನೆಯ ಬಾಳನ್ನು ಮಠಾಧೀಶರು ನಡೆಸಿದ್ದೇವೆ. ಹೀಗಾಗಿ ದಿಕ್ಕು ತಪ್ಪಿದ ನಾವೆಯಲ್ಲಿ ಕುಳಿತಿರುವ ಭಕ್ತರು ದಾರಿ ತಪ್ಪಿದ್ದಾರೆ. ಮೂಲ ’ಲಿಂಗಾಯತ’ವನ್ನು ಮರೆತು. ಮತ್ತದೆ ಜಾತಿ ವ್ಯವಸ್ಥೆಯ ಬಲೆಯಲ್ಲಿ ಸಿಕ್ಕು ಒದ್ದಾಡುತ್ತಿದ್ದಾರೆ ಎಂದು ವ್ಯಥೆ ಪಡುತ್ತಾರೆ.<br />ಒಟ್ಟಿನಲ್ಲಿ ಬಸವ ಮಹಾಮಣಿಯವನ್ನು ಹೊತ್ತುಕೊಂಡು ಮುನ್ನಡೆದಿರುವ ಇಳಕಲ್ಲಿನ ಶ್ರೀ ಮಹಾಂತಸ್ವಾಮಿಗಳನ್ನು ’ಬಸವ ತತ್ವದ ದಂಡನಾಯಕರು’ ಎಂದು ಖಚಿತವಾಗಿ ಹೇಳಬಹುದು. ಬಸವಣ್ಣನವರ ಮಾತೃ ಹೃದಯ, ಲಘು ಹಾಸ್ಯ, ವಿಡಂಬನೆ, ತಮಾಷೆ, ವ್ಯಂಗ್ಯವನ್ನು ಸಂಪೂರ್ಣವಾಗಿ ಮಹಾಂತಪ್ಪಗಳು ಅಳವಡಿಸಿಕೊಂಡಿದ್ದಾರೆ. ಮಾಡಿದ ತಪ್ಪನ್ನು - ತಪ್ಪೆಂದು ಒಪ್ಪಿಕೊಳ್ಳುವ ಎದೆಗಾರಿಕೆ ಅನೇಕರಿಗೆ ಇರುವುದೆ ಇಲ್ಲ. ಆದರೆ ಮಹಾಂತಪ್ಪಗಳು ಮಾತ್ರ ಇದಕ್ಕೆ ಹೊರತಾದವರು.<br />ಸೊಲ್ಲಾಪುರದ ಕಲ್ಯಾಣ ನಾಡಿನ ಶರಣ ಸಮ್ಮೇಳನದಲ್ಲಿ ನನ್ನ ತಂದೆ ಲಿಂಗಣ್ಣ ಸತ್ಯಂಪೇಟೆಯವರು: ” ಮಠಾಧೀಶರೆಲ್ಲ ಆತ್ಮವಂಚನೆಯ ಬಾಳು ಬದುಕುತ್ತಿದ್ದಾರೆ. ಅಲ್ಲದೆ ಬಸವಾದಿ ಶರಣರ್ಯಾರು ಸನ್ಯಾಸ ಶ್ರೇಷ್ಠ ಎಂದು ಹೇಳಿಲ್ಲ. ಹುಸಿ ಬ್ರಹ್ಮಚರ್ಯಕ್ಕೆ ಜೋತುಬಿದ್ದ ಲಿಂಗಾಯತ ಮಠಾಧೀಶರುಗಳೆಲ್ಲ ತಮ್ಮ ಮಠಗಳಲ್ಲಿ ಅನಧಿಕೃತವಾಗಿ ಹೆಂಡತಿಯರನ್ನು ಮಕ್ಕಳನ್ನು ಹೊಂದಿದ್ದಾರೆ. ಆದ್ದರಿಂದ ಇನ್ನು ಮುಂದೆ ಮಠಾಧೀಶರುಗಳಿಗೆಲ್ಲ ಮದುವೆ ಮಾಡಿ, ಪೀಠಕ್ಕೆ ಕುಳ್ಳಿರಿಸಬೇಕು” ಎಂದು ಹೇಳಿದರು. <br />ಈ ಮಾತುಗಳನ್ನು ಕೇಳಿದ ಆ ಸಭೆಯಲ್ಲಿ ಕುಳಿತಿದ್ದ ಬಹುತೇಕ ಮಠಾಧೀಶರು ನನ್ನ ತಂದೆಯವರ ಅಭಿಪ್ರಾಯವನ್ನು ಖಂಡಿಸಿ ಮಾತನಾಡಿದರು. ಆದರೆ ಇಳಕಲ್ಲಿನ ಶ್ರೀಗಳು ಮಾತ್ರ : ”ಲಿಂಗಣ್ಣನವರು ಆಡಿರುವ ಮಾತುಗಳು ವಿಚಾರ ಮಾಡುವಂತೆ ಇವೆ. ಈ ಕುರಿತು ಸಮಾಜ ಮುಕ್ತವಾಗಿ ಚರ್ಚಿಸಿ ಒಂದು ನಿರ್ಣಯಕ್ಕೆ ಬರಬೇಕಾಗಿದೆ ಎಂದು ಒತ್ತಿ ಹೇಳಿದರು ಮಾತ್ರವಲ್ಲ, ಮಠಾಧೀಶರು ಆತ್ಮವಂಚನೆಗೆ ಹೆಸರಾಗಿದ್ದೇವೆ ”ಎಂತಲೂ ಬಣ್ಣಿಸಿಕೊಂಡರು.<br />ಬಸವಾದಿ ಶರಣರ ವಿಚಾರಗಳನ್ನು ಬದುಕುವ ಹಾಗೂ ಅವನ್ನು ಜನತೆಗೆ ವಿವರಿಸಿ ಹೇಳುವ ಕವಿ, ಸಾಹಿತಿಗಳನ್ನು ಕಂಡರೆ ಅವರಿಗೆ ಎಲ್ಲಿಲ್ಲದ ಅಕ್ಕರೆ. ಆದ್ದರಿಂದ ಇಂಥವರ ಮನೆಗಳನ್ನು ಹುಡುಕಿಕೊಂಡು ಅವರೇ ಹೊರಟು ನಿಲ್ಲುತ್ತಾರೆ. ಅವರೊಂದಿಗೆ ಲೋಕಾಭಿರಾಮವಾಗಿ ಚರ್ಚಿಸುತ್ತಾರೆ. ಪೀಠಾಧಿಕಾರಿಯ ಹಮ್ಮು-ಬಿಮ್ಮುಗಳನ್ನು ತೋರಿಸದೆ ಅವರ ಮನೆಯ ಸದಸ್ಯರಲ್ಲಿ ಒಬ್ಬರಾಗಿ ನಿಲ್ಲುತ್ತಾರೆ. ಗುಲ್ಬರ್ಗಾ, ಬೀದರ್ಗೆ ಹೋಗುವ ಪ್ರಸಂಗ ಬಂದಾಗಲೆಲ್ಲ ನಮ್ಮ ಮನೆಗೆ ಮಹಾಂತಪ್ಪಗಳು ಬಂದು ಹೋಗಲೇ ಬೇಕು. ಇಲ್ಲದೆ ಹೋದರೆ ಏನೋ ಕಳಕೊಂಡ ಭಾವ ಅವರನ್ನು ಆವರಿಸಿದಂತಾಗುತ್ತದೆ ಎನ್ನುತ್ತಾರೆ.<br />ತೀರಾ ಇತ್ತೀಚೆಗೆ ಯಾವುದೊ ಕಾರ್ಯಕ್ರಮವನ್ನು ಮುಗಿಸಿಕೊಂಡು ಎಂದಿನಂತೆ ನಮ್ಮ (ಶಹಾಪುರದ) ಮನೆಗೆ ಬರುವವರು ಬಾರದೆ, ಮನೆಯನ್ನು ದಾಟಿ ಅವರ ಕಾರು ಮುನ್ನಡೆಯಿತು. ನನಗಾದರೂ ಒಳಗೊಳಗೆ ಕಳವಳ. ಡ್ರೈವರ್ ಮರೆತು ಮುಂದೆ ಹೋದನೆ? ಎಂಬ ಆತಂಕ. ಅಥವಾ ಮನೆ ಮನೆಯ ಮುಂದುಗಡೆ ಇರುವ ಶ್ರೀಚರಬಸವೇಶ್ವರ ಗದ್ದುಗೆಯಲ್ಲಿ ಯಾವುದಾದರೂ ಕಾರ್ಯಕ್ರಮ ಇರಬಹುದೆ? ಎಂಬ ಕುತೂಹಲ. ತಕ್ಷಣ ಅವರ ಮೊಬೈಲ್ಗೆ ಪೋನ್ ಮಾಡಿದೆ. ’ಅಲ್ಲೆ ಮನೆಯಲ್ಲೆ ಇರು, ಈಗ ಬರುತ್ತೇನೆ. ನಮ್ಮ ಜೊತೆಗಿರುವ ಸ್ವಾಮಿಗಳೊಬ್ಬರು ಶ್ರೀ ಸಿದ್ಧಲಿಂಗೇಶ್ವರ ಬೆಟ್ಟಕ್ಕೆ ಹೋಗೋಣ ಎಂದು ಹೇಳಿದ್ದರಿಂದ ನಡೆದಿದ್ದೇವೆ’ ಅಂದರು. ನನಗೋ ತಡೆಯಲಾಗಲಿಲ್ಲ. ಅವರನ್ನು ಬೆನ್ನಟ್ಟಿ ನಾನೂ ಹೋದೆ. ಅಲ್ಲಿ ಆಗಲೆ ಅವರನ್ನು ಕುಳ್ಳಿರಿಸಿಕೊಂಡು ಬಸವಲಿಂಗ ಶರಣರು ಕಲ್ಯಾಣದ ಶರಣರ ಕುರಿತು ಹೇಳಿದ ಹಾಡುಗಳನ್ನು ಹಾಡುತ್ತಿದ್ದರು. ಹಾಡು ಮುಗಿಯಿತು. ಕೊನೆಗೆ ಅಲ್ಲಿ ಸೇರಿದ ಮಠದೊಳಗಣ ಜನರೆಲ್ಲ ವಂದಿಸಿ - ಅರ್ಚಿಸಿ, ಕಾಣಿಕೆ ನೀಡಿದರು. <br />ಆ ಕಾಣಿಕೆಯನ್ನು ಕೈಯ್ಯಲ್ಲಿ ಹಿಡಕೊಂಡು, ತಮ್ಮಲ್ಲಿಯದೂ ಇನ್ನಷ್ಟು ಸೇರಿಸಿಕೊಂಡು ದೂರದಲ್ಲಿ ಇದೆಲ್ಲವನ್ನೂ ನೋಡುತ್ತ ನಿಂತಿದ್ದ ನನ್ನನ್ನು ಹತ್ತಿರ ಕರೆದು ತಮ್ಮ ಕೈಯ್ಯಲ್ಲಿ ರೂಪಾಯಿಗಳನ್ನು ತೆಗೆದುಕೊಳ್ಳುವಂತೆ ಹೇಳಿದರು. ನನಗೆ ಇದೆಲ್ಲ ಕೊಂಚ ಇರಿಸು ಮುರಿಸು ಅನ್ನಿಸಿತು. ನನ್ನ ಜೇಬಿನಲ್ಲಿ ರೂಪಾಯಿಗಳನ್ನು ಇಡಲು ಹವಣಿಸುತ್ತಿದ್ದ ಕೈಯ್ಯನ್ನು ತಡೆಹಿಡಿದೆ. ಆಗ ಅವರು ’ಸುಮ್ಕ ತೋಗೋಬೇಕು. ನೀವೆಲ್ಲ ಬಸವಣ್ಣನ ಕೈಂಕರ್ಯ ಮಾಡುವವರು. ಇದೆಲ್ಲ ನಿಮಗೆ ಸೇರಬೇಕು’ ಎಂದೆಲ್ಲ ಹೇಳಿದಾಗ ಮನ ತುಂಬಿಬಂತು. ಕಣ್ಣಾಲಿಯಲ್ಲಿ ನೀರು ತುಂಬಿಕೊಂಡಿತು. ಮಾತು ಮೌನವಾಗಿ, ಅದು ಬಂಗಾರವಾಯಿತು.<br />೧೯೯೭ ರ ಜೂನ್ ೧೮ ರಂದು ಜರುಗಿದ ನನ್ನ ಹಾಗೂ ಶರಾವತಿಯ ಕಲ್ಯಾಣ ಮಹೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿ ಕಳೆ ತಂದರು. ನನ್ನ ಅಜ್ಜನಾದ ಗುರಪ್ಪ ಯಜಮಾನರ ಪುಣ್ಯ ಸ್ಮರಣೆಯ ದಿನ ನನ್ನ ಮದುವೆ ಏರ್ಪಡಿಸುವಂತೆ ಸೂಚಿಸಿ, ಆ ದಿನ ಕ್ರಾಂತಿಯ ಗಂಗೋತ್ರಿ ಅಕ್ಕನಾಗಮ್ಮಳ ಬಗೆಗೆ ಒಂದು ವಿಚಾರಗೋಷ್ಠಿ ಏರ್ಪಡಿಸಿದ್ದು ಮರೆಯಲಾಗದ್ದು. ಹಂದರ ಹಾಕದೆ, ಬಾಸಿಂಗ ಕಟ್ಟದೆ, ಸುಲಿಗೆ ಸುತ್ತದೆ, ಮದುಮಕ್ಕಳನ್ನು ಮಾಡದೆ, ಸರಳ ಹಾಗೂ ಸಹಜವಾಗಿ ನಡೆದ ಮದುವೆಯ ಸಾರಥ್ಯವನ್ನು ಮಹಾಂತಪ್ಪಗಳು ವಹಿಸಿದ್ದರು ಎಂಬುದೇ ನನಗೊಂದು ಹೆಮ್ಮೆ.<br />’ನಡೆದುದೇ ಮಾರ್ಗವಾದುದು ಶಿವನ ಮದಕರಿಗೆ<br />ನುಡಿದುದೇ ವೇದವಾದುದು ಶಿವನ ಶರಣರಿಗೆ’<br />ಇದು ಮಹಾಕವಿ ಹರಿಹರನ ಉಕ್ತಿ. ’ಮದವೇರಿದ ಆನೆಯು ಅರಣ್ಯದ ದಾರಿ ಹುಡುಕಿಕೊಂಡು ಹೋಗುವುದಿಲ್ಲ. ಅದು ನಡೆದು ಹೋದಲ್ಲಿಯೇ ದಾರಿಯಾಗುತ್ತದೆ. ಹಾಗೆಯೇ ಶರಣ ಲೋಕದಿಚ್ಚೆಯ ನುಡಿಯ, ಲೋಕದಿಚ್ಚೆಯ ನಡೆಯ , ಅವರು ಸರ್ವ ಸ್ವತಂತ್ರರು; ಅವರು ಪೂಜಾರಿಗಳ ನೆರವಿಲ್ಲದೆ , ಮಧ್ಯವರ್ತಿಗಳ ಕಾಟವಿಲ್ಲದೆ ನೇರವಾಗಿ ದೇವರೊಡನೆ ಭಕ್ತನ ಸಂಬಂಧವನ್ನಿಟ್ಟುಕೊಂಡ ಮಹಾನುಭಾವಿಗಳೆ ಶರಣರು’ ಎಂದು ಉತ್ತಂಗಿ ಚೆನ್ನಪ್ಪನವರು ಕಲ್ಯಾಣದ ಅಂದಿನ ಶರಣ ಕುರಿತು ಹೇಳುತ್ತಾರೆ. <br />ಇಂಥ ಎಲ್ಲಾ ವೈಶಿಷ್ಟ್ಯತೆಗಳನ್ನು ಮುಪ್ಪರಿಗೊಳಿಸಿಕೊಂಡಿರುವ ಮಹಾಂತ ಅಪ್ಪಗಳೂ ಇಂಥ ಶರಣರಲ್ಲಿ ಒಬ್ಬರು ಎಂದು ಹೇಳಿದರೆ ಅತಿಶಯೋಕ್ತಿಯ ಮಾತಾಗಲಾರದು. ಹೊಗಳಿಕೆ ಉಬ್ಬದ, ತೆಗಳಿಕೆ ಕುಗ್ಗದ, ಅಗ್ಗದ ಪ್ರಚಾರಕ್ಕೆ ತಮ್ಮನ್ನು ತಾವು ಎಂದೂ ಒಡ್ಡಿಕೊಳ್ಳದ ಬಸವ ಮಹಾ ಮಣಿಯವನ್ನು ಹೊತ್ತುಕೊಂಡು ಒಯ್ಯುತ್ತಿರುವ ಮಹಾಂತಪ್ಪಗಳು ನಿಜವಾದ ಶರಣ ಜಂಗಮರು ಎಂದು ಹೇಳಿದರೆ ಅತಿಶಯೋಕ್ತಿಯ ಮಾತು ಆಗಲಿಕ್ಕಿಲ್ಲ, ಅಲ್ಲವೆ?<br /><br />ವಿಶ್ವಾರಾಧ್ಯ ಸತ್ಯಂಪೇಟೆ <br />ಪತ್ರಕರ್ತರು , ಬಸವ ಮಾರ್ಗ ರಸ್ತೆ , ಸಿ.ಬಿ.ಕಾಲೋನಿ ಶಹಾಪುರ - ಯಾದಗಿರ (ಜಿಲ್ಲೆ), ಮೊಬೈಲ್ ; ೯೪೮೦೧೬೧೩೧೫Unknownnoreply@blogger.com0tag:blogger.com,1999:blog-2647129451779812999.post-20421521406791282552011-07-10T01:12:00.001-07:002011-07-10T01:19:23.110-07:00ಬಸವ ತತ್ವದ ದಂಡನಾಯಕರು : ಇಳಕಲ್ಲಿನ ಶ್ರೀ ಮಹಾಂತಶಿವಯೋಗಿಗಳು<a onblur="try {parent.deselectBloggerImageGracefully();} catch(e) {}" href="http://4.bp.blogspot.com/-xjUoj6MwlbI/ThlfaWp3ZqI/AAAAAAAAAEM/YIaTOQP_euA/s1600/22902660%255B1%255D.jpg"><img style="float:left; margin:0 10px 10px 0;cursor:pointer; cursor:hand;width: 64px; height: 80px;" src="http://4.bp.blogspot.com/-xjUoj6MwlbI/ThlfaWp3ZqI/AAAAAAAAAEM/YIaTOQP_euA/s320/22902660%255B1%255D.jpg" border="0" alt=""id="BLOGGER_PHOTO_ID_5627634115738560162" /></a><br />ಕಲ್ಯಾಣ ನಾಡಿನ ಶರಣ ಸಮ್ಮೇಳನದ ವೇದಿಕೆಯ. ಮೇಲೆ ಚಿತ್ರದುರ್ಗದ ಇಂದಿನ ಡಾ.ಶಿವಮೂರ್ತಿ ಶರಣರು, ಇಳಕಲ್ಲಿನ ಚಿತ್ತರಗಿ ಮಹಾಂತಶಿವಯೋಗಿಗಳು, ಭಾಲ್ಕಿಯ ಶ್ರೀ ಚೆನ್ನಬಸವ ಪಟ್ಟದ್ದೇವರು, ಹುಲಸೂರಿನ ಭಾತಂಬ್ರದ ಸ್ವಾಮಿಗಳಲ್ಲದೆ ಹಲವಾರು ಜನ ಮಠಾಧೀಶರುಗಳು ; ಸ್ವಾಮಿ ಅಗ್ನಿವೇಶ್, ಸಮ್ಮೇಳನಾಧ್ಯಕ್ಷರಾದ ಶ್ರೀ ಸಿದ್ಧಲಿಂಗಯ್ಯ ಮುಂತಾದ ವಿಚಾರವಾದಿಗಳು ಕುಳಿತುಕೊಂಡಿದ್ದರು. ರಾಮವಿಲಾಸ್ ಪಾಸ್ವಾನ್ ಎಂಬ ಮಾಜಿ ಕೇಂದ್ರ ಸಚಿವರು ಬಸವಣ್ಣನವರನ್ನು ಕುರಿತು ಓತಪ್ರೋತವಾಗಿ ಮಾತನಾಡುತ್ತಿದ್ದರು. ಕಲ್ಯಾಣ ಕ್ರಾಂತಿಯ ಆ ದಿನಗಳನ್ನು ನೆನಪಿಸುತ್ತ ಸಭೆಗೆ ಸಭೆಯನ್ನೆ ಮಂತ್ರಮುಗ್ಧವಾಗುವಂತೆ ಮಾಡಿದರು. ಬಸವಾದಿ ಶರಣರ ವಿಚಾರಗಳನ್ನು ರಾಮವಿಲಾಸ್ ಪಾಸ್ವಾನ್ ಎಷ್ಟು ಚೆನ್ನಾಗಿ ಓದಿ, ಅರ್ಥೈಸಿಕೊಂಡಿದ್ದಾರಲ್ಲ ! ಎಂದು ಅಲ್ಲಿರುವ ಎಲ್ಲರೂ ಬೆರಗುಗೊಂಡಿದ್ದರು. ಒಡನೆಯೆ ಅದೇನನ್ನಿಸಿತೋ, ”ಬಸವಣ್ಣನವರ ಅನುಯಾಯಿಗಳೆಂದು ಹೆಮ್ಮೆಯಿಂದ ಹೇಳಿಕೊಳ್ಳುವ ಯಾರೂ ಇಂದಿಗೂ ಬಸವಣ್ಣನವರಂತೆ ನಡೆದುಕೊಂಡಿಲ್ಲ. ಸ್ವಾಮಿ, ಜಗದ್ಗುರುಗಳೆಂಬುವವರಂತೂ ಶರಣರ ಜೀವನದ ಬಹುಮುಖ್ಯ ದ್ರವ್ಯವಾದ ಅಸ್ಪೃಶ್ಯತೆಯನ್ನು ತಮ್ಮ ಮಠಗಳಲ್ಲಿ ಇನ್ನೂ ಉಳಿಸಿಕೊಂಡು ಬಂದಿದ್ದಾರೆ” ಎಂದು ನೇರವಾಗಿ ಸ್ವಾಮಿಗಳನ್ನು ತರಾಟೆಗೆ ತೆಗೆದುಕೊಂಡರು. <br />ವೇದಿಕೆಯ ಮೇಲೆ ಆಸೀನರಾಗಿರುವ ಮಠಾಧೀಶರನ್ನು ನೋಡುತ್ತ : ”ಬಸವಣ್ಣನವರ ಆದರ್ಶಗಳನ್ನು ಇಂಥ ಸಭೆಗಳ ಮೂಲಕ ಪುಂಖಾನುಪುಂಖವಾಗಿ ಹೇಳುತ್ತಿರಲ್ಲ, ನೀವು ಎಂದಾದರೂ ನಿಮ್ಮ ಮಠಗಳಿಗೆ ಉತ್ತರಾಧಿಕಾರಿಯಾಗಿ ದಲಿತ ಮೂಲದ ವ್ಯಕ್ತಿಯನ್ನು ಆಯ್ಕೆ ಮಾಡಿದ್ದೀರಾ? ಹೋಗಲಿ, ಇನ್ನು ಮುಂದಾದರೂ ನೀವು ನಿಮ್ಮ ಪೀಠಗಳಿಗೆ ದಲಿತರನ್ನು ನೇಮಿಸಿಕೊಳ್ಳುತ್ತೀರಾ?” ಎಂದು ನೇರವಾಗಿ ಪ್ರಶ್ನಿಸಿದರು. ಅದುವರೆಗೆ ಮಹಾಜನ್ ಅವರ ಮಾತುಗಳನ್ನು ಕೇಳುತ್ತ ಆನಂದ ತುಂದಿಲರಾಗಿದ್ದ ಬಹುತೇಕ ಲಿಂಗಾಯತ ಮಠಾಧೀಶರ ಮುಖಗಳು ಒಮ್ಮಿದೊಮ್ಮೆ ಕಳಾಹೀನವಾದವು. ಒಬ್ಬರ ಮುಖ ಒಬ್ಬರು ಮಿಕಿಮಿಕಿ ನೋಡುತ್ತ ಅನಿರೀಕ್ಷಿತವಾಗಿ ಬಂದ ಪಾಸ್ವಾನ್ ಮಾತುಗಳು ಅವರನ್ನು ಇಕ್ಕಟ್ಟಿಗೆ ಸಿಕ್ಕಿಸಿದ್ದವು. ಅಲ್ಲಿ ಸೇರಿದ್ದ ಜನವಂತೂ ಉಸಿರನ್ನು ಬಿಗಿಹಿಡಿದು ಮುಂದೆ ಸಭೆ ಯಾವುದರ ಕಡೆ ತಿರುಗಬಹುದು ? ಎಂಬ ಕುತೂಹಲದಿಂದ ಕಾದುಕುಳಿತಿದ್ದರು.<br />ದಟ್ಟವಾದ ಆತಂಕ ಹಾಗೂ ನಿಶಬ್ದವನ್ನು ಸೀಳಿ ಬಂದಂತೆ ಇಳಕಲ್ಲಿನ ಮಹಾಂತಶಿವಯೋಗಿಗಳು ಎದ್ದು ನಿಂತರು. ”ನಮ್ಮ ಚಿತ್ತರಗಿ ಇಳಕಲ್ಲಿನ ಪೀಠಕ್ಕೆ ದಲಿತ ಮೂಲದ ಬಸವಾಯತನನ್ನು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡುತ್ತೇವೆ” ಎಂಬ ಭರವಸೆ ನೀಡಿದರು. ಆಗ ಸಭೆಯಲ್ಲಿ ನೆರೆದಿದ್ದ ಬಸವಣ್ಣನವರ ಅನುಯಾಯಿಗಳು ಅತ್ಯಂತ ಖುಷಿಯಿಂದ ಚಪ್ಪಾಳೆ ತಟ್ಟಿದರು. ಮಹಾಜನ್ ಅವರಂತೂ ಹೆಚ್ಚು ಖುಷಿಗೊಂಡು ಇಳಕಲ್ಲಿನ ಮಹಾಂತಸ್ವಾಮಿಗಳನ್ನು ಅಭಿನಂದಿಸಿದರು. <br />ಹನ್ನೆರಡನೆಯ ಶತಮಾನದಲ್ಲಿ ’ಶೀಲವಂತ’ ಹಾಗೂ ’ಲಾವಣ್ಯಮ್ಮರ ವಿವಾಹವನ್ನು ಅರಗಿಸಿಕೊಳ್ಳದ ಅಂದಿನ ಸಮಾಜ ಕ್ಷಿಪ್ರ ಕ್ರಾಂತಿಗೆ ಗುರಿಯಾಗಿತ್ತು. ಹರಳಯ್ಯ ಹಾಗೂ ಮಧುವರಸರ ಕುಟುಂಬಗಳ ಸದಸ್ಯರು ಎಳೆಹೂಟಿಯಂತಹ ಬರ್ಬರ ಶಿಕ್ಷೆಗೆ ಗುರಿಯಾದ ಸಂಗತಿ ಇತಿಹಾಸ ಸ್ಪಷ್ಟವಾಗಿ ಹೇಳುತ್ತಿತ್ತು. ಶರಣರ ವಿಚಾರಗಳು ಎಷ್ಟೆ ಪ್ರಗತಿಪರವಾಗಿದ್ದರೂ, ಸಮಾಜ ಮುಖಿಯಾಗಿದ್ದರೂ, ವಚನ ಸಾಹಿತ್ಯವನ್ನು ಎಷ್ಟೇ ಕೊಂಡಾಡಿದರೂ ಇವತ್ತಿಗೂ ದಲಿತ ಮೂಲದ ಯಾವೊಬ್ಬ ವ್ಯಕ್ತಿಯನ್ನು ಮಠಾಧೀಶನನ್ನಾಗಿ ನೇಮಿಸಿದ್ದು ಇರಲಿಲ್ಲ. ಇಂಥ ವಾಸ್ತವ ಸಂದರ್ಭದಲ್ಲಿ ಇಳಕಲ್ಲಿನ ಶ್ರೀಗಳು ಬಹಿರಂಗಸಭೆಯಲ್ಲಿ ಆಡಿದ ಮಾತುಗಳು ಸಮಾಜದಲ್ಲಿ ಅಲ್ಲೊಲ ಕಲ್ಲೊಲ ಉಂಟು ಮಾಡಿದವು. ಜಾತಿ ಜಂಗಮರಿಂದ ತುಂಬಿ ತುಳುಕುತ್ತಿರುವ ಲಿಂಗಾಯತ ಮಠಾಧಿಪತಿಗಳು ಇಳಕಲ್ ಶ್ರೀಗಳ ಮಾತುಗಳಿಂದ ಒಳಗೊಳಗೆ ಉರಿದೆದ್ದರು. <br />’ಭಕ್ತಿ ಶುಭಾಷಯ ನುಡಿಯ ನುಡಿವೆ, ನುಡಿದಂತೆ ನಡೆವೆ<br />ನಡೆಯೊಳಗೆ ನುಡಿಯ ಪೂರೈಸುವೆ<br />ಮೇಲೆ ತೂಗುವ ತ್ರಾಸ ಕಟ್ಟಳೆ ನಿಮ್ಮ ಕೈಯ್ಯಲ್ಲಿದೆ<br />ಒಂದು ಜವೆ ಕೊರತೆಯಾದಡೆ ಎನ್ನನದ್ದಿ ನೀ ಎದ್ದು ಹೋಗು’<br />ಎಂಬ ಬಸವಣ್ಣನವರ ಮಾತಿನಂತೆ ಇಳಕಲ್ಲಿನ ಶ್ರೀಗಳು ತಮ್ಮ ಮಾತಿಗೆ ಬದ್ಧರಾಗಿದ್ದರು. ಅವರಿಗೆ ಆಗ ರಾಜ್ಯದ ರಾಷ್ಟ್ರದ ಹಲವಾರು ಜನ ರಾಜಕಾರಣಿಗಳಿಂದ, ಪ್ರಭಾವಿ ವ್ಯಕ್ತಿಗಳಿಂದ ಹೇಳಿಸಿ ನೋಡಿದರು. ತಮ್ಮ ಅಭಿಪ್ರಾಯವನ್ನು ಬದಲಾಯಿಸುವಂತೆ ಒತ್ತಾಯಿಸಿದರು. ಕೆಲವರು ಬೆದರಿಕೆಯನ್ನು ಒಡ್ಡಿದರು. ಆದರೆ ’ನ್ಯಾಯ ನಿಷ್ಠುರಿ ಶರಣ ದಾಕ್ಷಿಣ್ಯ ಪರನಲ್ಲ. ಲೋಕವಿರೋಧಿ ಶರಣ ಯಾರಿಗೂ ಅಂಜಲಾರ’ ಎಂಬಂತೆ ಇಳಕಲ್ಲಿನ ಶ್ರೀಗಳು ನಡೆದು ಹೋದರು. ಮೊಟ್ಟ ಮೊದಲನೆಯದಾಗಿ ತಮ್ಮ ಇಳಕಲ್ಲಿನ ಶಾಖಾ ಮಠವಾದ ಸಿದ್ಧಯ್ಯನ ಕೋಟೆಗೆ ದಲಿತ ಮೂಲದ ಬಸವಾಯತರಾದ ಶ್ರೀ ಬಸವಲಿಂಗ ಸ್ವಾಮಿಗಳನ್ನು ನೇಮಿಸಿ ತಮ್ಮ ಬಸವತನವನ್ನು ಉಳಿಸಿಕೊಂಡರು.<br />ಇದಿಷ್ಟೆ ಅಲ್ಲದೆ ಲಿಂಗಸೂಗೂರಿನ ತಮ್ಮ ಮಹಾಂತ ಮಠಕ್ಕೂ ಬಂಜಾರ ಸಮುದಾಯದ ಶ್ರೀ ಸಿದ್ದಲಿಂಗ ಶರಣನನ್ನು ನೇಮಿಸಿ ಮತ್ತದೆ ಕರ್ಮಠ ಲಿಂಗಾಯತರ ರಗಳೆ ಮೈಮೇಲೆ ಎಳಕೊಂಡರು. ಈ ಮೊದಲಿದ್ದ ಮಹಾಂತಪ್ಪಗಳ ಮಠವನ್ನೆ ಕುಯುಕ್ತಿಯಿಂದ ಅಲ್ಲಿನ ಜಾತಿ ಜಂಗಮವರು ಕಸಗೊಂಡರು. ಆದರೆ ಅಲ್ಲಿರುವ ಶರಣ ಭಕ್ತರ ನೆರವಿನೊಂದಿಗೆ ಮಹಾಂತ ಶಿವಯೋಗಿಗಳ ಶಾಖಾ ಮಠವನ್ನು ಕಟ್ಟಿ ತೋರಿಸಿ, ಜನ ಮಾನಸದಲ್ಲಿ ಹೊಸ ಹುಟ್ಟನ್ನು ಹುರುಪನ್ನು ತುಂಬಿದರು.<br />ಇಳಕಲ್ಲಿನ ತಮ್ಮ ಮೂಲ ಪರಂಪರೆಯ ಪೀಠಕ್ಕೂ ಮೈಸೂರಿನ ಶ್ರೀ ಸಿದ್ಧರಾಮ ಸ್ವಾಮಿಗಳನ್ನು ಪಟ್ಟಗಟ್ಟುವಾಗ ಜಾತಿ ಜಂಗಮರ ಭಾರಿ ವಿರೋಧ ಎದುರಿಸಬೇಕಾಯಿತು. ಪಟ್ಟಾಧಿಕಾರದ ಸಂದರ್ಭದಲ್ಲಿ ವೇದಿಕೆಯ ಕಡೆಗೆ ಕಲ್ಲು ತೂರಿದರು. ವಿರೋಧಿ ಘೋಷಣೆ ಕೂಗಿದರು. ಇಡೀ ಕಾರ್ಯಕ್ರಮವನ್ನು ರಣಾಂಗಣವಾಗುವಂತೆ ವ್ಯವಸ್ಥಿತ ಪಿತೂರಿ ಕೈಗೊಂಡರು. ಆದರೂ ಮಹಾಂತಪ್ಪಗಳು ತಾವು ಕೈಕೊಂಡ ಬಸವ ಪರಂಪರೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡಿದರು. <br />ಶರಣತನ ಅನ್ನುವುದು ನಿಜಕ್ಕೂ ಕಠಿಣ. ’ಅದು ಭಕ್ತಿಯಂತೆ ಹೋಗುತ್ತ ಬರುತ್ತ ಕೊಯ್ಯುವ ಗರಗಸ’. ಆದರೆ ಇಳಕಲ್ಲಿನ ಪೂಜ್ಯ ಶ್ರೀ ಮಹಾಂತಶಿವಯೋಗಿಗಳು ಮಾತ್ರ ಅದನ್ನು ತಮ್ಮ ಮಠಗಳಲ್ಲಿ ಹಾಗೂ ನಡೆಗಳಲ್ಲಿ ಅನುಚಾನವಾಗಿ ಹಾಸಿ ಹೊದ್ದುಕೊಂಡು ನಡೆದಿದ್ದಾರೆ. ’ಕಲ್ಲು ದೇವರು ದೇವರಲ್ಲ, ಮಣ್ಣು ದೇವರು ದೇವರಲ್ಲ ಎಂದು ಸಭೆಗಳಲ್ಲಿ ಹೇಳಿ ಅಲ್ಲಿ ಸೇರಿದ ಜನರಿಂದ ಚಪ್ಪಾಳೆ ಗಿಟ್ಟಿಸುವುದು ಸುಲಭ. ಆದರೆ ಅದನ್ನು ಕಾರ್ಯರೂಪಕ್ಕೆ ತರಬೇಕಾದಾಗ ಉಂಟಾಗುವ ಅಡ್ಡಿ ಆತಂಕಗಳು, ತಲ್ಲಣಗಳು ನೂರಾರು. ಇಳಕಲ್ಲಿನ ಮಹಾಂತ ಅಪ್ಪಗಳು ಯಾರ ಮನೆಗೆ ಹೋಗಲಿ ಸೀದಾ ಅವರ ಮನೆಯ ದೇವರ ಮನೆಗೆ ಕಾಲಿಕ್ಕಿ, ಆ ಜಗುಲಿಯ ಮೇಲೆ ಇರುವ ಹತ್ತಾರು ದೇವರುಗಳನ್ನು ತಮ್ಮ ಜೋಳಿಗೆಗೆ ಹಾಕಿಕೊಂಡು ಊರ ಹೊರಗೆ ಒಯ್ದು ಬಿಸಾಡುವರು. ಮನೆಯ ಮಂದಿಯನ್ನೆಲ್ಲ ಒಂದೆಡೆ ಕುಳ್ಳಿರಿಸಿಕೊಂಡು <br />’ಅರಗು ತಿಂದು ಕರಗುವ ದೈವವ<br />ಉರಿಯ ಕಂಡರೆ ಮುರುಟುವ ದೈವವ<br />ಅಂಜಿಕೆಯಾದಡೆ ಹೂಳುವ ದೈವವ<br />ಅವಸರಬಂದರೆ ಮಾರುವ ದೈವವ <br />ಎಂತು ಸರಿಯೆಂಬೆನಯ್ಯ?’<br />ಎಂದು ಬಸವಾದಿ ಶರಣರ ವಚನಗಳನ್ನು ಮನಂಬುಗುವಂತೆ ವಿವರಿಸಿ ಹೇಳುತ್ತಾರೆ. ’ಸತ್ಯ ಶುದ್ಧ ಕಾಯಕ ಮಾಡಿದಡೆ ಎತ್ತೆತ್ತ ನೋಡಿದಡತ್ತತ್ತ ಲಕ್ಷ್ಮಿ ತಾನಾಗಿಪ್ಪಳು’ ಎಂದು ತಿಳಿಹೇಳುತ್ತಾರೆ. ”ನೀವು ಪೂಜಿಸುವ ಕರಿಲಕ್ಷ್ಮಿ- ಕೆಂಪು ಲಕ್ಷ್ಮಿ ಚಿತ್ರವನ್ನು ರೇಖಿಸಿರುವ ಕಲಾವಿದನ ಹೆಂಡತಿಯೋ, ಪ್ರೇಯಸಿಯೋ ! ಮಗಳೋ ಆಗಿದ್ದಾಳೆ”. ಆದ್ದರಿಂದ ಅರ್ಥವಿಲ್ಲದ ಇಂಥ ದೇವರುಗಳನ್ನು ಪೂಜಿಸಲೇ ಬಾರದು. ಅಪ್ಪ ಬಸವಣ್ಣನವರು ಕೊಟ್ಟ <br />’ಜಗದಗಲ ಮುಗಿಲಗಲ<br />ಮಿಗೆಯಗಲ ನಿಮ್ಮಗಲ<br />ಪಾತಾಳದಿಂದತ್ತತ್ತ ನಿಮ್ಮ ಶ್ರೀ ಚರಣ ನಿಮ್ಮ ಶ್ರೀಮಕುಟ<br />ಅಗಮ್ಯ ಅಗೋಚರ ಅಪ್ರತೀಯ<br />ಲಿಂಗವೇ ನೀವೆನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯ<br />ಎಂದು ಹೇಳಿರುವ ’ಇಷ್ಟಲಿಂಗ’ವನ್ನು ಪೂಜಿಸಬೇಕು ಎಂದು ಹೇಳುತ್ತಾರೆ. ’ಬಾರದು ಬಪ್ಪದು. ಬಪ್ಪದು ತಪ್ಪದು’ ಎಂದು ಅವರೆಲ್ಲರ ಮನಸ್ಸಿನ ಕತ್ತಲೆಯನ್ನು ’ವಚನ ದೀಪ್ತಿ’ಯ ಮೂಲಕ ಬೆಳಗಿಸುತ್ತಾರೆ. ಇಷ್ಟಾಗಿಯೂ ’ನಿಮ್ಮ ಮನೆಯ ದೇವರುಗಳು ನಿಮ್ಮನ್ನು ಕಾಡಲು ಪೀಡಲು ಶುರುಮಾಡಿದರೆ ಅವುಗಳಿಗೆಲ್ಲ ನನ್ನ ಅಡ್ರೆಸ್ ಕೊಡಿ. ಅವು ನನ್ನೊಂದಿಗೆ ಬಂದು ಗುದ್ದಾಡಲಿ’, ಎಂದು ಹಾಸ್ಯಮಯವಾಗಿ ಮಾತನಾಡುತ್ತ ಭಕ್ತನ ’ಭಯ’ವನ್ನು ಕಿತ್ತಿ ಬಿಸುಡುತ್ತಾರೆ.<br />ಬಸವಾದಿ ಶರಣರ ವಿಚಾರಗಳನ್ನು ಕರ್ನಾಟಕದ ಬಹುತೇಕ ಮಠಗಳು ತಮ್ಮ ಆಸ್ತಿಯನ್ನಾಗಿ ಮಾಡಿಕೊಂಡು ಲಿಂಗಾಯತರನ್ನು ದಿಶಾಬೂಲಗೊಳಿಸುತ್ತ ಹೊರಟಿದ್ದರೆ ಇಳಕಲ್ಲಿನ ಶ್ರೀಗಳು ಮಾತ್ರ ಅವನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆಯುತ್ತಿದ್ದಾರೆ. ಹೀಗಾಗಿ ಶ್ರೀಗಳ ಮಾತು, ನಡೆ ನುಡಿ ಭಾವಗಳೆಲ್ಲವೂ ’ಪರುಷ ’ ಎಂದರೆ ತಪ್ಪಾಗಲಾರದು.<br />ಉತ್ತರ ಕರ್ನಾಟಕದಲ್ಲಿ ಬಹಳಷ್ಟು ಜನ ಭಕ್ತರು ತಮ್ಮ ಭಕ್ತಿಯ ಪರಾಕಾಷ್ಠೆಯನ್ನು ಮೆರೆಯಲು ತಮ್ಮ ಊರಿನಿಂದ ದೊಡ್ಡ ದೊಡ್ಡ ಮಠಗಳಿಗೆ, ದೇವಸ್ಥಾನಗಳಿಗೆ ಪಾದಯಾತ್ರೆ ಹೊರಡುತ್ತಾರೆ. ದಾರಿ ಉದ್ದಕ್ಕೂ ಭಜನೆ ಮಾಡುತ್ತ, ಊರೂರುಗಳಲ್ಲಿ ಪ್ರಸಾದ ಸ್ವೀಕರಿಸಿ ಮುನ್ನಡೆಯುತ್ತಾರೆ. ಪ್ರಚಾರ ಗಿಟ್ಟಿಸುತ್ತಾರೆ. ವರ್ಷಕ್ಕೊಂದು ಸಲ ದೇವರ ಹೆಸರಿನ ಮೇಲೆ ಪಾದಯಾತ್ರೆಯ ಮಜಾ ಅನುಭವಿಸಿ ಖುಷಿ ಪಡುತ್ತಾರೆ. ಇಂಥ ಪಾದಯಾತ್ರೆಗಳನ್ನು ಹಮ್ಮಿಕೊಳ್ಳುವುದು ಕೇವಲ ಭಕ್ತರಿಗೆ ಮಾತ್ರ ಸಂಬಂಧಿಸಿದ ಕೆಲಸ ಎಂದು ಬಹಳಷ್ಟು ಜನ ಮಠಾಧೀಶರು ತಿಳಿದುಕೊಂಡಿದ್ದಾರೆ. ಆದರೆ ಮಹಾಂತಪ್ಪಗಳು ಮಾತ್ರ ’ಭಕ್ತನಿದ್ದ ಠಾವೆ ಕೈಲಾಸ’ , ’ಭಕ್ತನ ಮನೆಯಂಗಳವೆ ವಾರಣಾಸಿ’ ಎಂದು ಅರ್ಥೈಸಿಕೊಂಡಿದ್ದರಿಂದ ಇವರು ಹಲವಾರು ಸಲ ಭಕ್ತನ ಮನೆಗಳಿಗೆ ಪಾದಯಾತ್ರೆಯ ಮೂಲಕ ಹೊರಡುತ್ತಾರೆ.<br />ಸತ್ಯಂಪೇಟೆಯ ನನ್ನ ಅಜ್ಜ ಗುರಪ್ಪ ಶರಣರ ’ಬಸವ ತತ್ವ ಸಮಾವೇಶ’ಕ್ಕೆ ಐದಾರು ಬಾರಿ ’ಇಳಕಲ್ಲಿನಿಂದ-ಸತ್ಯಂಪೇಟೆ’ಯವರೆಗೆ ಪಾದಯಾತ್ರೆಯ ಮೂಲಕ ಬಂದಿದ್ದಾರೆ ಎಂಬುದೇ ಒಂದು ಇತಿಹಾಸ. ಹೀಗೆ ಇಳಕಲ್ಲಿನಿಂದ ಪಾದಯಾತ್ರೆ ಹೊರಟರೆ ಅದು ಕೇವಲ ಕಾಟಾಚಾರದ ಪಾದಯಾತ್ರೆ ಆಗಿರುವುದಿಲ್ಲ. ದಾರಿಯಲ್ಲಿ ಬರುವ ಪ್ರತಿ ಹಳ್ಳಿ ಹಳ್ಳಿಗೂ ಭೇಟಿಕೊಟ್ಟು ಆ ಊರಿನ ತುಂಬೆಲ್ಲ ಚಟಗಳನ್ನು ತಮ್ಮ ಜೋಳಿಗೆ ಹಾಕುವಂತೆ ವಿನಂತಿಸುತ್ತಾರೆ. ಕೊನೆಯಲ್ಲಿ ಬಸವಾದಿ ಶರಣರ ವಿಚಾರಗಳನ್ನು ಆ ಹಳ್ಳಿಯ ಎಲ್ಲರಿಗೂ ಸರಳವಾಗಿ ಮುಟ್ಟುವಂತೆ ವಿವರಿಸಿ ಹೇಳುತ್ತಾರೆ. ”ಕಂದಾಚಾರ , ಮೂಢನಂಬಿಕೆಗಳ ದಾಸರಾಗಿರುವ ಭಕ್ತರೆಲ್ಲ ಅದರಿಂದ ಹೊರಬರದೆ ಹೋದರೆ ನಿಮ್ಮನ್ನು ಯಾರೂ ಉದ್ಧಾರ ಮಾಡಲು ಸಾಧ್ಯವಿಲ್ಲ’ ಎಂಬುದನ್ನು ಖಚಿತವಾಗಿ ತಿಳಿಸಿಹೇಳುತ್ತಾರೆ. <br />”ಯಾವ ಮಠಾಧೀಶರ, ಸ್ವಾಮಿಗಳ ಕೈಯ್ಯಲ್ಲಿ ಏನೂ ಇಲ್ಲ. ನಿತ್ಯವೂ ಪರಿಶುದ್ಧವಾದ ಕಾಯಕ ಮಾಡಿಕೊಂಡಿರುವ ನಿಮ್ಮ ಕೈಯ್ಯಲ್ಲಿ ಎಲ್ಲವೂ ಇದೆ ಎಂದು ಎಚ್ಚರಿಸುತ್ತಾರೆ. ನೀವು ಕೊರಳಲ್ಲಿ ಕಟ್ಟಿದ ಲಿಂಗವ ಬಿಟ್ಟು ಬೆಟ್ಟದ ಲಿಂಗಕ್ಕೆ ಹೋದರೆ ಲೊಟ್ಟಿ ಮೂಳರಾಗುತ್ತೀರಿ!” ಎಂದು ಹೇಳಲು ಹಿಂದೆ - ಮುಂದೆ ನೋಡುವುದಿಲ್ಲ.<br />’ನಿಮಗೆ ಯಾರಾದರೂ ತಾಯಿತ- ಕರಿದಾರ- ನಿಂಬಿಕಾಯಿ ಮಂತ್ರಿಸಿಕೊಡುವುದು ಅವರ ವ್ಯಾಪಾರವೇ ಹೊರತು ಅದರಿಂದ ಏನೂ ಸಾಧ್ಯವಿಲ್ಲ ಎಂದು ಮನಮುಟ್ಟುವಂತೆ ಹೇಳುತ್ತಾರೆ. ’ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ. ಸತ್ಯ ಶುದ್ಧವಾದ ಕಾಯಕ ಮಾಡಿ. ಮಾಡಿದೆನೆಂಬುದು ಮನದಲ್ಲಿ ಹೊಳೆದೊಡೆ ಎಡಿಸಿ ಕಾಡಿತ್ತು ಶಿವಡಂಗುರ ಹಾಗಾಗಿ ಭಕ್ತರೆಲ್ಲ ನಿಷ್ಕಲ್ಮಷ ಹೃದಯದಿಂದ ದಾಸೋಹ ಮಾಡಬೇಕೆಂದು ತಿಳಿ ಹೇಳುತ್ತಾರೆ. ಅವರೆಲ್ಲ ದಾಸೋಹ ತತ್ವವನ್ನು ಅಳವಡಿಸಿಕೊಳ್ಳುವಂತೆ ವಿವರಿಸುತ್ತಾರೆ. ಬಸವಾದಿ ಶರಣರು ಕನಸಿದ ಸಮಾಜವನ್ನು ನಾವೆಲ್ಲ (ಕಾವಿ ಹಾಕಿದ ಜಾತಿ ಜಂಗಮರು) ತಿಂದು ಹಾಕಿದ್ದೇವೆ. ’ದಯವೇ ಧರ್ಮದ ಮೂಲ’ವಾಗಿದ್ದ ಬಸವಣ್ಣನವರ ಧರ್ಮವನ್ನು ಇಂದು ’ಭಯವೇ ಧರ್ಮದ ಮೂಲ’ ಎಂಬಂತೆ ಚಿತ್ರಿಸಿದ್ದೇವೆ. ’ಲಾಂಛನಕ್ಕೆ ಶರಣೆಂಬೆ’ ಎಂಬ ಬಸವಣ್ಣನವರ ಮಾತನ್ನು ಹೇಳಿ ಸಾಕಷ್ಟು ಜನ ಭಕ್ತರನ್ನು ದಿಕ್ಕು ತಪ್ಪಿಸಿದ್ದೇವೆ. ಆದರೆ ಬಸವಣ್ಣನವರು ಅದೇ ವಚನದಲ್ಲಿ ಹೇಳಿದ ’ಲಾಂಛನಕ್ಕೆ ತಕ್ಕ ಆಚಾರವಿಲ್ಲದಿದ್ದಡೆ ಕೂಡಲ ಸಂಗಮದೇವ ಸಾಕ್ಷಿಯಗಿ ಛೀ ಎಂಬೆ’ ಎಂಬ ಮಾತನ್ನು ಅಪ್ಪಿ ತಪ್ಪಿಯೂ ವಿವರಿಸಿ ಹೇಳಿಲ್ಲ. ಒಟ್ಟಿನಲ್ಲಿ ಆತ್ಮವಂಚನೆಯ ಬಾಳನ್ನು ಮಠಾಧೀಶರು ನಡೆಸಿದ್ದೇವೆ. ಹೀಗಾಗಿ ದಿಕ್ಕು ತಪ್ಪಿದ ನಾವೆಯಲ್ಲಿ ಕುಳಿತಿರುವ ಭಕ್ತರು ದಾರಿ ತಪ್ಪಿದ್ದಾರೆ. ಮೂಲ ’ಲಿಂಗಾಯತ’ವನ್ನು ಮರೆತು. ಮತ್ತದೆ ಜಾತಿ ವ್ಯವಸ್ಥೆಯ ಬಲೆಯಲ್ಲಿ ಸಿಕ್ಕು ಒದ್ದಾಡುತ್ತಿದ್ದಾರೆ ಎಂದು ವ್ಯಥೆ ಪಡುತ್ತಾರೆ.<br />ಒಟ್ಟಿನಲ್ಲಿ ಬಸವ ಮಹಾಮಣಿಯವನ್ನು ಹೊತ್ತುಕೊಂಡು ಮುನ್ನಡೆದಿರುವ ಇಳಕಲ್ಲಿನ ಶ್ರೀ ಮಹಾಂತಸ್ವಾಮಿಗಳನ್ನು ’ಬಸವ ತತ್ವದ ದಂಡನಾಯಕರು’ ಎಂದು ಖಚಿತವಾಗಿ ಹೇಳಬಹುದು. ಬಸವಣ್ಣನವರ ಮಾತೃ ಹೃದಯ, ಲಘು ಹಾಸ್ಯ, ವಿಡಂಬನೆ, ತಮಾಷೆ, ವ್ಯಂಗ್ಯವನ್ನು ಸಂಪೂರ್ಣವಾಗಿ ಮಹಾಂತಪ್ಪಗಳು ಅಳವಡಿಸಿಕೊಂಡಿದ್ದಾರೆ. ಮಾಡಿದ ತಪ್ಪನ್ನು - ತಪ್ಪೆಂದು ಒಪ್ಪಿಕೊಳ್ಳುವ ಎದೆಗಾರಿಕೆ ಅನೇಕರಿಗೆ ಇರುವುದೆ ಇಲ್ಲ. ಆದರೆ ಮಹಾಂತಪ್ಪಗಳು ಮಾತ್ರ ಇದಕ್ಕೆ ಹೊರತಾದವರು.<br />ಸೊಲ್ಲಾಪುರದ ಕಲ್ಯಾಣ ನಾಡಿನ ಶರಣ ಸಮ್ಮೇಳನದಲ್ಲಿ ನನ್ನ ತಂದೆ ಲಿಂಗಣ್ಣ ಸತ್ಯಂಪೇಟೆಯವರು: ” ಮಠಾಧೀಶರೆಲ್ಲ ಆತ್ಮವಂಚನೆಯ ಬಾಳು ಬದುಕುತ್ತಿದ್ದಾರೆ. ಅಲ್ಲದೆ ಬಸವಾದಿ ಶರಣರ್ಯಾರು ಸನ್ಯಾಸ ಶ್ರೇಷ್ಠ ಎಂದು ಹೇಳಿಲ್ಲ. ಹುಸಿ ಬ್ರಹ್ಮಚರ್ಯಕ್ಕೆ ಜೋತುಬಿದ್ದ ಲಿಂಗಾಯತ ಮಠಾಧೀಶರುಗಳೆಲ್ಲ ತಮ್ಮ ಮಠಗಳಲ್ಲಿ ಅನಧಿಕೃತವಾಗಿ ಹೆಂಡತಿಯರನ್ನು ಮಕ್ಕಳನ್ನು ಹೊಂದಿದ್ದಾರೆ. ಆದ್ದರಿಂದ ಇನ್ನು ಮುಂದೆ ಮಠಾಧೀಶರುಗಳಿಗೆಲ್ಲ ಮದುವೆ ಮಾಡಿ, ಪೀಠಕ್ಕೆ ಕುಳ್ಳಿರಿಸಬೇಕು” ಎಂದು ಹೇಳಿದರು. <br />ಈ ಮಾತುಗಳನ್ನು ಕೇಳಿದ ಆ ಸಭೆಯಲ್ಲಿ ಕುಳಿತಿದ್ದ ಬಹುತೇಕ ಮಠಾಧೀಶರು ನನ್ನ ತಂದೆಯವರ ಅಭಿಪ್ರಾಯವನ್ನು ಖಂಡಿಸಿ ಮಾತನಾಡಿದರು. ಆದರೆ ಇಳಕಲ್ಲಿನ ಶ್ರೀಗಳು ಮಾತ್ರ : ”ಲಿಂಗಣ್ಣನವರು ಆಡಿರುವ ಮಾತುಗಳು ವಿಚಾರ ಮಾಡುವಂತೆ ಇವೆ. ಈ ಕುರಿತು ಸಮಾಜ ಮುಕ್ತವಾಗಿ ಚರ್ಚಿಸಿ ಒಂದು ನಿರ್ಣಯಕ್ಕೆ ಬರಬೇಕಾಗಿದೆ ಎಂದು ಒತ್ತಿ ಹೇಳಿದರು ಮಾತ್ರವಲ್ಲ, ಮಠಾಧೀಶರು ಆತ್ಮವಂಚನೆಗೆ ಹೆಸರಾಗಿದ್ದೇವೆ ”ಎಂತಲೂ ಬಣ್ಣಿಸಿಕೊಂಡರು.<br />ಬಸವಾದಿ ಶರಣರ ವಿಚಾರಗಳನ್ನು ಬದುಕುವ ಹಾಗೂ ಅವನ್ನು ಜನತೆಗೆ ವಿವರಿಸಿ ಹೇಳುವ ಕವಿ, ಸಾಹಿತಿಗಳನ್ನು ಕಂಡರೆ ಅವರಿಗೆ ಎಲ್ಲಿಲ್ಲದ ಅಕ್ಕರೆ. ಆದ್ದರಿಂದ ಇಂಥವರ ಮನೆಗಳನ್ನು ಹುಡುಕಿಕೊಂಡು ಅವರೇ ಹೊರಟು ನಿಲ್ಲುತ್ತಾರೆ. ಅವರೊಂದಿಗೆ ಲೋಕಾಭಿರಾಮವಾಗಿ ಚರ್ಚಿಸುತ್ತಾರೆ. ಪೀಠಾಧಿಕಾರಿಯ ಹಮ್ಮು-ಬಿಮ್ಮುಗಳನ್ನು ತೋರಿಸದೆ ಅವರ ಮನೆಯ ಸದಸ್ಯರಲ್ಲಿ ಒಬ್ಬರಾಗಿ ನಿಲ್ಲುತ್ತಾರೆ. ಗುಲ್ಬರ್ಗಾ, ಬೀದರ್ಗೆ ಹೋಗುವ ಪ್ರಸಂಗ ಬಂದಾಗಲೆಲ್ಲ ನಮ್ಮ ಮನೆಗೆ ಮಹಾಂತಪ್ಪಗಳು ಬಂದು ಹೋಗಲೇ ಬೇಕು. ಇಲ್ಲದೆ ಹೋದರೆ ಏನೋ ಕಳಕೊಂಡ ಭಾವ ಅವರನ್ನು ಆವರಿಸಿದಂತಾಗುತ್ತದೆ ಎನ್ನುತ್ತಾರೆ.<br />ತೀರಾ ಇತ್ತೀಚೆಗೆ ಯಾವುದೊ ಕಾರ್ಯಕ್ರಮವನ್ನು ಮುಗಿಸಿಕೊಂಡು ಎಂದಿನಂತೆ ನಮ್ಮ (ಶಹಾಪುರದ) ಮನೆಗೆ ಬರುವವರು ಬಾರದೆ, ಮನೆಯನ್ನು ದಾಟಿ ಅವರ ಕಾರು ಮುನ್ನಡೆಯಿತು. ನನಗಾದರೂ ಒಳಗೊಳಗೆ ಕಳವಳ. ಡ್ರೈವರ್ ಮರೆತು ಮುಂದೆ ಹೋದನೆ? ಎಂಬ ಆತಂಕ. ಅಥವಾ ಮನೆ ಮನೆಯ ಮುಂದುಗಡೆ ಇರುವ ಶ್ರೀಚರಬಸವೇಶ್ವರ ಗದ್ದುಗೆಯಲ್ಲಿ ಯಾವುದಾದರೂ ಕಾರ್ಯಕ್ರಮ ಇರಬಹುದೆ? ಎಂಬ ಕುತೂಹಲ. ತಕ್ಷಣ ಅವರ ಮೊಬೈಲ್ಗೆ ಪೋನ್ ಮಾಡಿದೆ. ’ಅಲ್ಲೆ ಮನೆಯಲ್ಲೆ ಇರು, ಈಗ ಬರುತ್ತೇನೆ. ನಮ್ಮ ಜೊತೆಗಿರುವ ಸ್ವಾಮಿಗಳೊಬ್ಬರು ಶ್ರೀ ಸಿದ್ಧಲಿಂಗೇಶ್ವರ ಬೆಟ್ಟಕ್ಕೆ ಹೋಗೋಣ ಎಂದು ಹೇಳಿದ್ದರಿಂದ ನಡೆದಿದ್ದೇವೆ’ ಅಂದರು. ನನಗೋ ತಡೆಯಲಾಗಲಿಲ್ಲ. ಅವರನ್ನು ಬೆನ್ನಟ್ಟಿ ನಾನೂ ಹೋದೆ. ಅಲ್ಲಿ ಆಗಲೆ ಅವರನ್ನು ಕುಳ್ಳಿರಿಸಿಕೊಂಡು ಬಸವಲಿಂಗ ಶರಣರು ಕಲ್ಯಾಣದ ಶರಣರ ಕುರಿತು ಹೇಳಿದ ಹಾಡುಗಳನ್ನು ಹಾಡುತ್ತಿದ್ದರು. ಹಾಡು ಮುಗಿಯಿತು. ಕೊನೆಗೆ ಅಲ್ಲಿ ಸೇರಿದ ಮಠದೊಳಗಣ ಜನರೆಲ್ಲ ವಂದಿಸಿ - ಅರ್ಚಿಸಿ, ಕಾಣಿಕೆ ನೀಡಿದರು. <br />ಆ ಕಾಣಿಕೆಯನ್ನು ಕೈಯ್ಯಲ್ಲಿ ಹಿಡಕೊಂಡು, ತಮ್ಮಲ್ಲಿಯದೂ ಇನ್ನಷ್ಟು ಸೇರಿಸಿಕೊಂಡು ದೂರದಲ್ಲಿ ಇದೆಲ್ಲವನ್ನೂ ನೋಡುತ್ತ ನಿಂತಿದ್ದ ನನ್ನನ್ನು ಹತ್ತಿರ ಕರೆದು ತಮ್ಮ ಕೈಯ್ಯಲ್ಲಿ ರೂಪಾಯಿಗಳನ್ನು ತೆಗೆದುಕೊಳ್ಳುವಂತೆ ಹೇಳಿದರು. ನನಗೆ ಇದೆಲ್ಲ ಕೊಂಚ ಇರಿಸು ಮುರಿಸು ಅನ್ನಿಸಿತು. ನನ್ನ ಜೇಬಿನಲ್ಲಿ ರೂಪಾಯಿಗಳನ್ನು ಇಡಲು ಹವಣಿಸುತ್ತಿದ್ದ ಕೈಯ್ಯನ್ನು ತಡೆಹಿಡಿದೆ. ಆಗ ಅವರು ’ಸುಮ್ಕ ತೋಗೋಬೇಕು. ನೀವೆಲ್ಲ ಬಸವಣ್ಣನ ಕೈಂಕರ್ಯ ಮಾಡುವವರು. ಇದೆಲ್ಲ ನಿಮಗೆ ಸೇರಬೇಕು’ ಎಂದೆಲ್ಲ ಹೇಳಿದಾಗ ಮನ ತುಂಬಿಬಂತು. ಕಣ್ಣಾಲಿಯಲ್ಲಿ ನೀರು ತುಂಬಿಕೊಂಡಿತು. ಮಾತು ಮೌನವಾಗಿ, ಅದು ಬಂಗಾರವಾಯಿತು.<br />೧೯೯೭ ರ ಜೂನ್ ೧೮ ರಂದು ಜರುಗಿದ ನನ್ನ ಹಾಗೂ ಶರಾವತಿಯ ಕಲ್ಯಾಣ ಮಹೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿ ಕಳೆ ತಂದರು. ನನ್ನ ಅಜ್ಜನಾದ ಗುರಪ್ಪ ಯಜಮಾನರ ಪುಣ್ಯ ಸ್ಮರಣೆಯ ದಿನ ನನ್ನ ಮದುವೆ ಏರ್ಪಡಿಸುವಂತೆ ಸೂಚಿಸಿ, ಆ ದಿನ ಕ್ರಾಂತಿಯ ಗಂಗೋತ್ರಿ ಅಕ್ಕನಾಗಮ್ಮಳ ಬಗೆಗೆ ಒಂದು ವಿಚಾರಗೋಷ್ಠಿ ಏರ್ಪಡಿಸಿದ್ದು ಮರೆಯಲಾಗದ್ದು. ಹಂದರ ಹಾಕದೆ, ಬಾಸಿಂಗ ಕಟ್ಟದೆ, ಸುಲಿಗೆ ಸುತ್ತದೆ, ಮದುಮಕ್ಕಳನ್ನು ಮಾಡದೆ, ಸರಳ ಹಾಗೂ ಸಹಜವಾಗಿ ನಡೆದ ಮದುವೆಯ ಸಾರಥ್ಯವನ್ನು ಮಹಾಂತಪ್ಪಗಳು ವಹಿಸಿದ್ದರು ಎಂಬುದೇ ನನಗೊಂದು ಹೆಮ್ಮೆ.<br />’ನಡೆದುದೇ ಮಾರ್ಗವಾದುದು ಶಿವನ ಮದಕರಿಗೆ<br />ನುಡಿದುದೇ ವೇದವಾದುದು ಶಿವನ ಶರಣರಿಗೆ’<br />ಇದು ಮಹಾಕವಿ ಹರಿಹರನ ಉಕ್ತಿ. ’ಮದವೇರಿದ ಆನೆಯು ಅರಣ್ಯದ ದಾರಿ ಹುಡುಕಿಕೊಂಡು ಹೋಗುವುದಿಲ್ಲ. ಅದು ನಡೆದು ಹೋದಲ್ಲಿಯೇ ದಾರಿಯಾಗುತ್ತದೆ. ಹಾಗೆಯೇ ಶರಣ ಲೋಕದಿಚ್ಚೆಯ ನುಡಿಯ, ಲೋಕದಿಚ್ಚೆಯ ನಡೆಯ , ಅವರು ಸರ್ವ ಸ್ವತಂತ್ರರು; ಅವರು ಪೂಜಾರಿಗಳ ನೆರವಿಲ್ಲದೆ , ಮಧ್ಯವರ್ತಿಗಳ ಕಾಟವಿಲ್ಲದೆ ನೇರವಾಗಿ ದೇವರೊಡನೆ ಭಕ್ತನ ಸಂಬಂಧವನ್ನಿಟ್ಟುಕೊಂಡ ಮಹಾನುಭಾವಿಗಳೆ ಶರಣರು’ ಎಂದು ಉತ್ತಂಗಿ ಚೆನ್ನಪ್ಪನವರು ಕಲ್ಯಾಣದ ಅಂದಿನ ಶರಣ ಕುರಿತು ಹೇಳುತ್ತಾರೆ. <br />ಇಂಥ ಎಲ್ಲಾ ವೈಶಿಷ್ಟ್ಯತೆಗಳನ್ನು ಮುಪ್ಪರಿಗೊಳಿಸಿಕೊಂಡಿರುವ ಮಹಾಂತ ಅಪ್ಪಗಳೂ ಇಂಥ ಶರಣರಲ್ಲಿ ಒಬ್ಬರು ಎಂದು ಹೇಳಿದರೆ ಅತಿಶಯೋಕ್ತಿಯ ಮಾತಾಗಲಾರದು. ಹೊಗಳಿಕೆ ಉಬ್ಬದ, ತೆಗಳಿಕೆ ಕುಗ್ಗದ, ಅಗ್ಗದ ಪ್ರಚಾರಕ್ಕೆ ತಮ್ಮನ್ನು ತಾವು ಎಂದೂ ಒಡ್ಡಿಕೊಳ್ಳದ ಬಸವ ಮಹಾ ಮಣಿಯವನ್ನು ಹೊತ್ತುಕೊಂಡು ಒಯ್ಯುತ್ತಿರುವ ಮಹಾಂತಪ್ಪಗಳು ನಿಜವಾದ ಶರಣ ಜಂಗಮರು ಎಂದು ಹೇಳಿದರೆ ಅತಿಶಯೋಕ್ತಿಯ ಮಾತು ಆಗಲಿಕ್ಕಿಲ್ಲ, ಅಲ್ಲವೆ?<br /><br />ವಿಶ್ವಾರಾಧ್ಯ ಸತ್ಯಂಪೇಟೆ <br />ಪತ್ರಕರ್ತರು , ಬಸವ ಮಾರ್ಗ ರಸ್ತೆ , ಸಿ.ಬಿ.ಕಾಲೋನಿ ಶಹಾಪುರ - ಯಾದಗಿರ (ಜಿಲ್ಲೆ), ಮೊಬೈಲ್ ; ೯೪೮೦೧೬೧೩೧೫Unknownnoreply@blogger.com0tag:blogger.com,1999:blog-2647129451779812999.post-15797493747139716062011-07-10T01:12:00.000-07:002011-07-10T01:17:34.096-07:00ಬಸವ ತತ್ವದ ದಂಡನಾಯಕರು : ಇಳಕಲ್ಲಿನ ಶ್ರೀ ಮಹಾಂತಶಿವಯೋಗಿಗಳು<a onblur="try {parent.deselectBloggerImageGracefully();} catch(e) {}" href="http://4.bp.blogspot.com/-xjUoj6MwlbI/ThlfaWp3ZqI/AAAAAAAAAEM/YIaTOQP_euA/s1600/22902660%255B1%255D.jpg"><img style="float:left; margin:0 10px 10px 0;cursor:pointer; cursor:hand;width: 64px; height: 80px;" src="http://4.bp.blogspot.com/-xjUoj6MwlbI/ThlfaWp3ZqI/AAAAAAAAAEM/YIaTOQP_euA/s320/22902660%255B1%255D.jpg" border="0" alt=""id="BLOGGER_PHOTO_ID_5627634115738560162" /></a><br />ಕಲ್ಯಾಣ ನಾಡಿನ ಶರಣ ಸಮ್ಮೇಳನದ ವೇದಿಕೆಯ. ಮೇಲೆ ಚಿತ್ರದುರ್ಗದ ಇಂದಿನ ಡಾ.ಶಿವಮೂರ್ತಿ ಶರಣರು, ಇಳಕಲ್ಲಿನ ಚಿತ್ತರಗಿ ಮಹಾಂತಶಿವಯೋಗಿಗಳು, ಭಾಲ್ಕಿಯ ಶ್ರೀ ಚೆನ್ನಬಸವ ಪಟ್ಟದ್ದೇವರು, ಹುಲಸೂರಿನ ಭಾತಂಬ್ರದ ಸ್ವಾಮಿಗಳಲ್ಲದೆ ಹಲವಾರು ಜನ ಮಠಾಧೀಶರುಗಳು ; ಸ್ವಾಮಿ ಅಗ್ನಿವೇಶ್, ಸಮ್ಮೇಳನಾಧ್ಯಕ್ಷರಾದ ಶ್ರೀ ಸಿದ್ಧಲಿಂಗಯ್ಯ ಮುಂತಾದ ವಿಚಾರವಾದಿಗಳು ಕುಳಿತುಕೊಂಡಿದ್ದರು. ರಾಮವಿಲಾಸ್ ಪಾಸ್ವಾನ್ ಎಂಬ ಮಾಜಿ ಕೇಂದ್ರ ಸಚಿವರು ಬಸವಣ್ಣನವರನ್ನು ಕುರಿತು ಓತಪ್ರೋತವಾಗಿ ಮಾತನಾಡುತ್ತಿದ್ದರು. ಕಲ್ಯಾಣ ಕ್ರಾಂತಿಯ ಆ ದಿನಗಳನ್ನು ನೆನಪಿಸುತ್ತ ಸಭೆಗೆ ಸಭೆಯನ್ನೆ ಮಂತ್ರಮುಗ್ಧವಾಗುವಂತೆ ಮಾಡಿದರು. ಬಸವಾದಿ ಶರಣರ ವಿಚಾರಗಳನ್ನು ರಾಮವಿಲಾಸ್ ಪಾಸ್ವಾನ್ ಎಷ್ಟು ಚೆನ್ನಾಗಿ ಓದಿ, ಅರ್ಥೈಸಿಕೊಂಡಿದ್ದಾರಲ್ಲ ! ಎಂದು ಅಲ್ಲಿರುವ ಎಲ್ಲರೂ ಬೆರಗುಗೊಂಡಿದ್ದರು. ಒಡನೆಯೆ ಅದೇನನ್ನಿಸಿತೋ, ”ಬಸವಣ್ಣನವರ ಅನುಯಾಯಿಗಳೆಂದು ಹೆಮ್ಮೆಯಿಂದ ಹೇಳಿಕೊಳ್ಳುವ ಯಾರೂ ಇಂದಿಗೂ ಬಸವಣ್ಣನವರಂತೆ ನಡೆದುಕೊಂಡಿಲ್ಲ. ಸ್ವಾಮಿ, ಜಗದ್ಗುರುಗಳೆಂಬುವವರಂತೂ ಶರಣರ ಜೀವನದ ಬಹುಮುಖ್ಯ ದ್ರವ್ಯವಾದ ಅಸ್ಪೃಶ್ಯತೆಯನ್ನು ತಮ್ಮ ಮಠಗಳಲ್ಲಿ ಇನ್ನೂ ಉಳಿಸಿಕೊಂಡು ಬಂದಿದ್ದಾರೆ” ಎಂದು ನೇರವಾಗಿ ಸ್ವಾಮಿಗಳನ್ನು ತರಾಟೆಗೆ ತೆಗೆದುಕೊಂಡರು. <br />ವೇದಿಕೆಯ ಮೇಲೆ ಆಸೀನರಾಗಿರುವ ಮಠಾಧೀಶರನ್ನು ನೋಡುತ್ತ : ”ಬಸವಣ್ಣನವರ ಆದರ್ಶಗಳನ್ನು ಇಂಥ ಸಭೆಗಳ ಮೂಲಕ ಪುಂಖಾನುಪುಂಖವಾಗಿ ಹೇಳುತ್ತಿರಲ್ಲ, ನೀವು ಎಂದಾದರೂ ನಿಮ್ಮ ಮಠಗಳಿಗೆ ಉತ್ತರಾಧಿಕಾರಿಯಾಗಿ ದಲಿತ ಮೂಲದ ವ್ಯಕ್ತಿಯನ್ನು ಆಯ್ಕೆ ಮಾಡಿದ್ದೀರಾ? ಹೋಗಲಿ, ಇನ್ನು ಮುಂದಾದರೂ ನೀವು ನಿಮ್ಮ ಪೀಠಗಳಿಗೆ ದಲಿತರನ್ನು ನೇಮಿಸಿಕೊಳ್ಳುತ್ತೀರಾ?” ಎಂದು ನೇರವಾಗಿ ಪ್ರಶ್ನಿಸಿದರು. ಅದುವರೆಗೆ ಮಹಾಜನ್ ಅವರ ಮಾತುಗಳನ್ನು ಕೇಳುತ್ತ ಆನಂದ ತುಂದಿಲರಾಗಿದ್ದ ಬಹುತೇಕ ಲಿಂಗಾಯತ ಮಠಾಧೀಶರ ಮುಖಗಳು ಒಮ್ಮಿದೊಮ್ಮೆ ಕಳಾಹೀನವಾದವು. ಒಬ್ಬರ ಮುಖ ಒಬ್ಬರು ಮಿಕಿಮಿಕಿ ನೋಡುತ್ತ ಅನಿರೀಕ್ಷಿತವಾಗಿ ಬಂದ ಪಾಸ್ವಾನ್ ಮಾತುಗಳು ಅವರನ್ನು ಇಕ್ಕಟ್ಟಿಗೆ ಸಿಕ್ಕಿಸಿದ್ದವು. ಅಲ್ಲಿ ಸೇರಿದ್ದ ಜನವಂತೂ ಉಸಿರನ್ನು ಬಿಗಿಹಿಡಿದು ಮುಂದೆ ಸಭೆ ಯಾವುದರ ಕಡೆ ತಿರುಗಬಹುದು ? ಎಂಬ ಕುತೂಹಲದಿಂದ ಕಾದುಕುಳಿತಿದ್ದರು.<br />ದಟ್ಟವಾದ ಆತಂಕ ಹಾಗೂ ನಿಶಬ್ದವನ್ನು ಸೀಳಿ ಬಂದಂತೆ ಇಳಕಲ್ಲಿನ ಮಹಾಂತಶಿವಯೋಗಿಗಳು ಎದ್ದು ನಿಂತರು. ”ನಮ್ಮ ಚಿತ್ತರಗಿ ಇಳಕಲ್ಲಿನ ಪೀಠಕ್ಕೆ ದಲಿತ ಮೂಲದ ಬಸವಾಯತನನ್ನು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡುತ್ತೇವೆ” ಎಂಬ ಭರವಸೆ ನೀಡಿದರು. ಆಗ ಸಭೆಯಲ್ಲಿ ನೆರೆದಿದ್ದ ಬಸವಣ್ಣನವರ ಅನುಯಾಯಿಗಳು ಅತ್ಯಂತ ಖುಷಿಯಿಂದ ಚಪ್ಪಾಳೆ ತಟ್ಟಿದರು. ಮಹಾಜನ್ ಅವರಂತೂ ಹೆಚ್ಚು ಖುಷಿಗೊಂಡು ಇಳಕಲ್ಲಿನ ಮಹಾಂತಸ್ವಾಮಿಗಳನ್ನು ಅಭಿನಂದಿಸಿದರು. <br />ಹನ್ನೆರಡನೆಯ ಶತಮಾನದಲ್ಲಿ ’ಶೀಲವಂತ’ ಹಾಗೂ ’ಲಾವಣ್ಯಮ್ಮರ ವಿವಾಹವನ್ನು ಅರಗಿಸಿಕೊಳ್ಳದ ಅಂದಿನ ಸಮಾಜ ಕ್ಷಿಪ್ರ ಕ್ರಾಂತಿಗೆ ಗುರಿಯಾಗಿತ್ತು. ಹರಳಯ್ಯ ಹಾಗೂ ಮಧುವರಸರ ಕುಟುಂಬಗಳ ಸದಸ್ಯರು ಎಳೆಹೂಟಿಯಂತಹ ಬರ್ಬರ ಶಿಕ್ಷೆಗೆ ಗುರಿಯಾದ ಸಂಗತಿ ಇತಿಹಾಸ ಸ್ಪಷ್ಟವಾಗಿ ಹೇಳುತ್ತಿತ್ತು. ಶರಣರ ವಿಚಾರಗಳು ಎಷ್ಟೆ ಪ್ರಗತಿಪರವಾಗಿದ್ದರೂ, ಸಮಾಜ ಮುಖಿಯಾಗಿದ್ದರೂ, ವಚನ ಸಾಹಿತ್ಯವನ್ನು ಎಷ್ಟೇ ಕೊಂಡಾಡಿದರೂ ಇವತ್ತಿಗೂ ದಲಿತ ಮೂಲದ ಯಾವೊಬ್ಬ ವ್ಯಕ್ತಿಯನ್ನು ಮಠಾಧೀಶನನ್ನಾಗಿ ನೇಮಿಸಿದ್ದು ಇರಲಿಲ್ಲ. ಇಂಥ ವಾಸ್ತವ ಸಂದರ್ಭದಲ್ಲಿ ಇಳಕಲ್ಲಿನ ಶ್ರೀಗಳು ಬಹಿರಂಗಸಭೆಯಲ್ಲಿ ಆಡಿದ ಮಾತುಗಳು ಸಮಾಜದಲ್ಲಿ ಅಲ್ಲೊಲ ಕಲ್ಲೊಲ ಉಂಟು ಮಾಡಿದವು. ಜಾತಿ ಜಂಗಮರಿಂದ ತುಂಬಿ ತುಳುಕುತ್ತಿರುವ ಲಿಂಗಾಯತ ಮಠಾಧಿಪತಿಗಳು ಇಳಕಲ್ ಶ್ರೀಗಳ ಮಾತುಗಳಿಂದ ಒಳಗೊಳಗೆ ಉರಿದೆದ್ದರು. <br />’ಭಕ್ತಿ ಶುಭಾಷಯ ನುಡಿಯ ನುಡಿವೆ, ನುಡಿದಂತೆ ನಡೆವೆ<br />ನಡೆಯೊಳಗೆ ನುಡಿಯ ಪೂರೈಸುವೆ<br />ಮೇಲೆ ತೂಗುವ ತ್ರಾಸ ಕಟ್ಟಳೆ ನಿಮ್ಮ ಕೈಯ್ಯಲ್ಲಿದೆ<br />ಒಂದು ಜವೆ ಕೊರತೆಯಾದಡೆ ಎನ್ನನದ್ದಿ ನೀ ಎದ್ದು ಹೋಗು’<br />ಎಂಬ ಬಸವಣ್ಣನವರ ಮಾತಿನಂತೆ ಇಳಕಲ್ಲಿನ ಶ್ರೀಗಳು ತಮ್ಮ ಮಾತಿಗೆ ಬದ್ಧರಾಗಿದ್ದರು. ಅವರಿಗೆ ಆಗ ರಾಜ್ಯದ ರಾಷ್ಟ್ರದ ಹಲವಾರು ಜನ ರಾಜಕಾರಣಿಗಳಿಂದ, ಪ್ರಭಾವಿ ವ್ಯಕ್ತಿಗಳಿಂದ ಹೇಳಿಸಿ ನೋಡಿದರು. ತಮ್ಮ ಅಭಿಪ್ರಾಯವನ್ನು ಬದಲಾಯಿಸುವಂತೆ ಒತ್ತಾಯಿಸಿದರು. ಕೆಲವರು ಬೆದರಿಕೆಯನ್ನು ಒಡ್ಡಿದರು. ಆದರೆ ’ನ್ಯಾಯ ನಿಷ್ಠುರಿ ಶರಣ ದಾಕ್ಷಿಣ್ಯ ಪರನಲ್ಲ. ಲೋಕವಿರೋಧಿ ಶರಣ ಯಾರಿಗೂ ಅಂಜಲಾರ’ ಎಂಬಂತೆ ಇಳಕಲ್ಲಿನ ಶ್ರೀಗಳು ನಡೆದು ಹೋದರು. ಮೊಟ್ಟ ಮೊದಲನೆಯದಾಗಿ ತಮ್ಮ ಇಳಕಲ್ಲಿನ ಶಾಖಾ ಮಠವಾದ ಸಿದ್ಧಯ್ಯನ ಕೋಟೆಗೆ ದಲಿತ ಮೂಲದ ಬಸವಾಯತರಾದ ಶ್ರೀ ಬಸವಲಿಂಗ ಸ್ವಾಮಿಗಳನ್ನು ನೇಮಿಸಿ ತಮ್ಮ ಬಸವತನವನ್ನು ಉಳಿಸಿಕೊಂಡರು.<br />ಇದಿಷ್ಟೆ ಅಲ್ಲದೆ ಲಿಂಗಸೂಗೂರಿನ ತಮ್ಮ ಮಹಾಂತ ಮಠಕ್ಕೂ ಬಂಜಾರ ಸಮುದಾಯದ ಶ್ರೀ ಸಿದ್ದಲಿಂಗ ಶರಣನನ್ನು ನೇಮಿಸಿ ಮತ್ತದೆ ಕರ್ಮಠ ಲಿಂಗಾಯತರ ರಗಳೆ ಮೈಮೇಲೆ ಎಳಕೊಂಡರು. ಈ ಮೊದಲಿದ್ದ ಮಹಾಂತಪ್ಪಗಳ ಮಠವನ್ನೆ ಕುಯುಕ್ತಿಯಿಂದ ಅಲ್ಲಿನ ಜಾತಿ ಜಂಗಮವರು ಕಸಗೊಂಡರು. ಆದರೆ ಅಲ್ಲಿರುವ ಶರಣ ಭಕ್ತರ ನೆರವಿನೊಂದಿಗೆ ಮಹಾಂತ ಶಿವಯೋಗಿಗಳ ಶಾಖಾ ಮಠವನ್ನು ಕಟ್ಟಿ ತೋರಿಸಿ, ಜನ ಮಾನಸದಲ್ಲಿ ಹೊಸ ಹುಟ್ಟನ್ನು ಹುರುಪನ್ನು ತುಂಬಿದರು.<br />ಇಳಕಲ್ಲಿನ ತಮ್ಮ ಮೂಲ ಪರಂಪರೆಯ ಪೀಠಕ್ಕೂ ಮೈಸೂರಿನ ಶ್ರೀ ಸಿದ್ಧರಾಮ ಸ್ವಾಮಿಗಳನ್ನು ಪಟ್ಟಗಟ್ಟುವಾಗ ಜಾತಿ ಜಂಗಮರ ಭಾರಿ ವಿರೋಧ ಎದುರಿಸಬೇಕಾಯಿತು. ಪಟ್ಟಾಧಿಕಾರದ ಸಂದರ್ಭದಲ್ಲಿ ವೇದಿಕೆಯ ಕಡೆಗೆ ಕಲ್ಲು ತೂರಿದರು. ವಿರೋಧಿ ಘೋಷಣೆ ಕೂಗಿದರು. ಇಡೀ ಕಾರ್ಯಕ್ರಮವನ್ನು ರಣಾಂಗಣವಾಗುವಂತೆ ವ್ಯವಸ್ಥಿತ ಪಿತೂರಿ ಕೈಗೊಂಡರು. ಆದರೂ ಮಹಾಂತಪ್ಪಗಳು ತಾವು ಕೈಕೊಂಡ ಬಸವ ಪರಂಪರೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡಿದರು. <br />ಶರಣತನ ಅನ್ನುವುದು ನಿಜಕ್ಕೂ ಕಠಿಣ. ’ಅದು ಭಕ್ತಿಯಂತೆ ಹೋಗುತ್ತ ಬರುತ್ತ ಕೊಯ್ಯುವ ಗರಗಸ’. ಆದರೆ ಇಳಕಲ್ಲಿನ ಪೂಜ್ಯ ಶ್ರೀ ಮಹಾಂತಶಿವಯೋಗಿಗಳು ಮಾತ್ರ ಅದನ್ನು ತಮ್ಮ ಮಠಗಳಲ್ಲಿ ಹಾಗೂ ನಡೆಗಳಲ್ಲಿ ಅನುಚಾನವಾಗಿ ಹಾಸಿ ಹೊದ್ದುಕೊಂಡು ನಡೆದಿದ್ದಾರೆ. ’ಕಲ್ಲು ದೇವರು ದೇವರಲ್ಲ, ಮಣ್ಣು ದೇವರು ದೇವರಲ್ಲ ಎಂದು ಸಭೆಗಳಲ್ಲಿ ಹೇಳಿ ಅಲ್ಲಿ ಸೇರಿದ ಜನರಿಂದ ಚಪ್ಪಾಳೆ ಗಿಟ್ಟಿಸುವುದು ಸುಲಭ. ಆದರೆ ಅದನ್ನು ಕಾರ್ಯರೂಪಕ್ಕೆ ತರಬೇಕಾದಾಗ ಉಂಟಾಗುವ ಅಡ್ಡಿ ಆತಂಕಗಳು, ತಲ್ಲಣಗಳು ನೂರಾರು. ಇಳಕಲ್ಲಿನ ಮಹಾಂತ ಅಪ್ಪಗಳು ಯಾರ ಮನೆಗೆ ಹೋಗಲಿ ಸೀದಾ ಅವರ ಮನೆಯ ದೇವರ ಮನೆಗೆ ಕಾಲಿಕ್ಕಿ, ಆ ಜಗುಲಿಯ ಮೇಲೆ ಇರುವ ಹತ್ತಾರು ದೇವರುಗಳನ್ನು ತಮ್ಮ ಜೋಳಿಗೆಗೆ ಹಾಕಿಕೊಂಡು ಊರ ಹೊರಗೆ ಒಯ್ದು ಬಿಸಾಡುವರು. ಮನೆಯ ಮಂದಿಯನ್ನೆಲ್ಲ ಒಂದೆಡೆ ಕುಳ್ಳಿರಿಸಿಕೊಂಡು <br />’ಅರಗು ತಿಂದು ಕರಗುವ ದೈವವ<br />ಉರಿಯ ಕಂಡರೆ ಮುರುಟುವ ದೈವವ<br />ಅಂಜಿಕೆಯಾದಡೆ ಹೂಳುವ ದೈವವ<br />ಅವಸರಬಂದರೆ ಮಾರುವ ದೈವವ <br />ಎಂತು ಸರಿಯೆಂಬೆನಯ್ಯ?’<br />ಎಂದು ಬಸವಾದಿ ಶರಣರ ವಚನಗಳನ್ನು ಮನಂಬುಗುವಂತೆ ವಿವರಿಸಿ ಹೇಳುತ್ತಾರೆ. ’ಸತ್ಯ ಶುದ್ಧ ಕಾಯಕ ಮಾಡಿದಡೆ ಎತ್ತೆತ್ತ ನೋಡಿದಡತ್ತತ್ತ ಲಕ್ಷ್ಮಿ ತಾನಾಗಿಪ್ಪಳು’ ಎಂದು ತಿಳಿಹೇಳುತ್ತಾರೆ. ”ನೀವು ಪೂಜಿಸುವ ಕರಿಲಕ್ಷ್ಮಿ- ಕೆಂಪು ಲಕ್ಷ್ಮಿ ಚಿತ್ರವನ್ನು ರೇಖಿಸಿರುವ ಕಲಾವಿದನ ಹೆಂಡತಿಯೋ, ಪ್ರೇಯಸಿಯೋ ! ಮಗಳೋ ಆಗಿದ್ದಾಳೆ”. ಆದ್ದರಿಂದ ಅರ್ಥವಿಲ್ಲದ ಇಂಥ ದೇವರುಗಳನ್ನು ಪೂಜಿಸಲೇ ಬಾರದು. ಅಪ್ಪ ಬಸವಣ್ಣನವರು ಕೊಟ್ಟ <br />’ಜಗದಗಲ ಮುಗಿಲಗಲ<br />ಮಿಗೆಯಗಲ ನಿಮ್ಮಗಲ<br />ಪಾತಾಳದಿಂದತ್ತತ್ತ ನಿಮ್ಮ ಶ್ರೀ ಚರಣ ನಿಮ್ಮ ಶ್ರೀಮಕುಟ<br />ಅಗಮ್ಯ ಅಗೋಚರ ಅಪ್ರತೀಯ<br />ಲಿಂಗವೇ ನೀವೆನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯ<br />ಎಂದು ಹೇಳಿರುವ ’ಇಷ್ಟಲಿಂಗ’ವನ್ನು ಪೂಜಿಸಬೇಕು ಎಂದು ಹೇಳುತ್ತಾರೆ. ’ಬಾರದು ಬಪ್ಪದು. ಬಪ್ಪದು ತಪ್ಪದು’ ಎಂದು ಅವರೆಲ್ಲರ ಮನಸ್ಸಿನ ಕತ್ತಲೆಯನ್ನು ’ವಚನ ದೀಪ್ತಿ’ಯ ಮೂಲಕ ಬೆಳಗಿಸುತ್ತಾರೆ. ಇಷ್ಟಾಗಿಯೂ ’ನಿಮ್ಮ ಮನೆಯ ದೇವರುಗಳು ನಿಮ್ಮನ್ನು ಕಾಡಲು ಪೀಡಲು ಶುರುಮಾಡಿದರೆ ಅವುಗಳಿಗೆಲ್ಲ ನನ್ನ ಅಡ್ರೆಸ್ ಕೊಡಿ. ಅವು ನನ್ನೊಂದಿಗೆ ಬಂದು ಗುದ್ದಾಡಲಿ’, ಎಂದು ಹಾಸ್ಯಮಯವಾಗಿ ಮಾತನಾಡುತ್ತ ಭಕ್ತನ ’ಭಯ’ವನ್ನು ಕಿತ್ತಿ ಬಿಸುಡುತ್ತಾರೆ.<br />ಬಸವಾದಿ ಶರಣರ ವಿಚಾರಗಳನ್ನು ಕರ್ನಾಟಕದ ಬಹುತೇಕ ಮಠಗಳು ತಮ್ಮ ಆಸ್ತಿಯನ್ನಾಗಿ ಮಾಡಿಕೊಂಡು ಲಿಂಗಾಯತರನ್ನು ದಿಶಾಬೂಲಗೊಳಿಸುತ್ತ ಹೊರಟಿದ್ದರೆ ಇಳಕಲ್ಲಿನ ಶ್ರೀಗಳು ಮಾತ್ರ ಅವನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆಯುತ್ತಿದ್ದಾರೆ. ಹೀಗಾಗಿ ಶ್ರೀಗಳ ಮಾತು, ನಡೆ ನುಡಿ ಭಾವಗಳೆಲ್ಲವೂ ’ಪರುಷ ’ ಎಂದರೆ ತಪ್ಪಾಗಲಾರದು.<br />ಉತ್ತರ ಕರ್ನಾಟಕದಲ್ಲಿ ಬಹಳಷ್ಟು ಜನ ಭಕ್ತರು ತಮ್ಮ ಭಕ್ತಿಯ ಪರಾಕಾಷ್ಠೆಯನ್ನು ಮೆರೆಯಲು ತಮ್ಮ ಊರಿನಿಂದ ದೊಡ್ಡ ದೊಡ್ಡ ಮಠಗಳಿಗೆ, ದೇವಸ್ಥಾನಗಳಿಗೆ ಪಾದಯಾತ್ರೆ ಹೊರಡುತ್ತಾರೆ. ದಾರಿ ಉದ್ದಕ್ಕೂ ಭಜನೆ ಮಾಡುತ್ತ, ಊರೂರುಗಳಲ್ಲಿ ಪ್ರಸಾದ ಸ್ವೀಕರಿಸಿ ಮುನ್ನಡೆಯುತ್ತಾರೆ. ಪ್ರಚಾರ ಗಿಟ್ಟಿಸುತ್ತಾರೆ. ವರ್ಷಕ್ಕೊಂದು ಸಲ ದೇವರ ಹೆಸರಿನ ಮೇಲೆ ಪಾದಯಾತ್ರೆಯ ಮಜಾ ಅನುಭವಿಸಿ ಖುಷಿ ಪಡುತ್ತಾರೆ. ಇಂಥ ಪಾದಯಾತ್ರೆಗಳನ್ನು ಹಮ್ಮಿಕೊಳ್ಳುವುದು ಕೇವಲ ಭಕ್ತರಿಗೆ ಮಾತ್ರ ಸಂಬಂಧಿಸಿದ ಕೆಲಸ ಎಂದು ಬಹಳಷ್ಟು ಜನ ಮಠಾಧೀಶರು ತಿಳಿದುಕೊಂಡಿದ್ದಾರೆ. ಆದರೆ ಮಹಾಂತಪ್ಪಗಳು ಮಾತ್ರ ’ಭಕ್ತನಿದ್ದ ಠಾವೆ ಕೈಲಾಸ’ , ’ಭಕ್ತನ ಮನೆಯಂಗಳವೆ ವಾರಣಾಸಿ’ ಎಂದು ಅರ್ಥೈಸಿಕೊಂಡಿದ್ದರಿಂದ ಇವರು ಹಲವಾರು ಸಲ ಭಕ್ತನ ಮನೆಗಳಿಗೆ ಪಾದಯಾತ್ರೆಯ ಮೂಲಕ ಹೊರಡುತ್ತಾರೆ.<br />ಸತ್ಯಂಪೇಟೆಯ ನನ್ನ ಅಜ್ಜ ಗುರಪ್ಪ ಶರಣರ ’ಬಸವ ತತ್ವ ಸಮಾವೇಶ’ಕ್ಕೆ ಐದಾರು ಬಾರಿ ’ಇಳಕಲ್ಲಿನಿಂದ-ಸತ್ಯಂಪೇಟೆ’ಯವರೆಗೆ ಪಾದಯಾತ್ರೆಯ ಮೂಲಕ ಬಂದಿದ್ದಾರೆ ಎಂಬುದೇ ಒಂದು ಇತಿಹಾಸ. ಹೀಗೆ ಇಳಕಲ್ಲಿನಿಂದ ಪಾದಯಾತ್ರೆ ಹೊರಟರೆ ಅದು ಕೇವಲ ಕಾಟಾಚಾರದ ಪಾದಯಾತ್ರೆ ಆಗಿರುವುದಿಲ್ಲ. ದಾರಿಯಲ್ಲಿ ಬರುವ ಪ್ರತಿ ಹಳ್ಳಿ ಹಳ್ಳಿಗೂ ಭೇಟಿಕೊಟ್ಟು ಆ ಊರಿನ ತುಂಬೆಲ್ಲ ಚಟಗಳನ್ನು ತಮ್ಮ ಜೋಳಿಗೆ ಹಾಕುವಂತೆ ವಿನಂತಿಸುತ್ತಾರೆ. ಕೊನೆಯಲ್ಲಿ ಬಸವಾದಿ ಶರಣರ ವಿಚಾರಗಳನ್ನು ಆ ಹಳ್ಳಿಯ ಎಲ್ಲರಿಗೂ ಸರಳವಾಗಿ ಮುಟ್ಟುವಂತೆ ವಿವರಿಸಿ ಹೇಳುತ್ತಾರೆ. ”ಕಂದಾಚಾರ , ಮೂಢನಂಬಿಕೆಗಳ ದಾಸರಾಗಿರುವ ಭಕ್ತರೆಲ್ಲ ಅದರಿಂದ ಹೊರಬರದೆ ಹೋದರೆ ನಿಮ್ಮನ್ನು ಯಾರೂ ಉದ್ಧಾರ ಮಾಡಲು ಸಾಧ್ಯವಿಲ್ಲ’ ಎಂಬುದನ್ನು ಖಚಿತವಾಗಿ ತಿಳಿಸಿಹೇಳುತ್ತಾರೆ. <br />”ಯಾವ ಮಠಾಧೀಶರ, ಸ್ವಾಮಿಗಳ ಕೈಯ್ಯಲ್ಲಿ ಏನೂ ಇಲ್ಲ. ನಿತ್ಯವೂ ಪರಿಶುದ್ಧವಾದ ಕಾಯಕ ಮಾಡಿಕೊಂಡಿರುವ ನಿಮ್ಮ ಕೈಯ್ಯಲ್ಲಿ ಎಲ್ಲವೂ ಇದೆ ಎಂದು ಎಚ್ಚರಿಸುತ್ತಾರೆ. ನೀವು ಕೊರಳಲ್ಲಿ ಕಟ್ಟಿದ ಲಿಂಗವ ಬಿಟ್ಟು ಬೆಟ್ಟದ ಲಿಂಗಕ್ಕೆ ಹೋದರೆ ಲೊಟ್ಟಿ ಮೂಳರಾಗುತ್ತೀರಿ!” ಎಂದು ಹೇಳಲು ಹಿಂದೆ - ಮುಂದೆ ನೋಡುವುದಿಲ್ಲ.<br />’ನಿಮಗೆ ಯಾರಾದರೂ ತಾಯಿತ- ಕರಿದಾರ- ನಿಂಬಿಕಾಯಿ ಮಂತ್ರಿಸಿಕೊಡುವುದು ಅವರ ವ್ಯಾಪಾರವೇ ಹೊರತು ಅದರಿಂದ ಏನೂ ಸಾಧ್ಯವಿಲ್ಲ ಎಂದು ಮನಮುಟ್ಟುವಂತೆ ಹೇಳುತ್ತಾರೆ. ’ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ. ಸತ್ಯ ಶುದ್ಧವಾದ ಕಾಯಕ ಮಾಡಿ. ಮಾಡಿದೆನೆಂಬುದು ಮನದಲ್ಲಿ ಹೊಳೆದೊಡೆ ಎಡಿಸಿ ಕಾಡಿತ್ತು ಶಿವಡಂಗುರ ಹಾಗಾಗಿ ಭಕ್ತರೆಲ್ಲ ನಿಷ್ಕಲ್ಮಷ ಹೃದಯದಿಂದ ದಾಸೋಹ ಮಾಡಬೇಕೆಂದು ತಿಳಿ ಹೇಳುತ್ತಾರೆ. ಅವರೆಲ್ಲ ದಾಸೋಹ ತತ್ವವನ್ನು ಅಳವಡಿಸಿಕೊಳ್ಳುವಂತೆ ವಿವರಿಸುತ್ತಾರೆ. ಬಸವಾದಿ ಶರಣರು ಕನಸಿದ ಸಮಾಜವನ್ನು ನಾವೆಲ್ಲ (ಕಾವಿ ಹಾಕಿದ ಜಾತಿ ಜಂಗಮರು) ತಿಂದು ಹಾಕಿದ್ದೇವೆ. ’ದಯವೇ ಧರ್ಮದ ಮೂಲ’ವಾಗಿದ್ದ ಬಸವಣ್ಣನವರ ಧರ್ಮವನ್ನು ಇಂದು ’ಭಯವೇ ಧರ್ಮದ ಮೂಲ’ ಎಂಬಂತೆ ಚಿತ್ರಿಸಿದ್ದೇವೆ. ’ಲಾಂಛನಕ್ಕೆ ಶರಣೆಂಬೆ’ ಎಂಬ ಬಸವಣ್ಣನವರ ಮಾತನ್ನು ಹೇಳಿ ಸಾಕಷ್ಟು ಜನ ಭಕ್ತರನ್ನು ದಿಕ್ಕು ತಪ್ಪಿಸಿದ್ದೇವೆ. ಆದರೆ ಬಸವಣ್ಣನವರು ಅದೇ ವಚನದಲ್ಲಿ ಹೇಳಿದ ’ಲಾಂಛನಕ್ಕೆ ತಕ್ಕ ಆಚಾರವಿಲ್ಲದಿದ್ದಡೆ ಕೂಡಲ ಸಂಗಮದೇವ ಸಾಕ್ಷಿಯಗಿ ಛೀ ಎಂಬೆ’ ಎಂಬ ಮಾತನ್ನು ಅಪ್ಪಿ ತಪ್ಪಿಯೂ ವಿವರಿಸಿ ಹೇಳಿಲ್ಲ. ಒಟ್ಟಿನಲ್ಲಿ ಆತ್ಮವಂಚನೆಯ ಬಾಳನ್ನು ಮಠಾಧೀಶರು ನಡೆಸಿದ್ದೇವೆ. ಹೀಗಾಗಿ ದಿಕ್ಕು ತಪ್ಪಿದ ನಾವೆಯಲ್ಲಿ ಕುಳಿತಿರುವ ಭಕ್ತರು ದಾರಿ ತಪ್ಪಿದ್ದಾರೆ. ಮೂಲ ’ಲಿಂಗಾಯತ’ವನ್ನು ಮರೆತು. ಮತ್ತದೆ ಜಾತಿ ವ್ಯವಸ್ಥೆಯ ಬಲೆಯಲ್ಲಿ ಸಿಕ್ಕು ಒದ್ದಾಡುತ್ತಿದ್ದಾರೆ ಎಂದು ವ್ಯಥೆ ಪಡುತ್ತಾರೆ.<br />ಒಟ್ಟಿನಲ್ಲಿ ಬಸವ ಮಹಾಮಣಿಯವನ್ನು ಹೊತ್ತುಕೊಂಡು ಮುನ್ನಡೆದಿರುವ ಇಳಕಲ್ಲಿನ ಶ್ರೀ ಮಹಾಂತಸ್ವಾಮಿಗಳನ್ನು ’ಬಸವ ತತ್ವದ ದಂಡನಾಯಕರು’ ಎಂದು ಖಚಿತವಾಗಿ ಹೇಳಬಹುದು. ಬಸವಣ್ಣನವರ ಮಾತೃ ಹೃದಯ, ಲಘು ಹಾಸ್ಯ, ವಿಡಂಬನೆ, ತಮಾಷೆ, ವ್ಯಂಗ್ಯವನ್ನು ಸಂಪೂರ್ಣವಾಗಿ ಮಹಾಂತಪ್ಪಗಳು ಅಳವಡಿಸಿಕೊಂಡಿದ್ದಾರೆ. ಮಾಡಿದ ತಪ್ಪನ್ನು - ತಪ್ಪೆಂದು ಒಪ್ಪಿಕೊಳ್ಳುವ ಎದೆಗಾರಿಕೆ ಅನೇಕರಿಗೆ ಇರುವುದೆ ಇಲ್ಲ. ಆದರೆ ಮಹಾಂತಪ್ಪಗಳು ಮಾತ್ರ ಇದಕ್ಕೆ ಹೊರತಾದವರು.<br />ಸೊಲ್ಲಾಪುರದ ಕಲ್ಯಾಣ ನಾಡಿನ ಶರಣ ಸಮ್ಮೇಳನದಲ್ಲಿ ನನ್ನ ತಂದೆ ಲಿಂಗಣ್ಣ ಸತ್ಯಂಪೇಟೆಯವರು: ” ಮಠಾಧೀಶರೆಲ್ಲ ಆತ್ಮವಂಚನೆಯ ಬಾಳು ಬದುಕುತ್ತಿದ್ದಾರೆ. ಅಲ್ಲದೆ ಬಸವಾದಿ ಶರಣರ್ಯಾರು ಸನ್ಯಾಸ ಶ್ರೇಷ್ಠ ಎಂದು ಹೇಳಿಲ್ಲ. ಹುಸಿ ಬ್ರಹ್ಮಚರ್ಯಕ್ಕೆ ಜೋತುಬಿದ್ದ ಲಿಂಗಾಯತ ಮಠಾಧೀಶರುಗಳೆಲ್ಲ ತಮ್ಮ ಮಠಗಳಲ್ಲಿ ಅನಧಿಕೃತವಾಗಿ ಹೆಂಡತಿಯರನ್ನು ಮಕ್ಕಳನ್ನು ಹೊಂದಿದ್ದಾರೆ. ಆದ್ದರಿಂದ ಇನ್ನು ಮುಂದೆ ಮಠಾಧೀಶರುಗಳಿಗೆಲ್ಲ ಮದುವೆ ಮಾಡಿ, ಪೀಠಕ್ಕೆ ಕುಳ್ಳಿರಿಸಬೇಕು” ಎಂದು ಹೇಳಿದರು. <br />ಈ ಮಾತುಗಳನ್ನು ಕೇಳಿದ ಆ ಸಭೆಯಲ್ಲಿ ಕುಳಿತಿದ್ದ ಬಹುತೇಕ ಮಠಾಧೀಶರು ನನ್ನ ತಂದೆಯವರ ಅಭಿಪ್ರಾಯವನ್ನು ಖಂಡಿಸಿ ಮಾತನಾಡಿದರು. ಆದರೆ ಇಳಕಲ್ಲಿನ ಶ್ರೀಗಳು ಮಾತ್ರ : ”ಲಿಂಗಣ್ಣನವರು ಆಡಿರುವ ಮಾತುಗಳು ವಿಚಾರ ಮಾಡುವಂತೆ ಇವೆ. ಈ ಕುರಿತು ಸಮಾಜ ಮುಕ್ತವಾಗಿ ಚರ್ಚಿಸಿ ಒಂದು ನಿರ್ಣಯಕ್ಕೆ ಬರಬೇಕಾಗಿದೆ ಎಂದು ಒತ್ತಿ ಹೇಳಿದರು ಮಾತ್ರವಲ್ಲ, ಮಠಾಧೀಶರು ಆತ್ಮವಂಚನೆಗೆ ಹೆಸರಾಗಿದ್ದೇವೆ ”ಎಂತಲೂ ಬಣ್ಣಿಸಿಕೊಂಡರು.<br />ಬಸವಾದಿ ಶರಣರ ವಿಚಾರಗಳನ್ನು ಬದುಕುವ ಹಾಗೂ ಅವನ್ನು ಜನತೆಗೆ ವಿವರಿಸಿ ಹೇಳುವ ಕವಿ, ಸಾಹಿತಿಗಳನ್ನು ಕಂಡರೆ ಅವರಿಗೆ ಎಲ್ಲಿಲ್ಲದ ಅಕ್ಕರೆ. ಆದ್ದರಿಂದ ಇಂಥವರ ಮನೆಗಳನ್ನು ಹುಡುಕಿಕೊಂಡು ಅವರೇ ಹೊರಟು ನಿಲ್ಲುತ್ತಾರೆ. ಅವರೊಂದಿಗೆ ಲೋಕಾಭಿರಾಮವಾಗಿ ಚರ್ಚಿಸುತ್ತಾರೆ. ಪೀಠಾಧಿಕಾರಿಯ ಹಮ್ಮು-ಬಿಮ್ಮುಗಳನ್ನು ತೋರಿಸದೆ ಅವರ ಮನೆಯ ಸದಸ್ಯರಲ್ಲಿ ಒಬ್ಬರಾಗಿ ನಿಲ್ಲುತ್ತಾರೆ. ಗುಲ್ಬರ್ಗಾ, ಬೀದರ್ಗೆ ಹೋಗುವ ಪ್ರಸಂಗ ಬಂದಾಗಲೆಲ್ಲ ನಮ್ಮ ಮನೆಗೆ ಮಹಾಂತಪ್ಪಗಳು ಬಂದು ಹೋಗಲೇ ಬೇಕು. ಇಲ್ಲದೆ ಹೋದರೆ ಏನೋ ಕಳಕೊಂಡ ಭಾವ ಅವರನ್ನು ಆವರಿಸಿದಂತಾಗುತ್ತದೆ ಎನ್ನುತ್ತಾರೆ.<br />ತೀರಾ ಇತ್ತೀಚೆಗೆ ಯಾವುದೊ ಕಾರ್ಯಕ್ರಮವನ್ನು ಮುಗಿಸಿಕೊಂಡು ಎಂದಿನಂತೆ ನಮ್ಮ (ಶಹಾಪುರದ) ಮನೆಗೆ ಬರುವವರು ಬಾರದೆ, ಮನೆಯನ್ನು ದಾಟಿ ಅವರ ಕಾರು ಮುನ್ನಡೆಯಿತು. ನನಗಾದರೂ ಒಳಗೊಳಗೆ ಕಳವಳ. ಡ್ರೈವರ್ ಮರೆತು ಮುಂದೆ ಹೋದನೆ? ಎಂಬ ಆತಂಕ. ಅಥವಾ ಮನೆ ಮನೆಯ ಮುಂದುಗಡೆ ಇರುವ ಶ್ರೀಚರಬಸವೇಶ್ವರ ಗದ್ದುಗೆಯಲ್ಲಿ ಯಾವುದಾದರೂ ಕಾರ್ಯಕ್ರಮ ಇರಬಹುದೆ? ಎಂಬ ಕುತೂಹಲ. ತಕ್ಷಣ ಅವರ ಮೊಬೈಲ್ಗೆ ಪೋನ್ ಮಾಡಿದೆ. ’ಅಲ್ಲೆ ಮನೆಯಲ್ಲೆ ಇರು, ಈಗ ಬರುತ್ತೇನೆ. ನಮ್ಮ ಜೊತೆಗಿರುವ ಸ್ವಾಮಿಗಳೊಬ್ಬರು ಶ್ರೀ ಸಿದ್ಧಲಿಂಗೇಶ್ವರ ಬೆಟ್ಟಕ್ಕೆ ಹೋಗೋಣ ಎಂದು ಹೇಳಿದ್ದರಿಂದ ನಡೆದಿದ್ದೇವೆ’ ಅಂದರು. ನನಗೋ ತಡೆಯಲಾಗಲಿಲ್ಲ. ಅವರನ್ನು ಬೆನ್ನಟ್ಟಿ ನಾನೂ ಹೋದೆ. ಅಲ್ಲಿ ಆಗಲೆ ಅವರನ್ನು ಕುಳ್ಳಿರಿಸಿಕೊಂಡು ಬಸವಲಿಂಗ ಶರಣರು ಕಲ್ಯಾಣದ ಶರಣರ ಕುರಿತು ಹೇಳಿದ ಹಾಡುಗಳನ್ನು ಹಾಡುತ್ತಿದ್ದರು. ಹಾಡು ಮುಗಿಯಿತು. ಕೊನೆಗೆ ಅಲ್ಲಿ ಸೇರಿದ ಮಠದೊಳಗಣ ಜನರೆಲ್ಲ ವಂದಿಸಿ - ಅರ್ಚಿಸಿ, ಕಾಣಿಕೆ ನೀಡಿದರು. <br />ಆ ಕಾಣಿಕೆಯನ್ನು ಕೈಯ್ಯಲ್ಲಿ ಹಿಡಕೊಂಡು, ತಮ್ಮಲ್ಲಿಯದೂ ಇನ್ನಷ್ಟು ಸೇರಿಸಿಕೊಂಡು ದೂರದಲ್ಲಿ ಇದೆಲ್ಲವನ್ನೂ ನೋಡುತ್ತ ನಿಂತಿದ್ದ ನನ್ನನ್ನು ಹತ್ತಿರ ಕರೆದು ತಮ್ಮ ಕೈಯ್ಯಲ್ಲಿ ರೂಪಾಯಿಗಳನ್ನು ತೆಗೆದುಕೊಳ್ಳುವಂತೆ ಹೇಳಿದರು. ನನಗೆ ಇದೆಲ್ಲ ಕೊಂಚ ಇರಿಸು ಮುರಿಸು ಅನ್ನಿಸಿತು. ನನ್ನ ಜೇಬಿನಲ್ಲಿ ರೂಪಾಯಿಗಳನ್ನು ಇಡಲು ಹವಣಿಸುತ್ತಿದ್ದ ಕೈಯ್ಯನ್ನು ತಡೆಹಿಡಿದೆ. ಆಗ ಅವರು ’ಸುಮ್ಕ ತೋಗೋಬೇಕು. ನೀವೆಲ್ಲ ಬಸವಣ್ಣನ ಕೈಂಕರ್ಯ ಮಾಡುವವರು. ಇದೆಲ್ಲ ನಿಮಗೆ ಸೇರಬೇಕು’ ಎಂದೆಲ್ಲ ಹೇಳಿದಾಗ ಮನ ತುಂಬಿಬಂತು. ಕಣ್ಣಾಲಿಯಲ್ಲಿ ನೀರು ತುಂಬಿಕೊಂಡಿತು. ಮಾತು ಮೌನವಾಗಿ, ಅದು ಬಂಗಾರವಾಯಿತು.<br />೧೯೯೭ ರ ಜೂನ್ ೧೮ ರಂದು ಜರುಗಿದ ನನ್ನ ಹಾಗೂ ಶರಾವತಿಯ ಕಲ್ಯಾಣ ಮಹೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿ ಕಳೆ ತಂದರು. ನನ್ನ ಅಜ್ಜನಾದ ಗುರಪ್ಪ ಯಜಮಾನರ ಪುಣ್ಯ ಸ್ಮರಣೆಯ ದಿನ ನನ್ನ ಮದುವೆ ಏರ್ಪಡಿಸುವಂತೆ ಸೂಚಿಸಿ, ಆ ದಿನ ಕ್ರಾಂತಿಯ ಗಂಗೋತ್ರಿ ಅಕ್ಕನಾಗಮ್ಮಳ ಬಗೆಗೆ ಒಂದು ವಿಚಾರಗೋಷ್ಠಿ ಏರ್ಪಡಿಸಿದ್ದು ಮರೆಯಲಾಗದ್ದು. ಹಂದರ ಹಾಕದೆ, ಬಾಸಿಂಗ ಕಟ್ಟದೆ, ಸುಲಿಗೆ ಸುತ್ತದೆ, ಮದುಮಕ್ಕಳನ್ನು ಮಾಡದೆ, ಸರಳ ಹಾಗೂ ಸಹಜವಾಗಿ ನಡೆದ ಮದುವೆಯ ಸಾರಥ್ಯವನ್ನು ಮಹಾಂತಪ್ಪಗಳು ವಹಿಸಿದ್ದರು ಎಂಬುದೇ ನನಗೊಂದು ಹೆಮ್ಮೆ.<br />’ನಡೆದುದೇ ಮಾರ್ಗವಾದುದು ಶಿವನ ಮದಕರಿಗೆ<br />ನುಡಿದುದೇ ವೇದವಾದುದು ಶಿವನ ಶರಣರಿಗೆ’<br />ಇದು ಮಹಾಕವಿ ಹರಿಹರನ ಉಕ್ತಿ. ’ಮದವೇರಿದ ಆನೆಯು ಅರಣ್ಯದ ದಾರಿ ಹುಡುಕಿಕೊಂಡು ಹೋಗುವುದಿಲ್ಲ. ಅದು ನಡೆದು ಹೋದಲ್ಲಿಯೇ ದಾರಿಯಾಗುತ್ತದೆ. ಹಾಗೆಯೇ ಶರಣ ಲೋಕದಿಚ್ಚೆಯ ನುಡಿಯ, ಲೋಕದಿಚ್ಚೆಯ ನಡೆಯ , ಅವರು ಸರ್ವ ಸ್ವತಂತ್ರರು; ಅವರು ಪೂಜಾರಿಗಳ ನೆರವಿಲ್ಲದೆ , ಮಧ್ಯವರ್ತಿಗಳ ಕಾಟವಿಲ್ಲದೆ ನೇರವಾಗಿ ದೇವರೊಡನೆ ಭಕ್ತನ ಸಂಬಂಧವನ್ನಿಟ್ಟುಕೊಂಡ ಮಹಾನುಭಾವಿಗಳೆ ಶರಣರು’ ಎಂದು ಉತ್ತಂಗಿ ಚೆನ್ನಪ್ಪನವರು ಕಲ್ಯಾಣದ ಅಂದಿನ ಶರಣ ಕುರಿತು ಹೇಳುತ್ತಾರೆ. <br />ಇಂಥ ಎಲ್ಲಾ ವೈಶಿಷ್ಟ್ಯತೆಗಳನ್ನು ಮುಪ್ಪರಿಗೊಳಿಸಿಕೊಂಡಿರುವ ಮಹಾಂತ ಅಪ್ಪಗಳೂ ಇಂಥ ಶರಣರಲ್ಲಿ ಒಬ್ಬರು ಎಂದು ಹೇಳಿದರೆ ಅತಿಶಯೋಕ್ತಿಯ ಮಾತಾಗಲಾರದು. ಹೊಗಳಿಕೆ ಉಬ್ಬದ, ತೆಗಳಿಕೆ ಕುಗ್ಗದ, ಅಗ್ಗದ ಪ್ರಚಾರಕ್ಕೆ ತಮ್ಮನ್ನು ತಾವು ಎಂದೂ ಒಡ್ಡಿಕೊಳ್ಳದ ಬಸವ ಮಹಾ ಮಣಿಯವನ್ನು ಹೊತ್ತುಕೊಂಡು ಒಯ್ಯುತ್ತಿರುವ ಮಹಾಂತಪ್ಪಗಳು ನಿಜವಾದ ಶರಣ ಜಂಗಮರು ಎಂದು ಹೇಳಿದರೆ ಅತಿಶಯೋಕ್ತಿಯ ಮಾತು ಆಗಲಿಕ್ಕಿಲ್ಲ, ಅಲ್ಲವೆ?<br /><br />ವಿಶ್ವಾರಾಧ್ಯ ಸತ್ಯಂಪೇಟೆ <br />ಪತ್ರಕರ್ತರು , ಬಸವ ಮಾರ್ಗ ರಸ್ತೆ , ಸಿ.ಬಿ.ಕಾಲೋನಿ ಶಹಾಪುರ - ಯಾದಗಿರ (ಜಿಲ್ಲೆ), ಮೊಬೈಲ್ ; ೯೪೮೦೧೬೧೩೧೫Unknownnoreply@blogger.com0tag:blogger.com,1999:blog-2647129451779812999.post-13542821663492785562010-05-22T08:24:00.000-07:002010-05-22T08:24:00.561-07:00ಮತ್ತದೆ ಬ್ರಾಹ್ಮಣ್ಯಕ್ಕೆ ಜೋತು ಬಿದ್ದ ಮಠಾಧಿಪತಿಗಳುಲಿಂಗಾಯತ ತತ್ವಗಳಿಗೆ ಎಳ್ಳು ನೀರು ಬಿಟ್ಟಿರುವ ಸನ್ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಆದರೆ ಲಿಂಗಾಯತರ ಗುರುಗಳೆಂದೆ ಕರೆಸಿಕೊಳ್ಳುತ್ತಿರುವ ಮಠಾಧೀಶರು ಹಾಗೂ ಕೆಲವು ಲಿಂಗಾಯತ ಸಂಘಟನೆಗಳು ಯಡ್ಡಿಗೆ ಖುಚರ್ಿ ದೊರೆಯದೇ ಇರುವುದು ಲಿಂಗಾಯತ ಜನಾಂಗಕ್ಕಾದ ಅನ್ಯಾಯ ಎಂಬಂತೆ ಬಿಂಬಿಸುತ್ತಿದ್ದಾರೆ. ಈ ಕಾರಣಕ್ಕಾಗಿ ಹಲವಾರು ಕಡೆ ಪ್ರತಿಭಟನೆ ನಡೆಸಿದ್ದಾರೆ. ದೇವೇಗೌಡ, ಕುಮಾರಸ್ವಾಮಿಯ ಪ್ರತಿಕೃತಿ ದಹಿಸುವ ಮಟ್ಟಕ್ಕೂ ಇವರ ಆಕ್ರೋಶ ಮುಂದುವರೆದಿದೆ. ಅಂದಂತೆ ಕನರ್ಾಟಕದ ಬಹುತೇಕ ಜನ ಲಿಂಗಾಯತರು ತಮ್ಮನ್ನು ಬಿ.ಜೆ.ಪಿ. ಪಕ್ಷದ ಜೊತೆ ಗುರುತಿಸಿಕೊಳ್ಳಲು ತುದಿಗಾಲ ಮೇಲೆ ನಿಂತಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ.ಯಡ್ಡಿಗೆ ಮಾತುಕೊಟ್ಟು ಮುಖ್ಯಮಂತ್ರಿ ಖುಚರ್ಿಯನ್ನು ಬಿಟ್ಟುಕೊಡದೇ ಇರುವ ಗೌಡರ ಧೂರ್ತ ರಾಜಕೀಯ ಸರಿ - ತಪ್ಪೆಂದು ವಾದಿಸಲು ನಾನಿಲ್ಲಿ ಬಯಸಿಲ್ಲ. ಆದರೆ ಬಿ.ಜೆ.ಪಿಯೊಂದಿಗೆ ಗುರುತಿಸಿಕೊಂಡದ್ದೇ ಆದರೆ ಲಿಂಗಾಯತರು ಎಷ್ಟು ಮಟ್ಟಿಗೆ ಲಿಂಗಾಯತರಾಗಿ ಉಳಿಯಬಲ್ಲರು ? ಎಂಬ ಕಳಕಳಿಯಿಂದ ಮಾತ್ರ ಈ ಲೇಖನ ಬರೆಯುತ್ತಿದ್ದೇನೆ.<br />
<br />
ಹಾಗೆ ನೋಡಿದರೆ ತಾತ್ವಿಕವಾಗಿ ಲಿಂಗಾಯತರಿಗೂ - ಬಿ.ಜೆ.ಪಿ, ವಿಶ್ವಹಿಂದೂ ಪರಿಷತ್,ಬಜರಂಗದಳ, ಕಿಸಾನಸಂಘ, ಆರ್.ಎಸ್.ಎಸ್, ಎ.ಬಿ.ವಿ.ಪಿ. ಮುಂತಾದ ಸಂಘಟನೆಗಳಿಗೆ ಒಂಚೂರು ಸಂಬಂಧವೇ ಇಲ್ಲ. ಒಂದು ಉತ್ತರದ ತುದಿಯಾದರೆ ಮತ್ತೊಂದು ದಕ್ಷಿಣದ ತುದಿ. ಒಂದು ಬೆಳ್ಳಂಬೆಳಕಾದರೆ.ಮತ್ತೊಂದು ಕಾರ್ಗತ್ತಲು. ಒಂದು ಬಟ್ಟಾಬಯಲಾದರೆ, ಮತ್ತೊಂದು ನಿಗೂಢವಾದ ದಟ್ಟ ಕಾಡು. ಒಂದು ವೈಜ್ಞಾನಿಕವಾದರೆ ಇನ್ನೊಂದು ತೀರಾ ಅವೈಜ್ಞಾನಿಕ. ಒಂದು ಸ್ಪಷ್ಟವಾದರೆ ಇನ್ನೊಂದು ಅಸ್ಪಷ್ಟ. ಸತ್ಯ ಹೀಗಿರುವಾಗ ಕೆಲವರು ಮಾತ್ರ ಎರಡೂ ಒಂದೇ ಎಂದು ನಂಬಿಸಲು ಹೊರಟಿದ್ದಾರೆ. ಇದಕ್ಕೆ ಬಹು ಮುಖ್ಯ ಕಾರಣರು ಲಿಂಗಾಯತರ ಗುರುಗಳೆಂದು ಕರೆಸಿಕೊಳ್ಳಲಾಗುತ್ತಿರುವ ಸ್ವಾಮಿಗಳು ಎಂದು ಇಲ್ಲಿ ನೇರವಾಗಿ ಹೇಳಲು ಇಚ್ಚಿಸುತ್ತೇನೆ.<br />
<br />
ಕನರ್ಾಟಕದ ಕೆಲವು ಬೆರಳೆಣಿಕೆಯ ಸ್ವಾಮಿಗಳನ್ನು ಹೊರತು ಪಡಿಸಿದರೆ ಬಹುತೇಕರು ಈಗಾಗಲೇ ಚಡ್ಡಿ ತೊಟ್ಟಿದ್ದಾರೆ. ಕೆಲವರಂತೂ ತಮ್ಮ ಮಠದ ಅಂಗಳದಲ್ಲಿ ಆರ್.ಎಸ್.ಎಸ್. ಕುಣಿತಕ್ಕೆ ಅವಕಾಶ ನೀಡಿದ್ದಾರೆ. ರಾಮನ ಗುಡಿ ಕಟ್ಟಲು ಇಟ್ಟಂಗಿಗಳನ್ನು ಸಂಗ್ರಹಿಸಿ ತಾವು ಬಹುದೊಡ್ಡ ಘನಂದಾರಿ ಕೆಲಸ ಮಾಡಿದ್ದೇವೆ ಎಂಬ ಹಮ್ಮಿನಲ್ಲಿ ಬೀಗಿದ್ದಾರೆ. ನಾಲ್ಕೈದು ಜನ ಸ್ವಾಮಿಗಳಂತೂ ಚಡ್ಡಿಗಳ ಅಂಗಳದಲ್ಲಿ ಚೆಡ್ಡಿಯನ್ನೂ ಕಳಚಿಕೊಂಡು ಕವಾಯತ್ತು ಮಾಡಿದ್ದಾರೆ. ಇದು ಲಿಂಗಾಯತರ ಧಾಮರ್ಿಕ ಗುರುಗಳೆಂದು ಕರೆಸಿಕೊಳ್ಳುವ ಜಂಗಮರು ತಲುಪಿರುವ ಅಧಃಪತನದ ಸ್ಪಷ್ಟ ಸೂಚನೆ. <br />
<br />
ಸರಿಯಾಗಿ ಗ್ರಹಿಸಿದರೆ : ಬ್ರಾಹ್ಮಣಿಕೆಯನ್ನು ಮೈಗೂಡಿಸಿಕೊಂಡಿರುವ ಬಿ.ಜೆ.ಪಿ. ಹಾಗೂ ಇತರ ಸಂಘಟನೆಗಳಿಗೂ ಲಿಂಗಾಯತರ ಮಠಾಧಿಪತಿಗಳಿಗೂ ಏನೇನು ಫರಕು ಇಲ್ಲ. ಯಾವುದನ್ನು ಬಸವಾದಿ ಪ್ರಮಥರು ಬೇರು ಸಹಿತ ಕಿತ್ತೆಸೆದು ಹೊಸ ಕನಸುಗಳನ್ನು ಈ ನೆಲದಲ್ಲಿ ಉತ್ತಿ-ಬಿತ್ತಿ ಬೆಳೆದಿದ್ದರೋ ಆ ಎಲ್ಲವನ್ನು ಸಾರಾಸಗಟಾಗಿ ಅರಗಿ ದಿಂಡು ಹೊಡೆದವರು ಈ ಗುರುಗಳು. `` ಅಡ್ಡ ದೊಡ್ಡ ನಾನಲ್ಲವಯ್ಯ ದೊಡ್ಡ ಬಸುರು ಎನಗಿಲ್ಲವಯ್ಯ ಎಂದ ಬಸವಣ್ಣನವರೆಲ್ಲಿ ಜಂಗಮ ಜಾತಿ ಲಿಂಗಾಯತರಲ್ಲೇ ಮೇಲ್ ಜಾತಿ ಎಂದು ತಿಳಿದುಕೊಂಡುವ ಈ ಜಂಗಮ ಗುರುಗಳೆಲ್ಲಿ ? ಜಂಗಮಜಾತಿಯಲ್ಲಿ ಹುಟ್ಟಿದ್ದೆ ತಮ್ಮ ಬಹುದೊಡ್ಡ ಸಾಧನೆ ಎಂದು ತಿಳಿದುಕೊಂಡಿರುವ ಕನರ್ಾಟಕದ ಮಠಾಧೀಶರು ತಮ್ಮಲ್ಲಿ ಯಾವುದೇ ಯೋಗ್ಯತೆ ಇಲ್ಲದೆಯೂ ಮಠಗಳಲ್ಲಿ ಅಮರಿಕೊಂಡಿದ್ದಾರೆ.ಅವರು ದಿನ ನಿತ್ಯ ತಾವು ಕುಳಿತ ಮಠಗಳ ಮೂಲಕ ಬಸವಾದಿ ಪ್ರಮಥರ ವಿಚಾರಗಳನ್ನು ತೊತ್ತಲ ತುಳಿಯುತ್ತ ಮುನ್ನಡೆದಿದ್ದಾರೆ.<br />
<br />
ಗೋತ್ರನಾಮವ ಬೆಸಗೊಂಡರೆ ಮಾತನಾಡದೆ ಸುಮ್ಮನಿದ್ದಿರದೇಕೆ ? ಮಾದಾರ ಚೆನ್ನಯ್ಯನ ಗೋತ್ರವೆಂದು ಹೇಳಿ. ಕಕ್ಕಯ್ಯನ ಗೋತ್ರವೆಂದು ಹೇಳಿ ಎಂಬ ಮೂಲಕ ಅವರಲ್ಲಿ ಆತ್ಮಸ್ಠೈರ್ಯ ತುಂಬಿದ್ದ ಬಸವಣ್ಣನವರ ವಚನದ ಸಾಲುಗಳನ್ನು ಮರೆತು ಬಿಟ್ಟಿದ್ದಾರೆ.ತಮ್ಮ ಮಠದ ಅಂಗಳದಲ್ಲಿ ಇಂದಿಗೂ ಕೆಲವು ಜನಾಂಗದವರನ್ನು ಬಿಟ್ಟುಕೊಳ್ಳುವುದಕ್ಕೆ ರೆಡಿ ಇಲ್ಲ. ಅಪ್ಪಿಕೊಳ್ಳವುದಂತೂ ದೂರದಮಾತು. ಗುಡಿ ಗುಂಡಾರಗಳು ನಡೆಸುವ ಶೋಷಣೆಗಳನ್ನು ಗಮನಿಸಿದ , ಧಾಮರ್ಿಕ ಗುತ್ತೇದಾರಿಕೆಯನ್ನು ಖಂಡಿಸಿ ತನ್ನಾಶ್ರಯದ ರತಿಸುಖವನ್ನು ತಾನುಂಬ ಊಟವನು ತಾ ಮಾಡಬೇಕಲ್ಲದೆ ಅನ್ಯರ ಕೈಲಿ ಮಾಡಿಸಬಹುದೆ ? ಎಂದು ಮರ್ಮಘಾತಕವಾದ ನುಡಿಗಳಿಂದ ಪ್ರಜ್ಞೆಯುಂಟು ಮಾಡಿದ್ದ ಬಸವಾದಿ ಶರಣರ ಮಾತು ಇಂದು ಯಾವ ಮಠದ ಸ್ವಾಮಿ ಪಾಲಿಸುತ್ತಿದ್ದಾನೆ ? ಎಲ್ಲರೂ ತಮ್ಮ ಗಮನ ಭಕ್ತರಿಗೆ ಕೊಡುವುದಕ್ಕಿಂತ ತಾವಿರುವ ಮಠದ ಜಡ ಕಟ್ಟಡಕ್ಕೆ ( ಗುಡಿಗೆ )ಹೆಚ್ಚು ಪ್ರಾಧಾನ್ಯತೆ ಕೊಡುತ್ತಿದ್ದಾರೆ. ಲಿಂಗಪ್ರತಿಷ್ಠೆಯ ಮಾಡಿದವಂಗೆ ನಾಯಕ ನರಕ ಎಂಬ ಮಾತನ್ನು ಮುದ್ದಾಂ ಮರೆತಿದ್ದಾರೆ. ಅತ್ಯಂತ ವೈಭವೋಪೇತವಾಗಿ ಗುಡಿಯಲ್ಲಿ ಕಲ್ಲಾಗಿರುವ ದೇವರಿಗೆ ಹಾಲು,ಮೊಸರು, ತುಪ್ಪ,ಜೇನು ತುಪ್ಪದ ಅಭಿಷೇಕ ಮಾಡುವುದೇ ಪೂಜೆ ಎಂಬಂತಾಗಿದೆ. ಉಳ್ಳವರು ಶಿವಾಲಯ ಮಾಡುವರು ನಾನೇನ ಮಾಡಲಿ ಬಡವನ್ಯ ? ಎಂಬ ವಚನದ ಸಾಲು ಇವರಿಗೆ ಮನಸ್ಸಿನಲ್ಲಾದರೂ ಕಾಡಲಾರದೆ ? ತಾಳ ಮಾನ ಸರಸವನರಿಯೆ.ಓಜೆ ಬಜಾವಣೆಯ ಲೆಕ್ಕವನರಿಯೆ.ಅಮೃತಗಣ ದೇವಗಣವನರಿಯೆ. ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ - ಎಂಬ ಮಾತುಗಳನ್ನು ಹೊಸಕಿ ಹಾಕಿ ತಮ್ಮ ಗುಡಿಯಲ್ಲಿ ಪ್ರತಿಷ್ಠಾಪಿಸಿದ ದೇವರಿಗೆ ಮತ್ತದೇ ಹಿಂದಿನ ಸಂಸ್ಕೃತ ಭಾಷೆಯ ಮಂತ್ರಗಳನ್ನ ಹೇಳುತ್ತ ಮುನ್ನಡೆದಿದ್ದಾರೆ.ಯಾವುದು ಜನಭಾಷೆಯಾಗಿಲ್ಲವೋ ಅದು ಮೋಸದ ಭಾಷೆಯೆಂದೇ ಅರ್ಥ. ಆದರೆ ಮಠಾಧೀಶರೆಂಬ ಜಂಗಮ ಪುಂಗವರು ಈ ಮಾತನ್ನು ಒಪ್ಪಿಕೊಳ್ಳುವುದೇ ಇಲ್ಲ. ಯಾಕೆಂದರೆ ಜನಭಾಷೆಯ ಕನ್ನಡದಲ್ಲಿ ಎಲ್ಲವನ್ನು ಹೇಳಿದರೆ ತಮ್ಮ ಆಷಾಢಭೂತಿತನ ಬಯಲಾಗುತ್ತದೆ ಎಂಬ ಭಯ. <br />
<br />
ನಾಳೆ ಬರುವುದು ನಮಗಿಂದೇ ಬರಲಿ. ಇಂದು ಬರುವುದು ನಮಗೀಗಲೇ ಬರಲಿ - ಎಂಬ ವಿಚಾರವನ್ನು ಮರೆತು ತಮ್ಮ ಭಕ್ತರಲ್ಲಿ ಭುಗಿಲು ಹುಟ್ಟಿಸುತ್ತ, ಅ ಭಯವನ್ನು ತಮ್ಮ ಪಾದಕ್ಕೆ ಎರಗಿದರೆ , ದಕ್ಷಿಣ ಕೊಟ್ಟರೆ ಕಡಿಮೆ ಮಾಡುತ್ತೇವೆ ಎಂಬ ಭ್ರಮೆ ಹುಟ್ಟಿಸುತ್ತ ಸಾಗಿದ್ದಾರೆ. ಹೆಣ್ಣು ಮಾಯೆಯೆಂಬರು. ಹೆಣ್ಣು ಮಾಯೆಯಲ್ಲ. ಮಣ್ಣು ಮಾಯೆಯೆಂಬರು ಮಣ್ಣು ಮಾಯೆಯಲ್ಲ. ಮನದ ಮುಂದಣ ಆಸೆಯೇ ಮಾಯೆ ! ಎಂಬುದು ಶರಣರ ನಿಲುವು. ಆದರೆ ಮಠಾಧೀಶರು ತಮ್ಮ ಮಠಗಳ ಗರ್ಭಗುಡಿಯೊಳಗೆ ಇನ್ನೂ ಮಹಿಳೆಯರನ್ನು ಬಿಟ್ಟುಕೊಳ್ಳವುದಿಲ್ಲ.ಅವಳು ಮುಟ್ಟಾಗುವಳು ಎಂಬ ಕಾರಣಕ್ಕೆ ಇನ್ನೂ ಮುಟ್ಟಬೇಡಿ, ಎಂಬ ಮಂತ್ರವನ್ನು ಚಾಲ್ತಿಯಲ್ಲಿ ಇಟ್ಟುಕೊಂಡಿದ್ದಾರೆ. ಆದರೆ ಮಹಿಳೆಯರನ್ನು ಗರ್ಭಗುಡಿಯಲ್ಲಿ ಬಿಟ್ಟುಕೊಳ್ಳದೆ ಇರುವವರಂತೆ ತೋರಿಸಿಕೊಳ್ಳವ ಇವರು ತಮ್ಮ ಖಾಸಗಿಕೋಣೆಯಲ್ಲಿ ಅವಳ ಕಳ್ಳಗರ್ಭಕ್ಕೆ ಕಾರಣೀಭೂತರಾಗುತ್ತಾರೆ.<br />
<br />
ಹಾವಿನ ಹಲ್ಲಕಳೆದು ಹಾವ ನಾಡಿಸಬಲ್ಲಡೆ ಹಾವಿನ ಸಂಗವೇ ಲೇಸು ಕಂಡಯ್ಯ , ಹೆಣ್ಣಿನೊಳಗೆ ಮನವಾದರೆ ಲಗ್ನವಾಗಿಕೂಡುವುದು , ನಡುವೆ ಸುಳಿವಾತ್ಮ ಹೆಣ್ಣೂ ಅಲ್ಲ. ಗಂಡೂ ಅಲ್ಲ - ಎಂಬ ಮಾತುಗಳು ಇವರಿಗೆ ಅಂತರಂಗದಲ್ಲಿ ಇಷ್ಟವಾಗಿಯೇ ಕಾಣುತ್ತವೆ. ಆದರೆ ಬಹಿರಂಗದಲ್ಲಿ ಅವನ್ನು ಜಾರಿಗೆ ತರಲಾಗದ ನಡುಕ. ಅದನ್ನು ಜಾರಿಗೆ ತಂದುದೆ ಆದರೆ ಎಲ್ಲಿ ತಾವು ತೊಟ್ಟುಕೊಂಡ ಕಾವಿ ಕಳಚಿಬಿದ್ದು , ಜನ ಕಾಲಿಗೆರಗಿ ದಕ್ಷಿಣ ಕೊಡುವುದು ತಪ್ಪುತ್ತದೋ ಎಂಬ ಭಯ.<br />
<br />
ಮೇಲಿನ ಈ ಎಲ್ಲಾ ಲಕ್ಷಣಗಳು ಬ್ರಾಹ್ಮಣೀಕೆಯ ಸಂಕೇತ. ಬ್ರಾಹ್ಮಣಿಕೆ ಆಂದರೆ ಬೇರೆ ಇನ್ನೇನು ಅಲ್ಲ. ಆಥವಾ ಬ್ರಾಹ್ಮಣ ಜಾತಿಯಲ್ಲ. ಮೋಸದ ನಡವಳಿಕೆಯಿಂದ ಜನಸಾಮಾನ್ಯರನ್ನು ದಿಕ್ಕು ತಪ್ಪಿಸಿ ಅದರ ಲಾಭ ಪಡೆಯುವುದೆಂದೇ ಅರ್ಥ. ಬಸವಾದಿ ಶರಣರ ನಿರ್ಗಮನವಾದ ನಂತರ ಅವರ ಅನುಯಾಯಿ ಮಠಗಳೆಂದು ಹೇಳಿಕೊಂಡ ಸ್ವಾಮಿಗಳು , ಮಠಗಳು ಇಂದು ಆ ತತ್ವಗಳಿಗೆ ಎಳ್ಳು ನೀರು ಬಿಟ್ಟು ಹಿಂದಿನ ಪರಂಪರಾಗತವೆಂಬ ಜೊಳ್ಳು ಆಚರಣೆಗಳಿಗೆ ತಗಲು ಬಿದ್ದಿದ್ದಾರೆ. ವೇದವೆಂಬುದು ಓದಿನ ಮಾತು .ಶಾಸ್ತ್ರವೆಂಬುದು ಸಂತೆಯ ಸುದ್ದಿ. ಪುರಾಣವೆಂಬುದು ಪುರಾಣವೆಂಬುದು ಪುಂಡರಗೋಷ್ಠಿ, ತರ್ಕವೆಂಬುದು ತಗರ ಹರಟೆ ಎಂದು ಸಷ್ಟ ಮಾತುಗಳನ್ನು ಇವನ್ನೆಲ್ಲ ಜರಿದಿದ್ದರೂ ಲಿಂಗಾಯತ ಮಠಗಳ ಮಠಾಧೀಶರು ಇವನ್ನೇ ತಮ್ಮ ಮೌಲ್ಯ ಎಂದು ಆರಾಧಿಸುತ್ತ ಸಾಗಿದ್ದಾರೆ. ಒಂದರ್ಥದಲ್ಲಿ ಲಿಂಗಾಯತ ಮಠಾಧೀಪತಿಗಳೂ ಬ್ರಾಹ್ಮಣ್ಯಕ್ಕೆ ಮತ್ತೆ ಜೋತು ಬಿದ್ದಿದ್ದಾರೆ.<br />
<br />
ನಮ್ಮ ಸಮಾಜ ಹಿಂದೊಂದು ಸಂದರ್ಭದಲ್ಲಿ ಬ್ರಾಹ್ಮಣ್ಯಕ್ಕೆ ಜೋತುಬಿದ್ದುದರ ಪರಿಣಾಮ ಘಜನಿಮೊಹ್ಮದನಂತಹ ಸಾಮಾನ್ಯ ರಾಜನು ಸಹ ನಮ್ಮ ದೇಶದ ಮೇಲೆ ದಂಡೆತ್ತಿ ಬಂದು ಇಲ್ಲಿನ ಅಪಾರ ಸಂಪತ್ತನ್ನು ಕೊಳ್ಳೆ ಹೊಡೆದ. ನಮ್ಮ ತಾತ ಮುತ್ತಾತರೆಲ್ಲ ಅಕ್ಷರದ ಸಮೀಪಕ್ಕೆ ಬಂದರೆ ಅಕ್ಷರಗಳೇ ನಾಶವಾಗುತ್ತವೆ ಎಂದು ಹೇಳಿ ಅವರನ್ನು ಅಕ್ಷರ ಕಲಿಕೆಯಿಂದ ದೂರವೇ ಇಡಲಾಗಿತ್ತು. ಗುಲಾಮಗಿರಿ ಮಾಡುವುದೇ ಅವರವರ ಕರ್ಮ ಎಂದು ಸಾರಿಕೊಂಡು ಬರಲಾಗಿತ್ತು. ಇದರಿಂದ ದೇಶದ ಅತ್ಯುನ್ನತ ಸ್ಥಾನಗಳೆಲ್ಲ ಒಂದೇ ವರ್ಗದ ಜನರ ಪಾಲಾಗಿ ಹೋಯ್ತು. ಈ ಮಾತನ್ನು ತಿಳಿಯಬೇಕಾದವರು ಇಂದಿಗೂ ದೊಡ್ಡ ಹುದ್ದೆಯಲ್ಲಿ ವಿರಾಜಮಾನರಾಗಿರುವವರನ್ನು ಗಮನಿಸಬೇಕು. ಇವರು ಮತ್ತದೇ ಹಿಂದೆ ಇದ್ದ ಮನುವಾದವನ್ನು ಜಾರಿಗೆ ತರಲು ಹಂಬಲಿಸುತ್ತಾರೆ. ಮೌಢ್ಯಗಳನ್ನು ಯಥೇಚ್ಚವಾಗಿ ಬಿತ್ತುತ್ತಾರೆ. ಪೊಳ್ಳು ಸಿದ್ಧಾಂತಗಳ ಮೂಲಕ ಅವನ್ನು ಸಮಥರ್ಿಸುವ ಎತ್ತುಗಡೆಯಲ್ಲಿ ತೊಡಗುತ್ತಾರೆ. ಖೊಟ್ಟಿ ಗ್ರಂಥಗಳನ್ನು ರಚಿಸಿ ಅವು ಇತಿಹಾಸ ಎಂಬಂತೆ ಬಿಂಬಿಸುತ್ತಾರೆ. ಮನುಷ್ಯನ ಸಾಮಥ್ರ್ಯಕ್ಕಿಂತ ಅವನ ಹಣೆಬರಹವೇ ದೊಡ್ಡದು ಎಂಬಂತೆ ಹೇಳುತ್ತಾರೆ. ಶಾಸ್ತ್ರ - ಪುರಾಣ ಆಗಮಗಳೆಲ್ಲ ಮತ್ತೆ ವಿಜೃಂಭಿಸುತ್ತವೆ. ಜೋತಿಷ್ಯಶಾಸ್ತ್ರವೂ ಒಂದು ವೈಜ್ಞಾನಿಕ ತಳಹದಿಯ ಮೇಲೆ ರೂಪಿತವಾದ ಶಾಸ್ತ್ರವೆಂದು ಸಾರಿಕೊಂಡು ಬರುತ್ತಾರೆ. ಒಟ್ಟಿನಲ್ಲಿ ಮನುಷ್ಯತ್ವಕ್ಕಿಂತ ದೇವರೇ ಶ್ರೇಷ್ಠವೆಂದು ವಾದಿಸುತ್ತಾರೆ. ಆ ದೇವರನ್ನು ಗುತ್ತಿಗೆ ಹಿಡಿದು ನಮ್ಮನ್ನು ಕುರಿಯ ತುಪ್ಪಳ ಸುಲಿದಂತೆ ಸುಲಿಯುತ್ತಾರೆ. ಜೊತೆಗೆ ನಮ್ಮನ್ನು ಇವರು ಮೋಸಗೊಳಿಸುತ್ತಿದ್ದಾರೆ ಎಂಬ ಭಾವನೆ ಬರದಂತೆ ಹುತಾತ್ಮ ಪಟ್ಟಕಟ್ಟಿ ನಮ್ಮನ್ನು ಚಟ್ಟಕ್ಕೆ ಏರಿಸುತ್ತಾರೆ.<br />
<br />
ನೋಡಿ : ಈ ನೆಲದಲ್ಲಿ ನಮ್ಮ ನಿಮ್ಮಂತೆ ರಕ್ತ ಮೌಂಸ ತುಂಬಿಕೊಂಡು ಓಡಾಡಿದ ಎಂಬಂತೆ ಕಲ್ಪಿಸಿಕೊಳ್ಳಲಿಕ್ಕೂ ಸಾಧ್ಯವಾಗದ ವ್ಯಕ್ತಿ ಮಹಾತ್ಮಗಾಂಧೀಜಿಯವರು. ಇಂಥ ಮಹಾತ್ಮನನ್ನು ಗುಂಡಿಕ್ಕಿ ಕೊಂದವರು ಇದೇ ಸನಾತನಿಗಳು. ಆದರೆ ಇವತ್ತು ಮತ್ತದೇ ಗಾಂಧೀ ಪ್ರತಿಮೆಗೆ ಮಾಲಾರ್ಪಣೆ ಮಾಡುತ್ತಾರೆ. ಆತನ ಹೆಸರನ್ನು ಕ್ಷಣ ಕ್ಷಣವೂ ಪಠಿಸುತ್ತಾರೆ. ನಾಗಾಜರ್ುನ ಕೊಂಡ ಎಂಬ ಪ್ರದೇಶದಲ್ಲಿ ಬೌದ್ಧರ ಮಾರಣಹೋಮಕ್ಕೆ ಕಾರಣಿಕರ್ತನಾದ ಶಂಕರಾಚಾರ್ಯರ ತತ್ವಗಳೇ ಇವರಿಗೆ ಆದರ್ಶ.ಗೋಡ್ಸೆ, ಗೋವಾಳ್ಕರ್ ಗಳೆಲ್ಲ ಇವರ ನೈತಿಕ ಸಂಕೇತಗಳು.ಮನುಸ್ಮೃತಿ ಎಂಬ ಪಾಖಂಡಿ ಗ್ರಂಥವೇ ಇವರ ಸಂವಿಧಾನ. ಅಸಮಾನತೆಯನ್ನು ಪೋಷಿಸಿ ಬೆಳೆಸುವುದೇ ಇವರ ಆದ್ಯಕರ್ತವ್ಯ ಎಂದು ತಿಳಿದಿರುವವರು.<br />
<br />
ವ್ಯಾಸ ಬೋಯಿತಿಯ ಮಗ , ಮಾರ್ಕಂಡೆಯ ಮಾತಂಗಿಯ ಮಗ,ಅಗಸ್ಯ ಕಬ್ಬಿಲನಾಗಿದ್ದರೂ ಸೈಇವರು ನಮ್ಮದೇ ಜನಾಂಗದ ಮಾಡೆಲ್ ಗಳನ್ನು ಪಡೆದು ಅವಕ್ಕೆ ಮತ್ತದೇ ಬ್ರಾಹ್ಮಣ್ಯದಲ್ಲಿ ಅದ್ದಿ ನಮ್ಮ ಮುಂದೆ ಇಡುತ್ತಾರೆ. ರಾಮ ಕ್ಷತ್ರಿಯನಾಗಿದ್ದರೂ , ಕೃಷ್ಣ ಗೊಲ್ಲರವನಾಗಿದ್ದರೂ , ಬುದ್ಧ ಕ್ಷತ್ರಿಯನಾಗಿದ್ದರೂ ,ಅಂಬೇಡ್ಕರ್ ಕೆಳವರ್ಗಕ್ಕೆ ಸೇರಿದವನಾಗಿದ್ದರೂ ಅವರನ್ನು ಮತ್ತೆ ಮತ್ತೆ ವಿಷ್ಣುವಿನ ಅವತಾರಗಳೆಂದು ಪ್ರಚುರ ಪಡಿಸುತ್ತಾರೆ.ಬ್ರಾಹ್ಮಣ್ಯವನ್ನು ಸಂಪೂರ್ಣ ವಿರೋಧಿಸಿದ ಬುದ್ಧನಂತಹ ವ್ಯಕ್ತಿಯನ್ನೂ ಯಾವ ನಾಚಿಕೆಯೂ ಇಲ್ಲದೆ ವಿಷ್ಣುವಿನ ಹನ್ನೊಂದನೆಯ ಅವತಾರ ಎಂದು ಕರೆಯುತ್ತಾರೆ. ಯಾವುದನ್ನು ಅಂಬೇಡ್ಕರ ತನ್ನ ಜೀವತಾವಧಿಯವರೆಗೂ ವಿರೋಧಿಸುತ್ತ ಬಂದನೋ , ಆತನಿಗೆ ಆಧುನಿಕ ಮನು ಎಂಬ ಬಿರುದು ನೀಡಿ (ಗೌರವಿಸುವಂತೆ ಕಂಡರೂ) ಆತನನ್ನು ಸೂಕ್ಮವಾಗಿ ಕೊಲೆಮಾಡುತ್ತಾರೆ. ಹಿಂದೂ ಧರ್ಮದ ಟೊಳ್ಳುತನಗಳನ್ನು ನಖಶಿಖಾಂತವಾಗಿ ವಿರೋಧಿಸಿದ ಹಾಗೂ ಯಾವಾಗಲೂ ಪ್ರಗತಿಗೆ ವಿರೋಧಿಯಾಗಿರುವ ಪೂಜಾರಿ, ಪುರೋಹಿತ ಮುಲ್ಲಾ, ಪಾದ್ರಿಗಳನ್ನು ನಂಬಲು ಹೋಗಬೇಡಿ. ಅವರು ಪ್ರಗತಿಯ ವಿರೋಧಿಗಳು. ಅವರು ತಮ್ಮನ್ನು ಎಂದೂ ತಿದ್ದಿಕೊಳ್ಳುವುದಿಲ್ಲ. ಅವರನ್ನು ಈ ದೇಶದಿಂದಲೇ ಒದ್ದೋಡಿಸಿ ಎಂದು ಸ್ಪಷ್ಟವಾಗಿಯೆ ಹೇಳಿದರು. ಆದರೆ ಪರಿಸ್ಥಿತಿ ಏನಾಗಿದೆಯೆಂದರೆ ಇಂಥ ಕ್ರಾಂತಿಪುರುಷ ವಿವೇಕಾನಂದರಿಗೂ ಇಂದು ಮಕಮಲ್ಲಿನ ಟೋಪಿ ಹೊಲಿಸಿದ್ದಾರೆ ಈ ಹಿಂದೂ ಟೆರರಿಸ್ಟ ಗಳು. ಚಾಲ್ತಿಯಲ್ಲಿರುವ (ನಮ್ಮವರೇ ಆಗಿರುವ - ನಮ್ಮವೇ ಆಗಿರುವ ) ವ್ಯಕ್ತಿ - ಸಂಗತಿಗಳನ್ನು ತಮ್ಮ ಕಬ್ಜಾ ಮಾಡಿಕೊಂಡು ನಮ್ಮನ್ನು ಕುರಿಗಳನ್ನಾಗಿ ಮಾಡುತ್ತಾರೆ. ಹುಬ್ಬಳ್ಳಿಯ ಈದ್ಗಾ ಮೈದಾನ , ಅಯೋಧ್ಯೆಯ ರಾಮಮಂದಿರ , ಬಾಬಾ ಬುಡನಗಿರಿ ಬೆಟ್ಟ , ಇದೀಗ ಸೇತು ಸಮುದ್ರಂ ವಿವಾದಗಳನ್ನು ಯಾರಾದರೂ ಸೂಕ್ಷ್ಮವಾಗಿ ಪರಿಶೀಲಿಸಬಹುದು.<br />
<br />
ಇವನ್ನೆಲ್ಲ ಗಮನಿಸಿದಾಗ ಬ್ರಾಹ್ಮಣರ ಪುರೋಹಿತರಿಗೂ , ಲಿಂಗಾಯತರ ಜಂಗಮ ಮಠಾಧೀಶರಿಗೂ ಯಾವುದೇ ರೀತಿಯ ವ್ಯತ್ಯಾಸ ಕಂಡುಬರುವುದಿಲ್ಲ. ಇವರಲ್ಲಿ ಯಾವುದೇ ತಾತ್ವಿಕ ಸಿದ್ಧಾಂತಗಳೂ ಇಲ್ಲ. ತಮ್ಮ ಸುತ್ತ ನೆರೆದ ಜನರನ್ನು ಧರ್ಮದ ಹೆಸರು ಹೇಳಿಕೊಂಡು ಸುಲಿಯುವುದೊಂದೇ ಇವರ ಧರ್ಮವಾಗಿದೆ. ಹಿಂದೊಂದು ಸಂದರ್ಭದಲ್ಲಿ ಮೈಸೂರು ರಾಜ್ಯದ ಹೈಕೋರ್ಟ ಮೆಟ್ಟಲನ್ನು ಏರಿ ಅಲ್ಲಿ ವಾದಿಸಿ ನ್ಯಾಯಿಕ ತೀಪರ್ು ಪಡೆದಂತೆ ಇವರೂ ಲಿಂಗಿ ಬ್ರಾಹ್ಮಣರು ! ರಂಭಾಪುರಿ ಪಂಚಪೀಠ(ಡ)ದ ಸ್ವಾಮಿಯಂತೂ ಇಂಥ ಲಿಂಗಿ ಬ್ರಾಹ್ಮಣರ ಹಿಂದೆ ಇಂದು ಲಿಂಗಾಯತರು ಹೊರಟಿರುವುದು ಎಷ್ಟು ಸರಿ ? ಮಠಾಧೀಶರೇ ನಮ್ಮ ಏನೆಲ್ಲ ಬೆಳವಣಿಗೆಗೆ ಕಾರಣ ಎಂದು ತಿಳಿದ ಲಿಂಗಾಯತರ ಅವಜ್ಞತೆಯೂ ಇದಕ್ಕೆ ಕಾರಣ ಎಂದು ಹೇಳದೆ ವಿಧಿಯಿಲ್ಲವಾಗಿದೆ.<br />
<br />
ಇವನಾರವ ಇವನಾರವ ಎನ್ನದೆ ಇವ ನಮ್ಮವ , ಇವ ನಮ್ಮವ ಎಂದು ಎಲ್ಲರನ್ನು ಅಪ್ಪಿಕೊಂಡ ಧರ್ಮ ಮನುವಾದಿಗಳಾಗಿರುವ ಜಂಗಮರ ಮೂಲಕ , ಇವನಾರ - ಇವನಾರವ ಎಂದು ಕೇಳುವಂತಾಗುತ್ತೇವೆ. ಅದ್ದರಿಂದ ನಿಜವಾದ ಬಸವಾದಿ ಶರಣರ ಅನುಯಾಯಿಗಳೆಂದು ಹೇಳಿಕೊಳ್ಳುವ ಲಿಂಗಾಯತರು ತಮ್ಮ ತತ್ವಗಳನ್ನು ಸರಿಯಾಗಿ ತಿಳಿದುಕೊಳ್ಳಬೇಕು. ವಚನ ಸಾಹಿತ್ಯದ ತಾಯಿ ಹೇಳಿದಂತೆ ನಾವು ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕೆ ಹೊರತು , ಈ ಗುರುಗಳೆಂಬ ಭಾವುಗಗಳು ಹೇಳಿದಂತೆ ಅಲ್ಲ. ನಮಗೆ ನಮ್ಮ ಅರಿವು ಗುರುವಾಗಬೇಕೆ ಹೊರತು. ಯಾವೊಬ್ಬ ವ್ಯಕ್ತಿ ಗುರುವಾಗಬಾರದು.<br />
<br />
ವೈದಿಕಶಾಹಿಯ ಗರ್ಭದಿಂದ ಉದಿಸಿದ ಬಿ.ಜೆ.ಪಿ ಎಂಬ ಸನಾತನಿಗಳ ಪಕ್ಷವನ್ನು ನಮ್ಮ ಗುರುಗಳು (?)( ಜಂಗಮರು) ನಂಬಿದ್ದಾರೆಂದೂ ಲಿಂಗಾಯತರು ನಂಬಿಕೊಂಡು ಹೊರಟೆವೆಂದರೆ ನಮ್ಮ ಹಳ್ಳವನ್ನು ನಾವೇ ತೋಡಿಕೊಳ್ಳುತ್ತೇವೆ. ಅಥವಾ ಹುಲಿಯ ಮೀಸೆಯ ಹಿಡಿದು ಉಯ್ಯಾಲೆ ಆಡಿದರು , ಮಡಿಲಲ್ಲಿ ಸುಣ್ಣವ ಕಟ್ಟಿಕೊಂಡು ಮಡುವ ಬಿದ್ದರು ಎಂಬಂಥ ಸ್ಥಿತಿಯಲ್ಲಿ ಲಿಂಗಾಯತರು ಸರ್ವನಾಶವಾಗುತ್ತಾರೆ. ಈ ಮೂಲಕ ಬಸವಾದಿ ಶರಣರನ್ನು ಕ್ಷಣ ಕ್ಷಣಕ್ಕೂ ಇರಿದು ಕೊಲ್ಲಿದ ಘಾತುಕತನಕ್ಕೆ ಪಕ್ಕಾಗುತ್ತಾರೆ. ಆದರೆ ಈ ಸತ್ಯವನ್ನು ಕನರ್ಾಟಕದ ಲಿಂಗಾಯತರು ತಿಳಿದುಕೊಳ್ಳುವರೆ ? 0 ವಿಶ್ವಾರಾಧ್ಯ ಸತ್ಯಂಪೇಟೆUnknownnoreply@blogger.com0tag:blogger.com,1999:blog-2647129451779812999.post-52594176273839131492010-05-22T07:58:00.000-07:002010-05-22T07:58:38.564-07:00ಕಾಂತಾ ಹೋರಾಟ ಕೋಮಾಸ್ಥಿತಿಯಲ್ಲಿರುವ ಸರಕಾರ !<span style="color: yellow;"><br />
</span><br />
<span style="color: yellow;"> </span><span style="background-color: #ead1dc; color: red;">ಗುಲಬಗರ್ಾ ಪೌರಕಾಮರ್ಿಕ ಸಂಬಳದ ಸಮಸ್ಯೆ ಯಡ್ಡಿ ಸರಕಾರದ ಜಿದ್ದಿನಿಂದ ಮತ್ತಷ್ಟು ಕಗ್ಗಂಟಾಗುತ್ತ ಸಾಗಿದೆ. ಚಳುವಳಿಗಾರರ ಮೇಲೆ ಇಲ್ಲ ಸಲ್ಲದ ಮೊಕದ್ದಮೆಗಳನ್ನು ಹೂಡಿ ಅವರಿಗೆ ಜೇಲಿಗೆ ಅಟ್ಟುವ ಜಿಲ್ಲಾಡಳಿತ ಕಾರ್ಯವೂ ಅಷ್ಟೆ ನಾಚಿಕೆಯಿಲ್ಲದೆ ನಡೆದುಹೋಗುತ್ತಿದೆ. 477 ಪೌರ ಕಾಮರ್ಿಕರಿಗೆ ಈ ಮೊದಲು ಗುಲಬಗರ್ಾ ಮಹಾನಗರ ಪಾಲಿಕೆ ತಾನೇ ಸಂಬಳ ವಿತರಿಸುತ್ತಿತ್ತು. ಆದರೆ ಅದೇನು ಕಾರಣವೋ ಒಮ್ಮಿದೊಮ್ಮೆ ಅಂದರೆ 35 ತಿಂಗಳ ಹಿಂದಿನಿಂದ ಸರಕಾರ ಅವರಿಗೆ ಸಂಬಳವೇ ನೀಡಲಿಲ್ಲ. ಎಸ್.ಕೆ.ಕಾಂತಾ ಅವರ ನೇತೃತ್ವದಲ್ಲಿ ಧರಣಿ, ರಸ್ತೆ ರೋಖೋ, ರೈಲ್ ರೋಖೋ ಹಾಗೂ ಸತ್ಯಾಗ್ರಹ ಕೊನೆಗೆ ಆಮರಣ ಉಪವಾಸ ಎಂದು ಕುಳಿತ ಮೇಲೆಯೆ ಸರಕಾರ ಅರೆಕಣ್ಣು ತೆರೆದಿದೆ. ಆದರೂ ಅದರೊಳಗೂ ತನ್ನ ಕಪಿಚೇಷ್ಟೆಯನ್ನು ಸರಕಾರ ಬಿಟ್ಟುಕೊಟ್ಟಿಲ್ಲ.</span><br />
<span style="background-color: #ead1dc; color: red;"> ಕಾಂತಾ ಅವರ ಆಮರಣ ಉಪವಾಸವನ್ನು ಅವರ ಆರೋಗ್ಯದ ನೆಪವೊಡ್ಡಿ (ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹಾಗೂ ಡಾ.ಆರ್. ವಿಶಾಲ್ ಎಂಬ ಜಿಲ್ಲಾಧಿಕಾರಿ ಕೂಡಿಕೊಂಡು) ಒತ್ತಾಯ ಪೂರ್ವಕವಾಗಿ ಸತ್ಯಾಗ್ರಹದ ಸ್ಥಳದಿಂದ ಎತ್ತುಕೊಂಡು ಒಯ್ದರು. ಆದರೆ ಅವರನ್ನು ಗುಲಬಗರ್ಾಕ್ಕಿಂತಲೂ ಅತ್ಯುತ್ತಮವಲ್ಲದ ರಾಯಚೂರಿನ ಓಪೆಕ್ ಆಸ್ಪತ್ರೆಯಲ್ಲಿ ದಾಖಲು ಮಾಡುವ ಮೂಲಕ ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟರು. ಕಾಂತಾ ಅವರ ದೇಹದಲ್ಲಿ ಗ್ಲುಕೋಸ್ ಪ್ರಮಾಣ 50 ರಷ್ಟು ಆಗಿತ್ತು. ಇದು ನಿಜಕ್ಕೂ ಕಳವಳದ ಸಂಗತಿ. ಆರೋಗ್ಯವಂತ ಮನುಷ್ಯನ ದೇಹದಲ್ಲಿ ಗ್ಲುಕೋಸ್ ಪ್ರಮಾಣ 100 ರಷ್ಟು ಇರಬೇಕು. ಇದು ಹೀಗೆ ಮುಂದುವರೆದುದೆ ಆದರೆ ಕಾಂತಾ ಕೋಮಾ ಸ್ಥಿತಿಗೆ ಹೋಗುವ ಸಾಧ್ಯತೆಗಳಿತ್ತು. ಇದನ್ನು ಜಿಲ್ಲಾ ವೈದ್ಯಾಧಿಕಾರಿಗಳು ದೃಢಪಡಿಸಿದ್ದರು. ಇಂಥ ಸಂದರ್ಭದಲ್ಲಿಯೂ ಜಿಲ್ಲಾಡಳಿತ ಕಾಂತಾ ಅವರ ಅನಾರೋಗ್ಯದ ಸ್ಥಿತಿಯಲ್ಲಿಯೂ ಅಲ್ಲಿ - ಇಲ್ಲಿ ಸುತ್ತಾಡಿಸಿ ರಾತ್ರಿ 12 ಗಂಟೆಗೆ ಆಸ್ಪತ್ರೆಯ ಮುಖ ತೋರಿಸಿದರೆಂದರೆ ಏನರ್ಥ ? ಒಂದು ಕಡೆ ಕಾಂತಾ ಅವರ ಆರೋಗ್ಯದ ಸ್ಥಿತಿ ಗಂಭೀರವಾಗಿತ್ತು, ಎಂದು ಹೇಳುವ ಜಿಲ್ಲಾಡಳಿತವೇ ಅವರನ್ನು ಬೇಕಂತಲೆ ಹಗಲೆಲ್ಲ ಅಲ್ಲಲ್ಲಿ ಸುತ್ತಾಡಿಸಿದ್ದು ಏತಕ್ಕೆ ? !</span><br />
<span style="background-color: #ead1dc; color: red;"> ಇದೆಲ್ಲಕ್ಕಿಂತ ಮುಖ್ಯವಾಗಿ ಗುಲಬಗರ್ಾ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಿಗೆ ಎಸ್.ಕೆ.ಕಾಂತಾ ಮಗ್ಗಲು ಮುಳ್ಳಾಗಿದ್ದಾರೆ. ಎಸ್.ಕೆ.ಕಾಂತಾ ಪ್ರತಿಯೊಂದನ್ನು ಸಂವಿಧಾನದ ಚೌಕಟ್ಟಿನಲ್ಲಿ ಮಾಡಬೇಕೆಂದು ಬಯಸುತ್ತಾರೆ. ಜನವಿರೋಧಿಯಾದ , ಸಂವಿಧಾನಿಕ ಶಕ್ತಿಯನ್ನು ಕಾಂತಾ ತಮ್ಮ ಎಂದಿನ ಹೋರಾಟದ ಮೂಲಕ ಬಗ್ಗು ಬಡಿಯುತ್ತಾರೆ. ಇದೆಲ್ಲ ಭ್ರಷ್ಟ ಅಧಿಕಾರಿಗಳಿಗೆ ನುಂಗಲಾಗದ ತುತ್ತಾಗಿದೆ. ಜೊತೆಗೆ ಯಡ್ಡಿಯ ಸರಕಾರಕ್ಕೂ ಕೂಡ ಕಾಂತಾ ನ್ಯಾಯಯುತವಾಗಿ, ಜನಪರ ಹೋರಾಟಗಳ ಮೂಲಕ ಬೆಳೆಯುವುದು ಹೊಟ್ಟೆ ಕಿಚ್ಚಿಗೆ ಕಾರಣವಾಗಿದೆ.</span><br />
<span style="background-color: #ead1dc; color: red;"> ಹಾಗಾಗಿ ಬೇಕಿಲ್ಲದ ಗಂಡ ಮೊಸರಿನಲ್ಲಿಯೂ ಕಲ್ಲು ಹುಡುಕಿದಂತೆ ನೆವ ಮಾಡಿಕೊಂಡು ಪೌರ ಕಾಮರ್ಿಕರ ಹೋರಾಟದ ನ್ಯಾಯಯುತ ಬೇಡಿಕೆಯನ್ನು ಹಿತ್ತಲಬಾಗಿಲ ಮೂಲಕ ಪರಿಹರಿಸಬೇಕೆಂದು ಸರಕಾರ ಹೊರಟಿದೆ. ಆದರೆ ಕಾಂತಾ ಮಾತ್ರ ಸರಕಾರ ನಿಲುವು ಏನೇ ಇದ್ದರೂ ಅದು ಪಾರದರ್ಶಕವಾಗಿ, ಸಂವಿಧಾನಿಕವಾಗಿ ಇರಲಿ. ಅಂದರೆ ಈ ಹಿಂದೆ ಪಾಲಿಕೆಯೇ ತನ್ನ ಕಾಮರ್ಿಕರಿಗೆ ನೇರ ಸಂಬಳ ನೀಡುತ್ತಿತ್ತು. ಈಗಲೂ ಅದು ನೀಡಲಿ. ಅಂದಿಲ್ಲದ ಸ್ವಸಹಾಯ ಸಂಘಗಳು ಈಗ ಏಕೆ ಬಂದವು. ಒಂದು ವೇಳೆ ಅಂದೆ ನೀವು ಯಾವುದೋ ಏಜೆನ್ಸಿ ಮೂಲಕ ನಮಗೆ ಸಂಬಳ ನೀಡುತ್ತಿದ್ದರೆ ಅವರ ಹೆಸರು ಲೈಸನ್ಸ್ , ಹೆಸರು ತಿಳಿಸಿ ಎಂದು ಹೇಳಿದ್ದೆ ಸರಕಾರಕ್ಕೆ ಅಂಡಿನಲ್ಲಿ ಮೆಣಸಿನಕಾಯಿ ಇಟ್ಟಂತಾಗಿದೆ. ಇಲ್ಲವೆ ನಮ್ಮನ್ನು ಕೆಲಸದಿಂದ ವಜಾಗೊಳಿಸಿದ್ದಾಗಿ ಬರಹದ ಮೂಲಕ ತಿಳಿಸಿ ಎಂದು ಹೇಳಿದ್ದು ಸರಕಾರಕ್ಕೆ ನುಂಗಲಾಗದ ತುತ್ತಾಗಿದೆ.</span><br />
<div class="separator" style="clear: both; text-align: center;"><a href="http://4.bp.blogspot.com/_R_Hdfzh8ygA/S_fwQ43_niI/AAAAAAAAACU/k_hyhi73VFU/s1600/S.K.kanta.jpg" imageanchor="1" style="clear: left; cssfloat: left; float: left; margin-bottom: 1em; margin-right: 1em;"><span style="background-color: #ead1dc; color: red;"><img border="0" gu="true" height="200" src="http://4.bp.blogspot.com/_R_Hdfzh8ygA/S_fwQ43_niI/AAAAAAAAACU/k_hyhi73VFU/s200/S.K.kanta.jpg" width="133" /></span></a></div><span style="color: red;"><span style="background-color: #ead1dc;"> ಎಸ್.ಕೆ.ಕಾಂತಾ ಅವರನ್ನು ಓಪೆಕ್ ಆಸ್ಪತ್ರೆಯಿಂದ ಸಮಸ್ಯೆ ಬಗೆಹರಿಸುತ್ತೇನೆ ಎಂದೆಳಿ ಕರೆಯಿಸಿಕೊಂಡ ಮುಖ್ಯ ಮಂತ್ರಿ ಮತ್ತದೆ ರಾಗ ಹಾಡಿ ವಾಪಾಸು ಕಳಿಸಿದ್ದಾರೆ. ಇದರಿಂದ ವ್ಯಗ್ರರಾದ ಎಸ್.ಕೆ. ಕಾಂತಾ ಹಾಗೂ ಬೆಂಬಲಿಗರು ಸಂಬಳ ಕೊಡಿ ಇಲ್ಲವೆ ವಿಷ ನೀಡಿ ಎಂಬ ವಿನೂತನ ಪ್ರತಿಭಟನೆಯನ್ನು ಹಮ್ಮಿಕೊಂಡು ಪಾಲಿಕೆ ಅಧಿಕಾರಿಗಳಿಗೆ ದಿಗ್ಭಂದನೆ ಚಳುವಳಿ ಶುರುಮಾಡಿದ್ದಾರೆ. ಆದರೆ ಸರಕಾರ ಮಾತ್ರ ಮೊಂಡು ಹಟಕ್ಕೆ ಬಿದ್ದು ಕಾಂತಾ ಮತ್ತವರ ಬೆಂಬಲಿಗರನ್ನು ಜೈಲಿಗೆ ತಳ್ಳುವ ಮೂಲಕ ತನ್ನ ಹಠಮಾರಿತನವನ್ನು ಮುಂದುವರೆಸಿದೆ. ಇದು ಹೀಗೆ ಮುಂದುವರೆದುದೆ ಆದರೆ ಗುಲಬಗರ್ಾ ಹೊತ್ತಿ ಉರಿಯುವುದರಲ್ಲಿ ಯಾವುದೆ ಅನುಮಾನವಿಲ್ಲ.</span> </span> <span style="color: red;"><strong>0 ಶರಾವತಿ ಸತ್ಯಂಪೇಟೆ</strong></span>Unknownnoreply@blogger.com0tag:blogger.com,1999:blog-2647129451779812999.post-54589482741981837952010-05-20T07:48:00.000-07:002010-05-20T07:48:48.258-07:00ಶಿವಮೊಗ್ಗ ವಿ.ವಿ.ಯಲ್ಲಿ ಪಂಚಪೀಠಿಗಳ ಹುನ್ನಾರ<div class="separator" style="background-color: white; clear: both; color: purple; text-align: center;"><a href="http://1.bp.blogspot.com/_R_Hdfzh8ygA/S_VKEemghAI/AAAAAAAAABw/V1NlLPpjEvU/s1600/pnachpitigalu-+net.jpg" imageanchor="1" style="margin-left: 1em; margin-right: 1em;"><span></span><img border="0" height="108" src="http://1.bp.blogspot.com/_R_Hdfzh8ygA/S_VKEemghAI/AAAAAAAAABw/V1NlLPpjEvU/s400/pnachpitigalu-+net.jpg" width="400" /></a></div><div style="background-color: white; color: purple;"></div><span style="background-color: white; color: purple;"> ಹುಚ್ಚು ಮುಂಡೆ ಮದುವೆಯಲ್ಲಿ ಉಂಡವನೆ ಜಾಣ ಎಂಬಂತೆ ಯಡ್ಡಿಯ ಸರಕಾರದಲ್ಲಿ ಅಡ್ಡಾದಿಡ್ಡಿಯಾಗಿ ಆಲೋಚಿಸುವವನೆ ಪಂಡಿತ, ಬುದ್ದಿಜೀವಿ ಎಂದು ಕರೆಯಿಸಿಕೊಳ್ಳುವ ಕಾಲ ಬಂದಿದೆ. ಹೀಗಾಗಿ ಸರಕಾರದ ಸುತ್ತೋಲೆಗಳಲ್ಲಿ ದಿನ ನಿತ್ಯ ಅನೇಕ ಜನವಿರೋಧಿಯಾದ ಅಂಶಗಳೆ ಪ್ರಕಟವಾಗಿರುವ ಸಂಗತಿಗಳನ್ನು ನಾವೆಲ್ಲ ಪತ್ರಿಕೆಗಳಲ್ಲಿ ಓದುತ್ತೇವೆ. ಹಿಂದೊಮ್ಮೆ ಮುಜರಾಯಿ ಇಲಾಖೆಯ ಸಚಿವ ತನ್ನ ಇಲಾಖೆಯ ಅಡಿಯಲ್ಲಿ ಬರುವ ಎಲ್ಲಾ ದೇವಾಲಯಗಳಲ್ಲೂ ಯಡಿಯೂಪ್ಪನವರ ಹೆಸರಿನಲ್ಲಿ ಮಂಗಳಾರತಿ ಮಾಡಬೇಕು ಎಂದು ಹೊರಡಿಸಿದ್ದ ಆಜ್ಞೆ ಎಷ್ಟೊಂದು ಬಾಲಿಷವಾಗಿತ್ತು ಎಂಬುದು ಎಲ್ಲರೂ ಬಲ್ಲ ಸಂಗತಿಯಾಗಿತ್ತು. ಕಂಪ್ಯೂಟರಿನ ಇವತ್ತಿನ ಇಪ್ಪತ್ತೊಂದನೆಯ ಶತಮಾನದಲ್ಲಿಯೂ ಶಿವರಾತ್ರಿಯ ದಿನದಂದು ಸರಕಾರ ತನ್ನ ಖಚರ್ಿನಲ್ಲಿ ಗಂಗೋತ್ರಿ, ಯಮನೋತ್ರಿಯ ನದಿಯ ನೀರನ್ನು ತಂದು ಪವಿತ್ರ ಉದಕವೆಂದು ಹಂಚುವುದು ಎಷ್ಟೊಂದು ಅವೈಜ್ಞಾನಿಕ ಹಾಗೂ ಮೂರ್ಖತನದ ಪರಮಾವಧಿಯೆಂದು ಯಾರಿಗಾದರೂ ಅನ್ನಿಸದೆ ಇರದು.</span><br style="background-color: white; color: purple;" /><span style="background-color: white; color: purple;"> ಆದರೆ ನಾಚಿಕೆ ಎಂಬುದೆ ಇಲ್ಲದ, ತಲೆಯಲ್ಲಿ ಕೊಂಚವೂ ಮಿದುಳು ಇಷ್ಟುಕೊಳ್ಳದ ,ಪುರೋಗಾಮಿ ಸರಕಾರದ ತಲೆಯಲ್ಲಿ ಇಂಥ ಅವೈಜ್ಞಾನಿಕ ಆಲೋಚನೆಗಳು ಹೊರಬರುವುದು ಸಹಜವೆ ಆಗಿದೆ. ಸರಕಾರದ ಇಂಥ ತಲೆಕೆಟ್ಟ ನೀತಿಯನ್ನು ಗಮನಿಸಿ , ಅಲ್ಲಲ್ಲಿ ಇರುವ ಸರಕಾರದ ಬೆಂಬಲಿಗರು ಅದರ ಲಾಭ ಪಡೆಯಬೇಕೆಂದು ಹೊಂಚುಹಾಕುತ್ತಿದ್ದಾರೆ. ತೀರಾ ಇತ್ತೀಚೆಗೆ ಶಿವಮೊಗ್ಗೆಯ ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ಶ್ರೀಶ್ರೀ ಜಗದ್ಗುರು ಪಂಚಾಚಾರ್ಯ ಅಧ್ಯಯನ ಪೀಠವನ್ನು ಸ್ಥಾಪಿಸಲು ಕೋರಿ ಈಗಾಗಲೇ ರಾಜ್ಯಪಾಲರ ಅನುಮೋದನೆಗಾಗಿ ಕಳುಹಿಸಿದ್ದಾರೆ. </span><br style="background-color: white; color: purple;" /><span style="background-color: white; color: purple;"> ಜಗದ್ಗುರು ಎಂಬ ಪದವೆ ಮೊಟ್ಟ ಮೊದಲು ಪ್ರಜಾಪ್ರಭುತ್ವವನ್ನು ಅಣಕ ಮಾಡುವ ಪದ. ಇಲ್ಲಿ ಪರಸ್ಪರ ಸಮಾನತೆ ಎಂಬುದೆ ಇಲ್ಲ. ಇದು ಭೂರ್ಜತನದ ಪಳಿಯುಳಿಕೆ. ಅಸಮಾನತೆ- ಅವೈಜ್ಞಾನಿಕತೆ- ಅಸಂಗತ ಸಂಗತಿಗಳೆ ಇದರ ಮೂಲ ತತ್ವಗಳು. ಇನ್ನೂ ಪಂಚಾಚಾರ್ಯರ ಬಗೆಗೆ ಹೇಳುವುದಾದರೆ ಅವರ ಅಸ್ತಿತ್ವದ ಬಗೆಗೆ ಸ್ಪಷ್ಟ ಚಿತ್ರಗಳೆ ಇಲ್ಲ. ಜಗತ್ತು ಹುಟ್ಟುವುದಕ್ಕಿಂತ ಮೊದಲೆ ಅಂದರೆ ಕೈಲಾಸದಲ್ಲಿ ಪರಶಿವನಿಗೆ ಮತಬೋಧೆಯನ್ನು ಮಾಡಿದವರಂತೆ. ಆಮೇಲೆ ಮತ್ತೊಂದು ಕಡೆ ಹರಪ್ಪ ಮಹೆಂಜೋದಾರು ನಾಗರಿಕ ಸಂಸ್ಕೃತಿಯ ದಿನಮಾನಗಳಲ್ಲಿ ಪಂಚಾಚಾರ್ಯರು ಬದುಕಿದ್ದರಂತೆ. ಮಗದೊಂದು ಕಡೆ ವಿಭಿಷಣನಿಗೆ ಲಿಂಗಧಾರಣೆ ಮಾಡಿದರಂತೆ !! ಮತ್ತೊಂದು ಪರಮಾಶ್ಚರ್ಯದ ಸಂಗತಿಯೆಂದರೆ ಇವರಿಗೆ ತಂದೆ ತಾಯಿಗಳೆ ಇಲ್ಲವಂತೆ. ಯಾಕೆಂದರೆ ಇವರಿಗೆ ಹುಟ್ಟು ಸಾವುಗಳಿಂದ ಅತೀತರಾದ ಲಿಂಗೋದ್ಭವರಂತೆ ! ಇನ್ನೂ ಸ್ಪಷ್ಟವಾಗಿ ಹೇಳಬೇಕಾದರೆ ತಂದೆ - ತಾಯಿಗಳ ದೈಹಿಕ ಸಂಪರ್ಕ ಇಲ್ಲದೆ ಲಿಂಗದಲ್ಲಿ ಹುಟ್ಟಿದ ಲಿಂಗೋದ್ಭವರಂತೆ ! ಹಿಂಗೆ ಅಂತೆ ಕಂತೆಗಳ ಸಂತೆಯಲ್ಲಿ ಹುಟ್ಟಿದ ಜಗದ್ಗುರುಗಳ ಅಧ್ಯಯನದಲ್ಲಿ ಮಾಡುವುದಾದರೂ ಏನನ್ನೂ ?</span><br style="background-color: white; color: purple;" /><span style="background-color: white; color: purple;"> ಪಂಚಾಚಾರ್ಯರ ಹುಟ್ಟೆ ಒಂದು ಪವಾಡ. ಅನಂತರ ಅವರ ಬದುಕಿದ, ಬರೆದರೆಂದು ಹೇಳಲಾಗುವ ಅಸಂಗತ ಸಂಗತಿಗಳು ಇಂದಿಗೂ ಮೂಟೆಗಟ್ಟಲೆ ಪೇರಿಸಿ ಇಟ್ಟು ಎಲ್ಲರನ್ನು ದಿಕ್ಕು ತಪ್ಪಿಸುತ್ತ ಹೊರಟಿದ್ದಾರೆ. ಹದಿನೈದು - ಹದಿನೇಳನೆ ಶತಮಾನದಲ್ಲಿ ರಚಿಸಿರಬಹುದಾದ ಖೊಟ್ಟಿ ಗ್ರಂಥ ಸಿದ್ಧಾಂತ ಶಿಖಾಮಣಿ ಎಂಬ ಪುಸ್ತಕವೆ ಇವರಿಗೆ ಆಧಾರ. ಈ ಕೃತಿಯ ಕುರಿತು ಸಂಪೂರ್ಣವಾಗಿ ಅಧ್ಯಯನ ನಡೆಸಿದ ಹಿರೇಮಲ್ಲೂರ ಈಶ್ವರನ್ ಎಂಬ ಭಾಷಾ ತಜ್ಞ , ಇದು ಕೇವಲ ಒಬ್ಬ ವ್ಯಕ್ತಿ ಬರೆದ ಕೃತಿ ಅಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಮಗದೊಂದು ಚೋದ್ಯದ ಸಂಗತಿಯೆಂದರೆ ಈ ಪಂಚಪೀಠಗಳು ಮೂಲತಃ ಭಿನ್ನ ಭಿನ್ನ ಜನಾಂಗದವರು ಸಂಸ್ಥಾಪಿಸಿದ ಪೀಠಗಳು. ಕಾಲಾನಂತರವಷ್ಟೆ ಅವುಗಳನ್ನೆಲ್ಲ ತಮ್ಮ ಕಬ್ಜಾಕ್ಕೆ ತೆಗೆದುಕೊಂಡ ಜಾತಿ ಜಂಗಮರು ತಮ್ಮ ಹೆಸರಿನಿಂದ ಟೆನೆಂಟ್ ಮಾಡಿಸಿಕೊಂಡಿದ್ದಾರೆ ಅಷ್ಟೆ. ಮೊದ ಮೊದಲು ಚತುರಾಚಾರ್ಯರಾಗಿದ್ದ ಇವರು ಪಂಚಾಚಾರ್ಯರಾದದ್ದೂ ಕೂಡ ತೀರ ಇತ್ತೀಚಿನ ಶತಮಾನಗಳಲ್ಲಿ , ಇದು ಅಂಗೈನೆಲ್ಲಿಯಷ್ಟು ಸ್ಪಷ್ಟವಾಗಿದೆ.</span><br style="background-color: white; color: purple;" /><span style="background-color: white; color: purple;"> ಜಟ್ಟಿ ಬಿದ್ದರೂ ಮೀಸೆಗೆ ಮಣ್ಣು ಹತ್ತಿಲ್ಲ ಎಂದು ಹೇಳುವ ಕಲೆಯನ್ನು ಕರಗತ ಮಾಡಿಕೊಂಡ ಪಂಚಾಚಾರ್ಯರ ಜಗದ್ಗುರು(ಜಾಗದ ಗುರುಗಳು ಅಥರ್ಾರ್ಥ ಗಜದ್ಗುರು)ಗಳು ಲಿಂಗಾಯತರಿಗೆ ನಾವು ಗುರುಗಳು ಎಂದು ಸಾಧಿಸುತ್ತಲೆ ಹೊರಟಿದ್ದಾರೆ. ಹೊಗಲಿ ಇವರು ಬಸವಣ್ಣನವರು ಬೆಳೆದು ಬಿತ್ತಿ ಹೋದ ಆ ಸಂಸ್ಕೃತಿಗೆ ತಕ್ಕುದಾದ ವಿಚಾರಗಳನ್ನು ಹೇಳುತ್ತಿದ್ದರೆ ಒಪ್ಪಿಕೊಳ್ಳಬಹುದಿತ್ತೇನೋ ? ಬಸವಣ್ಣನವರ ಹಾಗೂ ಅಂದಿನ ಶರಣರ ವಿಚಾರಗಳು ಉತ್ತರವಾದರೆ ಈ ಪಂಚಾಚಾರ್ಯ ಜಗದ್ಗುರುಗಳ ವಿಚಾರಗಳು ದಕ್ಷಿಣ ದಿಕ್ಕಿಗೆ ಕರೆದುಕೊಂಡು ಒಯ್ಯುತ್ತವೆ. ಬಸವಣ್ಣನವರ ವಿಚಾರಧಾರೆ ಇಂದಿನ ಪ್ರಜಾಪ್ರಭುತ್ವದ ಹಾಗೂ ವೈಜ್ಞಾನಿಕ ದಿನಮಾನಗಳಲ್ಲೂ ಪ್ರಸ್ತುತವೆನಿಸಿದರೆ ಈ ಜಗದ್ಗುರುಗಳ ವಿಚಾರಗಳೆಲ್ಲ ಅಸಂಗತ ಹಾಗೂ ಅವೈಜ್ಞಾನಿಕವೆಂದು ಮೇಲು ನೋಟಕ್ಕೆ ಗುರುತಿಸಬಹುದಾಗಿದೆ.</span><br style="background-color: white; color: purple;" /><span style="background-color: white; color: purple;"> ಹೀಗೆ ತೀರಾ ಅವೈಜ್ಞಾನಿಕ ಹಾಗೂ ಅಸಂಗತ ಸಂಗತಿಗಳ ಮೇಲೆ ನಿಂತಿರುವ ಜಗದ್ಗುರುಗಳಿಗಾಗಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪೀಠವೊಂದನ್ನು ಸಂಸ್ಥಾಪಿಸುವುದು ನಿಜಕ್ಕೂ ಖಂಡನಾರ್ಹ ಸಂಗತಿಯಾಗಿದೆ. ಪ್ರಜಾಪ್ರಭುತ್ವದ ಇಂದಿನ ದಿನಮಾನಗಳಲ್ಲಿ ಅಸಮಾನತೆಯನ್ನು ಪೋಷಿಸಿ ಬೆಳೆಸಿಕೊಂಡು ಹೋಗುವ, ವ್ಯವಸ್ಥೆಯಲ್ಲಿನ ಮೇಲು ಕೀಳುಗಳಿಗೆಲ್ಲ ನಮ್ಮ ಕರ್ಮ- ಪ್ರಾರಬ್ಧವೆ ಕಾರಣ ಎಂದು ಸಾರಿಕೊಂಡು ಹೊರಟಿರುವ ಈ ಸನಾತನಿಗಳಿಗಾಗಿ ಪೀಠವನ್ನು ಸ್ಥಾಪಿಸುವುದೆಂದರೆ ನಾವು ತೋಡಿದ ಖೆಡ್ಡಾದಲ್ಲಿ ನಾವೆ ಬಿದ್ದು ಬಿಟ್ಟಂತೆ.</span><br style="background-color: white; color: purple;" /><span style="background-color: white; color: purple;"> ನಾಚಿಕೆ ಎಂಬುದೆ ಇಲ್ಲದ, ಯಾರ್ಯಾರಿಗೋ ತಮ್ಮ ಬುದ್ದಿಯನ್ನು ಭೀಕರಿಗಾಗಿ ಇಟ್ಟಿರುವ ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು ಮಾತ್ರ ಒಮ್ಮತದಿಂದ ಸರಕಾರದ ಮೂಲಕ ರಾಜ್ಯಪಾಲರಿಗೆ ಪೀಠ ಸ್ಥಾಪನೆಗಾಗಿ ಪ್ರಸ್ತಾವನೆ ಸಲ್ಲಿಸಿದ್ದಾರೆ ! ಸರಕಾರವೂ ಕೂಡ ಇವರ ವಾದಕ್ಕೆ ತಲೆದೂಗುತ್ತ ತನ್ನ ಖಜಾನೆಯಿಂದ ಐವತ್ತು ಲಕ್ಷ ರೂಪಾಯಿಗಳ ಮಂಜೂರಾತಿಯನ್ನೂ ಕೊಟ್ಟಿದೆ !! </span><br style="background-color: white; color: purple;" /><span style="background-color: white; color: purple;"> ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಸಿನೆಟ್ ಹಾಗೂ ಸಿಂಡಿಕೇಟ್ ಸದಸ್ಯರು ಅಂದರೆ ಅವರೆಲ್ಲ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡಿಕೊಂಡು ಹೋಗುವ ಸಮಾಜದ ಸ್ವಾಸ್ಥವನ್ನು ತಮ್ಮ ಬೌದ್ಧಿಕ ಪ್ರೌಢಿಮೆಯ ಮೂಲಕ ಬೆಳೆಸುತ್ತ ಹೊರಡುವವರು ಎಂದೆ ನಂಬಲಾಗಿತ್ತು. ಆದರೆ ಬಿಜೆಪಿಯ ಪುರೋಗಾಮಿ ಸರಕಾರ ಬಂದ ಮೇಲೆ ಯೋಗ್ಯತೆಯನ್ನು ಪಡೆದವರು ಸಿನೆಟ್- ಸಿಂಡಿಕೇಟ್ ಸದಸ್ಯರಾಗುವುದಕ್ಕಿಂತ ಬಿಜೆಪಿಯನ್ನು ಬೆಂಬಲಿಸುವವರು ವಿಶ್ವವಿದ್ಯಾಲಗಳಲ್ಲಿ ಬಂದು ಕುಂತಿದ್ದಾರೆ. ಇವರೆಲ್ಲರ ಒನ್ ಪಾಯಿಂಟ್ ಪ್ರೋಗ್ರಾಮ್ ಅಂದರೆ ಮತ್ತದೆ ಸನಾತನವಾಗಿರುವ , ಪುರಾತನವೆಂದು ಹೇಳಲಾಗುವ ಹಿಂದೂ ಸಂಸ್ಕೃತಿಯನ್ನು ಹೊಸ ಬಾಟಲಿಯಲ್ಲಿ ಕೊಡುವುದು. ಈ ಮೂಲಕ ಜನಸಾಮಾನ್ಯನ ಮುಗ್ಧ ಮನಸ್ಸುಗಳಲ್ಲಿ ಮತ್ತದೇ ಭೂಜ್ರ್ವತನದ ಬೀಜಗಳನ್ನು ಬಿತ್ತುವುದು. ಈ ಮೂಲಕ ಅವರೆಲ್ಲರನ್ನು ಕುರಿಗಳನ್ನಾಗಿ ಮಾಡುವುದು.</span><br style="background-color: white; color: purple;" /><span style="background-color: white; color: purple;"> ನಾವೆಲ್ಲರೂ ಖಂಡಿಸಲೇ ಬೇಕಾದ ಮತ್ತೊಂದು ಸಂಗತಿಯಿದೆ. </span><br style="background-color: white; color: purple;" /><span style="background-color: white; color: purple;"> ಶಿವಮೊಗ್ಗ ವಿಶ್ವವಿದ್ಯಾಲಯದ ಹೆಸರು ಕುವೆಂಪು ವಿಶ್ವವಿದ್ಯಾಲಯ. ಕುವೆಂಪು ಅವರಾದರೋ ತಾವು ಬದುಕಿರುವ ಜೀವಿತಾವಧಿಯವರೆಗೆ ವೈಚಾರಿಕರಾಗಿ ಬರೆದು ಬದುಕಿದವರು. ತಮ್ಮ ಸುತ್ತ ಮುತ್ತ ಇದ್ದ ಮೌಢ್ಯವನ್ನು, ಪುರೋಗಾಮಿ ಶಕ್ತಿಗಳು ಆಗಾಗ ಹೇಳುತ್ತ ಬಂದಿರುವ ಪಂಚಾಂಗಗಳನ್ನು, ಜೋತಿಷ್ಯರುಗಳನ್ನು ಅಮೂಲಾಗ್ರವಾಗಿ ತಿರಸ್ಕರಿಸಿದವರು. ರಾಹುಕಾಲ ಗುಳಿಕಾಲ ನೋಡುತ್ತ ಮನೆ ಬಿಟ್ಟು ಹೊರಗೆ ಬರುವ ಎಷ್ಟೋ ಜನ ವಿಶ್ವವಿದ್ಯಾಲಯಗಳ ಪ್ರೊಫೆಸರ್ಗಳನ್ನೆ ತರಾಟೆಗೆ ತೆಗೆದುಕೊಂಡವರು.ರಾಷ್ಟ್ರಕ್ಕೆ ಮಾರ್ಗದರ್ಶಕರಾಗಬೇಕಿರುವ, ಸಮಾಜದ ರೋಗ ರುಜಿನಿಗಳಿಗೆ ಮದ್ದೆರೆಯಬೇಕಾಗಿರುವ, ಸತ್ಯಾನ್ವೇಷಣೆಯೆ ಜೀವನಧ್ಯೇಹವಾಗಬೇಕಿರುವ ಸಾಹಿತಿಗಳು, ವಿಶ್ವವಿದ್ಯಾಲಯದ ಪ್ರೊಫೆಸರ್ಗಳು ಸರಕಾರದ ಸತ್ತೆಗೆ ಎಂದೂ ತಲೆಬಾಗಬೇಕಿಲ್ಲ ಎಂದು ತಿಳಿಸುತ್ತಾರೆ. ರಾಜ್ಯದಲ್ಲಿ ರಾಜಪ್ರಭುತ್ವ ಅಧಿಕಾರದಲ್ಲಿದ್ದ ದಿನಗಳಲ್ಲಿಯೆ ಅವರು ಕವಿಗರಸು ಗಿರಸುಗಳ ಋಣವಿಲ್ಲ ; ಅವನಗ್ನಿ ಮುಖಿ, ಪ್ರಲಯಶಿಖಿ ಎಂದವರು ಗುಡುಗುತ್ತಾರೆ.</span><br style="background-color: white; color: purple;" /><span style="background-color: white; color: purple;"> ಆತ್ಮಶ್ರೀಗಾಗಿ ನಿರಂಕುಶ ಮತಿಗಳಾಗಿ ಎಂಬ ತಮ್ಮ ಒಂದು ಉಪನ್ಯಾಸದಲ್ಲಿ ಯುವಕರು ನಿರಂಕುಶ ಮತಿಗಳಾಗಬೇಕು... ಮತಿ ಮಾನವನ ಸವರ್ೊತಕೃಷ್ಟ ಆಯುಧ... ಮಾಢ್ಯದಿಂದಲೂ ಮತಾಚಾರಗಳಿಂದಲೂ ಸಮಾಜ ಭೀತಿಯಿಂದಲೂ ರಾಜಭಯದಿಂದಲೂ ಸ್ವರ್ಗ ನರಕ ದೇವಾನುದೇವತೆಗಳ ಮೋಹಮಾಹೆಗಳಿಂದಲೂ ಅದು ಸತ್ವರಹಿತವಾಗಿದೆ ; ಕಾಂತಿ ಹೀನವಾಗಿದೆ. ಚಕ್ರವತರ್ಿಯಂತೆ ಸಿಂಹಾಸನದಲ್ಲಿ ಮಂಡಿಸಬೇಕಾದುದು ತೊತ್ತಾಗಿ ಕಾಲೊತ್ತಬೇಕಾಗಿದೆ. ಎಂದರೆ ಮತಿಗೆ ಅಂಕುಶಗಳು ಅತಿಯಾಗಿ ಹೋಗಿ ಜೀವವೆ ನಿಸ್ತೇಜವಾಗಿದೆ ಎಂದು ನುಡಿದು ಮತಿಯೊಂದೇ ಮಾನವನ ಬೆಳಕು ; ಅದಿಲ್ಲದವ ಮನುಷ್ಯನಾಗಲು ಸಾಧ್ಯವಿಲ್ಲ. ಅದು ವಿಚಾರಗಳೆ ಇಲ್ಲದೆ ಜಡವಸ್ತು ಮಾತ್ರ ಆಗಬಲ್ಲುದು ಎಂದು ಅವರು ಅಭಿಪ್ರಾಯ ಪಡುತ್ತಾರೆ.</span><br style="background-color: white; color: purple;" /><span style="background-color: white; color: purple;"> ಮತ ನಮಗೊಂದು ದೊಡ್ಡ ಬಂಧನವಾಗಿದೆ ; ನಾಡಿನ ಏಳ್ಗೆಗೆ ಕುತ್ತಿಗೆ ಉರುಳಾಗಿದೆ. ಪರಮಶಾಂತಿಯೂ ಪರಮಾನಂದವೂ ಆಗಿರುವ ಪರಮೇಶ್ವರನನ್ನು ಪಡೆಯಲೆಂದು ಜೀವ ಮಾಡುವ ಪ್ರಯತ್ನವೇ ಮತದ ನಿಜಾವಸ್ಥೆ. ಆದರೆ ಈಗ ನಾವು ಮತ ಎಂದು ಕರೆದುಕೊಳ್ಳುವ ಆಚಾರ ಸಮೂಹ ಬರಿಯ ಸಾಮಾಜಿಕವಾದ ಕಟ್ಟುಕಟ್ಟಳೆಗಳ ಕಾಟವಾಗಿದೆ. ಒಬ್ಬರೊನೊಬ್ಬರು ಮುಟ್ಟದಿರುವುದು, ನೋಡದಿರುವುದು ; ಒಬ್ಬರೊಡನೊಬ್ಬರು ಕುಳಿತು ಭೋಜನ ಮಾಡದಿರುವುದು ; ನಾಮ ಹಾಕಿಕೊಳ್ಳುವುದು; ವಿಭೂತಿ ಹಚ್ಚಿಕೊಳ್ಳುವುದು, ಮುದ್ರೆ ಹೊಡೆದುಕೊಳ್ಳುವುದು, ಶಿಲುಬೆ ಧರಿಸಿಕೊಳ್ಳುವುದು , ಕೆಲವರನ್ನು ಸಾರ್ವಜನಿಕವಾದ ಬಾವಿ ಕರೆಗಳಲ್ಲಿ ನೀರು ತೆಗೆದುಕೊಳ್ಳುವಂತೆ ಮಾಡುವುದು ; ಕೆಲವರನ್ನು ದೇವಸ್ಥಾನಗಳಿಗೆ ಸೇರಿಸದಿರುವುದು... ಇತ್ಯಾದಿ ಮತಾಚರಣೆಗಳನ್ನವರು ಖಂಡಿಸುತ್ತಾರೆ. </span><br style="background-color: white; color: purple;" /><span style="background-color: white; color: purple;"> ಈ ಪಂಚಾಚಾರ್ಯರ ಜಗದ್ಗುರುಗಳಾದರೋ ಇದಕ್ಕಿಂತ ಒಂದು ಹೆಜ್ಜೆ ಮುಂದೆ ಎನ್ನುವಂತೆ ಇವತ್ತಿನ ದಿನಮಾನಗಳಲ್ಲೂ ಅಡ್ಡಪಲ್ಲಕ್ಕಿಯ ಜೀವವಿರೋಧಿ ಕೃತ್ಯಗಳಲ್ಲಿ ವಿರಾಜಮಾನರಾಗುತ್ತಾರೆ. ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಲೆ ಮಾನವ ಧರ್ಮಕ್ಕೆ ಜಯವಾಗಲಿ ಎಂದು ಸಾರಿಕೊಂಡು ಬರುತ್ತಾರೆ. ತಾವು ಬಂಗಾರದ ಕಿರೀಟ ಧರಿಸಿ,ಭವ್ಯವಾದ ಮೆರವಣಿಗೆ ಹೊರಟರೆ ತಮ್ಮ ಅನುಯಾಯಿಗಳ ಬಾಳೂ ಬಂಗಾರವಾಗುತ್ತದೆ ಎಂದು ಭ್ರಮಿಸುತ್ತಾರೆ. ತಮ್ಮ ಬಲಗೈಯನ್ನು ಮೇಲೆತ್ತಿ ಆಶರ್ೀವಾದ ಮಾಡಿದರೆ ತಮ್ಮ ಶಿಷ್ಯನಿಗೆ ಒಳ್ಳೆಯದಾಗುತ್ತದೆ, ಬದಲಾಗಿ ಮನಸ್ಸಿನಲ್ಲಿಯೆ ಆ ಶಿಷ್ಯನನ್ನು ಹಳಿದರೆ ಕೆಟ್ಟದ್ದು ಘಟಿಸುತ್ತದೆ ಎಂದು ವಿವರಿಸುತ್ತಾರೆ. ತಾವು ಗುರುಗಳಾದ್ದರಿಂದ ಎಲ್ಲರಿಗಿಂತಲೂ ಒಂದು ಫೀಟೋ - ಎರಡು ಫೀಟೋ ಎತ್ತರದ ಸಿಂಹಾಸನವೇ ಬೇಕೆಂದು ಹಂಬಲಿಸುತ್ತಾರೆ. ಇಂದಿನ ಪ್ರಜಾಪ್ರಭುತ್ವದ ದಿನಗಳಲ್ಲಿಯೂ ರಾಜ್ಯಪಾಲರೆ ಇರಲಿ ರಾಷ್ಟ್ರಪತಿಗಳೆ ಇರಲಿ ಅವರೆಲ್ಲರಿಗಿಂತಲೂ ತಾವು ಹೆಚ್ಚು ಎಂದೆ ಭ್ರಮಿಸಿಕೊಂಡು ಭ್ರಮಾಲೋಕದಲ್ಲಿದ್ದಾರೆ.</span><br style="background-color: white; color: purple;" /><span style="background-color: white; color: purple;"> ಹೀಗೆ ತೀರಾ ಅವೈಜ್ಞಾನಿಕ ಮನೋಭಾವದ, ಮಾನವ ಹಕ್ಕುಗಳ ಉಲ್ಲಂಘಿಸುತ್ತ ನಡೆದಿರುವ, ಪ್ರಜಾಪ್ರಭುತ್ವ ವಿರೋಧಿ ನಿಲುವುಗಳಿರುವ ದಲಿತರ- ದಮನಿತರ ಶೋಷಣೆಯೆ ತಮ್ಮ ಗುರಿಯೆಂದು ಸಾರಿಕೊಂಡು ಬಂದಿರುವ ಜಗದ್ಗುರುಗಳ ಪೀಠವನ್ನು ಅದೂ ಕುವೆಂಪು ವಿಶ್ವವಿದ್ಯಾಲಯದ ಮೂಲಕ ಸ್ಥಾಪಿಸುವುದೆಂದರೆ ಒಂದೆ ಏಟಿಗೆ ಕುವೆಂಪು ಹಾಗೂ ಪ್ರಜಾಪ್ರಭುತ್ವ ತತ್ವಗಳಿಗೆ ಎಳ್ಳು ನೀರು ಬಿಟ್ಟಂತೆ ಎಂದೆ ಅರ್ಥ.</span><br style="background-color: white; color: purple;" /><span style="background-color: white; color: purple;"> ಯಾವ ಕಾಲದ ಶಾಶ್ತ್ರವೇನು ಹೇಳಿದರೇನು ?</span><br style="background-color: white; color: purple;" /><span style="background-color: white; color: purple;"> ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು ?</span><br style="background-color: white; color: purple;" /><span style="background-color: white; color: purple;"> ಎಂದೋ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು ?</span><br style="background-color: white; color: purple;" /><span style="background-color: white; color: purple;">ಎಂಬ ಕುವೆಂಪು ವಾಕ್ಯವನ್ನು ಮತ್ತೆ ಮತ್ತೆ ನೆನಪಿಸುತ್ತ, ಮನುವಿನ ಮೊಮ್ಮಕ್ಕಳಾದ ಜಗದ್ಗುರುಗಳ ಪೀಠ ಸ್ಥಾಪನೆಯನ್ನು ರಾಜ್ಯಪಾಲರು ತಿರಸ್ಕರಿಸುವ ಮೂಲಕ ಪ್ರಜಾಪ್ರಭುತ್ವದ ರಕ್ಷಣೆ ಮಾಡಲೇಬೇಕಾಗಿದೆ. ಮತಮೌಢ್ಯ, ಕುರುಡು ನಂಬಿಕೆಯನ್ನು ಇತ್ಯಾದಿಯನ್ನು ಪರಿಪೋಷಿಸುವುದು ಬೆಳೆಸುವುದು, ಘೋರ ಅಪರಾಧವೆಂದು ನಮ್ಮ ಸಂವಿಧಾನದ 51/1 ಎಂಬ ಪರಿಚ್ಚೇದ ಹೇಳುತ್ತದೆ. ಇದನ್ನಾದರೂ ನಮ್ಮ ರಾಜ್ಯಪಾಲರು ತಮ್ಮ ಗಮನಕ್ಕೆ ತಂದುಕೊಳ್ಳುವರೆ ಕಾದು ನೋಡಬೇಕು.</span><br style="background-color: white; color: purple;" /><span style="background-color: white; color: purple;">0 ವಿಶ್ವಾರಾಧ್ಯ ಸತ್ಯಂಪೇಟೆ</span><br style="background-color: white; color: purple;" /><span style="background-color: white; color: purple;">satyampet1969@gmail.com</span>Unknownnoreply@blogger.com0tag:blogger.com,1999:blog-2647129451779812999.post-59214024789308168542010-05-19T05:21:00.000-07:002010-05-19T05:29:12.420-07:00ಶಿವಮೊಗ್ಗದಲ್ಲಿರುವ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪಂಚಾಚಾರ್ಯರ ಅಧ್ಯಯನ ಪೀಠಇದು ನಿಜಕ್ಕೂ ಕನ್ನಡಿಗರೆಲ್ಲರೂ ತಲೆ ತಗ್ಗಿಸಲೇಬೇಕಾದ ಸಂಗತಿ. ಕನಾೃಟಕದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಯಡಿಯೂರಪ್ಪನವರಿಗೆ ತಲೆ ಸರಿ ಇದ್ದಂತೆ ಕಾಣುತ್ತಿಲ್ಲ. ಆಥವಾ ಅವರ ತಲೆಯಲ್ಲಿ ತುಂಬಿರುವುದು ಬರೀ ಗೊಬ್ಬರ ಎಂದು ಹೇಳಬಹುದು.Unknownnoreply@blogger.com0tag:blogger.com,1999:blog-2647129451779812999.post-12243972196721141292010-05-18T06:03:00.000-07:002010-05-18T06:08:43.072-07:00ಬಸವ ಮಾರ್ಗನಿಜವಾದ ಬಸವ ಜಯಂತಿಯನ್ನು ಆಚರಣೆ ಮಾಡುವವರು ಒಂದು ಎಚ್ಚರವನ್ನು ಸದಾ ಇಟ್ಟುಕೊಳ್ಳಬೇಕು. ಬಸವಣ್ಣನವರ ಹುಟ್ಟಿದ ದಿನವನ್ನು ಕೇವಲ ಆತನ ಫೋಟೋ ಮೆರವಣಿಗೆ ಮೂಲಕ ಆಚರಿಸಿದರೆ ಸಾಲದು. ಕಾಯಕವೇ ಕೈಲಾಸವೆಂದು ಹೇಳಿದ ಬಸವಣ್ಣನವರ ಮಾತಿನಂತೆ ನಾವು ಸದಾ ಕೆಲಸದಲ್ಲಿ ನಿರತರಾಗಿರಬೇಕು. ಆ ಕಾಯಕ ಕೂಡ ಸತ್ಯ ಶುದ್ಧವಾದ ಕಾಯಕವಾಗಿರಬೇಕು. ಈ ಕಾಯಕದಿಂದ ಬಂದ ಹಣವನ್ನು ಸಂಸಾರಕ್ಕೆ ಬಳಸಿಕೊಳ್ಳುವುದರ ಜೊತೆಗೆ ಉಳಿದ ಹಣವನ್ನು ದಾಸೋಹಕ್ಕೂ ಬಳಸಬೇಕು. ಮತ್ತೊಂದು ಸಂಗತಿಯೆಂದರೆ ದಾಸೋಹ ಮಾಡುತ್ತಿದ್ದೇನೆ ಎಂಬ ಅಹಂ ಕೂಡ ನಮಗೆ ಬಂದಿರಬಾರದು.Unknownnoreply@blogger.com0